ಆ್ಯಪ್ನಗರ

'ಯುಪಿಎಸ್ಸಿ'ಯನ್ನೇ ಜಯಿಸಿದ ಕಣ್ಣೇ ಕಾಣದ ವಿದ್ಯಾರ್ಥಿನಿ 'ಮೇಘನಾ ಕೆ.ಟಿ.'

ದೃಷ್ಟಿ ದೋಷ ಹೊಂದಿರುವ ವಿದ್ಯಾರ್ಥಿನಿ ಮೇಘನಾ ಕೆ.ಟಿ. ಅವರು ಕೇಂದ್ರ ಲೋಕ ಸೇವಾ ಆಯೋಗ' (ಯುಪಿಎಸ್‌ಸಿ) ನಡೆಸುವ ಸಿವಿಲ್‌ ಸರ್ವೀಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಅಖಿಲ ಭಾರತ 465ನೇ ರ‍್ಯಾಂಕ್ ಪಡೆದಿದ್ದಾರೆ. ​

Vijaya Karnataka Web 4 Aug 2020, 7:14 pm
ಬೆಂಗಳೂರು: ಹಿಡಿದ ಕೆಲಸಕ್ಕೆ ಕೊಂಚ ಅಡತಡೆ ಬಂದರೂ ಅದನ್ನೇ ನೆಪಮಾಡಿ ಆ ಕೆಲಸವನ್ನು ಅಲ್ಲಿಗೇ ನಿಲ್ಲಿಸುತ್ತಾರೆ. ಈ ಮನೋಭಾವ ಸಿವಿಲ್‌ ಸರ್ವೀಸ್‌ ಪರೀಕ್ಷೆಗೆ ತಯಾರಾಗುವವರಲ್ಲಿ ಹೆಚ್ಚೆಂದೇ ಹೇಳಬಹುದು. ಆದರೆ, ದೃಷ್ಟಿ ದೋಷ ಹೊಂದಿರುವ ವಿದ್ಯಾರ್ಥಿನಿ ಮೇಘನಾ ಕೆ.ಟಿ. ಅವರು ಕೇಂದ್ರ ಲೋಕ ಸೇವಾ ಆಯೋಗ' (ಯುಪಿಎಸ್‌ಸಿ) ನಡೆಸುವ ಸಿವಿಲ್‌ ಸರ್ವೀಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಅಖಿಲ ಭಾರತ 465ನೇ ರ‍್ಯಾಂಕ್ ಪಡೆದಿದ್ದಾರೆ.
Vijaya Karnataka Web meghana kt


ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಗೆಜೆಟೆಡ್‌ ಪ್ರೊಬೇಷನರಿ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದರು. ಕಣ್ಣು ಕಾಣದಿದ್ದರೂ, ಇವರು ಪರೀಕ್ಷೆಗೆ ಓದಿದ್ದು ಹೇಗೆ? ಪರೀಕ್ಷೆ ಬರೆದಿದ್ದು ಹೇಗೆ? ಸಂದರ್ಶನ ನೀಡಿದ್ದು ಹೇಗೆ? ಹೀಗೆ ಹಲವಾರು ಕುತೂಹಲಕಾರಿ ಪ್ರಶ್ನೆಗಳು ಮೂಡುತ್ತವೆ. ಮೇಘನಾ ಅವರು ತಮ್ಮ ಪರೀಕ್ಷಾ ತಯಾರಿ ಕುರಿತ ಅನುಭವಗಳನ್ನು ವಿಜಯ ಕರ್ನಾಟಕದೊಂದಿಗೆ ಹಂಚಿಕೊಂಡಿದ್ದಾರೆ. ಮೇಘನಾ ಅವರ ವಿಶೇಷ ಸಂದರ್ಶನ ಇಲ್ಲಿದೆ.

2019ರ ಯುಪಿಎಸ್‌ಸಿ ಅಂತಿಮ ಫಲಿತಾಂಶ ಪ್ರಕಟ: ಈ ಬಾರಿಯ ಟಾಪರ್‌ ಯಾರು?

ಇವರ ತಯಾರಿಯ ಶ್ರಮದ ಹಾದಿ ಹೇಗಿತ್ತು?
ದೃಢವಾದ ಸಂಕಲ್ಪ ಇದ್ದರೆ, ಯಾವುದೇ ಸವಾಲುಗಳು ಇದ್ದರೂ ಗುರಿ ತಲುಪಬಹುದು ಎನ್ನುತ್ತಾರೆ ಮೇಘನಾ! ಓದುವ ಛಲ ಇದ್ದರೆ ಹೇಗಾದರೂ ಓದಬಹುದು. ಜಾಬ್‌ ಅಕ್ಸೆಸ್‌ ವಿಥ್‌ ಸ್ಪೀಚ್ (ಜಾಸ್‌) ಎಂಬ ಸಾಫ್ಟ್‌ವೇರ್‌ ಸಹಾಯದಿಂದ ಇವರು ಪರೀಕ್ಷೆ ತಯಾರಿ ನಡೆಸಿದ್ದಾರೆ. ಇದೊಂದು ಸತತ ಪ್ರಯತ್ನವಾಗಿದ್ದು, ಸಾಕಷ್ಟು ಪರಿಶ್ರಮ ವಹಿಸಬೇಕಿದೆ. ಯುಪಿಎಸ್‌ಸಿ ಪರೀಕ್ಷೆಯು ಸುದೀರ್ಘ ಪ್ರಕ್ರಿಯೆಯಾಗಿದೆ. ಪರೀಕ್ಷೆಯ ಮೂರೂ ಹಂತಗಳಾದ ಪ್ರಿಲಿಮ್ಸ್‌, ಮೇನ್ಸ್ ಹಾಗೂ ಸಂದರ್ಶನ ಹಂತಗಳಿಗೆ ವಿಭಿನ್ನವಾದ ತಯಾರಿ ನಡೆಸಬೇಕಿದೆ.

ಯುಪಿಎಸ್ಸಿ ರಿಸಲ್ಟ್‌ 2019: ಈ ಬಾರಿ ಕರ್ನಾಟಕದಿಂದ 40 ಅಭ್ಯರ್ಥಿಗಳು ಆಯ್ಕೆ!

ಪರೀಕ್ಷೆ ಬರೆದಿದ್ದು ಹೇಗೆ?
ಅಂಧ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸ್ಕ್ರೈಬ್‌ ಫೆಸಿಲಿಟಿ ಲಭ್ಯವಿದೆ. ಅಂದರೆ, ಬೇರೊಬ್ಬರ ಸಹಾಯ ಪಡೆದು ಪರೀಕ್ಷೆ ಬರೆಯಬಹುದಾಗಿದೆ. ಪರೀಕ್ಷೆ ಬರೆಯಲು ಯುಪಿಎಸ್‌ಸಿಯೇ ಯಾರನ್ನಾದರೂ ನೇಮಿಸುತ್ತದೆ. ಅಥವಾ, ನಾವೇ ಯಾರನ್ನಾದರೂ ಕರೆದುಕೊಂಡು ಹೋಗಬಹುದು. ಆದರೆ, ಅವರು ಪದವಿಯನ್ನು ಪೂರ್ಣಗೊಳಿಸಿರಬಾರದು. ಕೆಪಿಎಸ್ಸಿಯಲ್ಲಿ ಪ್ರತಿ ಗಂಟೆಗೆ ಹೆಚ್ಚುವರಿಯಾಗಿ 10 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಯುಪಿಎಸ್‌ಸಿಯಲ್ಲಿ ಪ್ರತಿ ನಿಮಿಷಕ್ಕೆ 20 ನಿಮಿಷ ಕಾಲಾವಕಾಶ ನೀಡಲಾಗುತ್ತದೆ ಎನ್ನುತ್ತಾರೆ ಮೇಘನಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ