ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಮೂಡಿರುವ ಒಡಕಿಗೆ ತೇಪೆ ಹಾಕಿ, ಒಗ್ಗಟ್ಟು ಮೂಡಿಸುವ ಚಿಂತೆಯಲ್ಲಿ ಎಐಸಿಸಿ ವರಿಷ್ಠರು ಮುಳುಗಿದ್ದರೆ, ಇತ್ತ ಮೂಲ ಮತ್ತು ವಲಸಿಗರ ಜಟಾಪಟಿಯೊಂದಿಗೆ ಪಕ್ಷದಲ್ಲಿ ಬಿರುಕು ವಿಸ್ತಾರಗೊಂಡಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸ್ಸಿಗ ಹಿರಿಯರು ಬಹಿರಂಗವಾಗೇ ಧ್ವನಿ ಏರಿಸಿದ್ದಾರೆ.
ಪಕ್ಷದ ಮೇಲೆ ಹಿಡಿತ ಮುಂದುವರಿಸಲು ಸಿದ್ದರಾಮಯ್ಯ ಅವರು ಕೆಪಿಸಿಸಿ ನೂತನ ಸಾರಥಿ ಆಯ್ಕೆಗೆ ಅಡ್ಡಿಯಾಗಿದ್ದಾರೆ ಎಂಬ ಹಿರಿಯರ ಅಸಹನೆ ಹೆಚ್ಚಲಾರಂಭಿಸಿದೆ. ಮೊದಲಿಗೆ, ಮಲ್ಲಿಕಾರ್ಜುನ ಖರ್ಗೆ, ಬಳಿಕ ಡಾ.ಜಿ. ಪರಮೇಶ್ವರ್ ನಂತರ, ಮಂಗಳವಾರ ಕೆ.ಎಚ್.ಮುನಿಯಪ್ಪ ಹಾಗೂ ಎಚ್.ಕೆ.ಪಾಟೀಲ್ ಒಂದೇ ಧಾಟಿಯಲ್ಲಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಟ್ಟುಕೊಂಡು ಅಸಹನೆ ಹೊರಹಾಕಿದ್ದಾರೆ. ಪ್ರತಿಪಕ್ಷ ನಾಯಕ ಹಾಗೂ ಸಿಎಲ್ಪಿ ನಾಯಕ ಹುದ್ದೆ ಪ್ರತ್ಯೇಕಿಸುವ ಅಗತ್ಯವನ್ನು ಹಿರಿಯರು ಬಹಿರಂಗವಾಗೇ ಬಲವಾಗಿ ಪ್ರತಿಪಾದಿಸುವ ಮೂಲಕ ಸಿದ್ದರಾಮಯ್ಯ ವಿರುದ್ಧ ಧ್ವನಿ ಎತ್ತಿದ್ದಾರೆ.
ಸಿಎಲ್ಪಿ ಮತ್ತು ಪ್ರತಿಪಕ್ಷ ನಾಯಕ ಹುದ್ದೆಗಳು ಒಟ್ಟಿಗೇ ಇರಬೇಕು. ಒಬ್ಬರೇ ನಾಯಕ ಇರಬೇಕು. ವಿಭಜನೆ ಒಪ್ಪಲಾಗದು ಎಂಬ ಸಿದ್ದರಾಮಯ್ಯ ಪ್ರತಿಪಾದನೆ ವಿರುದ್ಧ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಕೆಂಡಾಮಂಡಲವಾಗಿದ್ದಾರೆ.
ಬಗೆಹರಿದಿಲ್ಲ ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ಕಸರತ್ತು; ಗೊಂದಲದಲ್ಲಿ ‘ಕೈ’ ಹೈಕಮಾಂಡ್
14 ವರ್ಷ ಅಧಿಕಾರ ಸಾಕಲ್ಲವೇ?
ಪ್ರತಿಪಕ್ಷ ಮತ್ತು ಸಿಎಲ್ಪಿ ವಿಭಜನೆ ಬೇಡ ಎಂಬ ಸಿದ್ದರಾಮಯ್ಯ ವಾದವನ್ನು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರೂ ತೀವ್ರವಾಗಿ ವಿರೋಧಿಸಿದ್ದಾರೆ. ಮಂಗಳವಾರ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘‘ಸಿದ್ದರಾಮಯ್ಯ ಅವರು ಕಾಂಗ್ರೆಸ್ಗೆ ಬಂದು 14 ವರ್ಷಗಳಾಗಿವೆ. ಆರಂಭದಿಂದ ಇವತ್ತಿನವರೆಗೆ ಅವರಿಗೆ ನಿರಂತರ ಅಧಿಕಾರ, ಸ್ಥಾನಮಾನ ಸಿಕ್ಕಿವೆ. ಸಿದ್ದರಾಮಯ್ಯ ಅವರಿಗಿಂತ ಹಿರಿಯರಾದ 40 ವರ್ಷಗಳಿಂದ ಪಕ್ಷಕ್ಕೆ ದುಡಿದವರಿಗೂ ಅಷ್ಟೊಂದು ಅವಕಾಶಗಳು ಸಿಕ್ಕಿಲ್ಲ’’ಎಂದು ನೇರವಾಗಿಯೇ ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರು ಇಬ್ಬರೋ, ನಾಲ್ವರೋ ? ಡಿಕೆಶಿ ಹೈಕಮಾಂಡ್ ಮುಂದಿಟ್ಟ ಶರತ್ತು ಹೀಗಿದೆ
‘‘ಸಿಎಲ್ಪಿ ಮತ್ತು ಪ್ರತಿಪಕ್ಷ ನಾಯಕ ಹುದ್ದೆ ಪ್ರತ್ಯೇಕಿಸುವುದು ಸೂಕ್ತ. ಪಕ್ಷದಲ್ಲಿ ಹಲವು ಹಿರಿಯ ನಾಯಕರಿದ್ದಾರೆ. ಅಧಿಕಾರ ಮತ್ತು ಜವಾಬ್ದಾರಿಗಳು ಎಲ್ಲರ ನಡುವೆ ಹಂಚಿಕೆಯಾಗಬೇಕು ಮತ್ತು ಆಗ ಮಾತ್ರವೇ ಪಕ್ಷ ಕಟ್ಟಲು ಸಾಧ್ಯ. ಎಐಸಿಸಿ ವರಿಷ್ಠರ ಬಳಿಯೂ ಈ ಮಾತು ಹೇಳಿದ್ದೇನೆ’’ಎಂದು ಮುನಿಯಪ್ಪ ಸ್ಪಷ್ಟಪಡಿಸಿದರು.
ವಿಪಕ್ಷ ನಾಯಕ, ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಒಬ್ಬರೇ ಏಕೆ..? ಸಿದ್ದುಗೆ ಪರಂ ಗುದ್ದು..!
ನಾನೂ ಆಕಾಂಕ್ಷಿ
‘‘ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೂ ಕೂಡ ಆಕಾಂಕ್ಷಿ. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸಂಬಂಧ ರಾಜ್ಯಕ್ಕೆ ಆಗಮಿಸಿದ್ದ ಎಐಸಿಸಿ ವೀಕ್ಷಕರ ಮುಂದೆ ಹಲವು ನಾಯಕರು ನನ್ನ ಪರ ಅಭಿಪ್ರಾಯ ನೀಡಿದ್ದಾರೆ. ಈ ವರದಿ ಆಧಾರದ ಮೇಲೆ ಅಧ್ಯಕ್ಷರ ನೇಮಕ ಆಗಲಿದೆ. ಪಕ್ಷ ಸಂಘಟನೆ ಬಲಪಡಿಸುವುದು ನಮ್ಮ ಮೂಲ ಉದ್ದೇಶವಾಗಬೇಕು ಮತ್ತು ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ಕುಳಿತುಕೊಳ್ಳುವವರು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನಗಳನ್ನು ಮಾಡುವಂತಾಗಬೇಕು. ಹೆಚ್ಚು ಕಾರ್ಯಾಧ್ಯಕ್ಷರ ನೇಮಕದಿಂದ ತೊಂದರೆ ಏನಿಲ್ಲ’’ಎಂದರು.
ವಿಭಜನೆಗೆ ಎಚ್ಕೆಪಿ ಪ್ರತಿಪಾದನೆ
ವಿಧಾನಸೌಧದಲ್ಲಿ ಮಂಗಳವಾರ ಮಾತನಾಡಿದ ಎಚ್.ಕೆ.ಪಾಟೀಲ್ ‘‘ಶಾಸಕಾಂಗ ಪಕ್ಷ, ಪ್ರತಿಪಕ್ಷ ನಾಯಕ ಎರಡೂ ಸ್ಥಾನಗಳನ್ನು ಪ್ರತ್ಯೇಕಗೊಳಿಸಬೇಕು’’ಎಂದು ಬಲವಾಗಿ ಪ್ರತಿಪಾದಿಸಿದರು. ‘‘ಯುಪಿಎ ಅವಧಿಯಲ್ಲಿ ಸಂಸತ್ನಲ್ಲಿ ಪ್ರತಿ ಪಕ್ಷ ನಾಯಕ ಸ್ಥಾನ ಮತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿದ್ದವು. ಈ ಹಿಂದೆ ರಾಜ್ಯದಲ್ಲೂ ಮೈತ್ರಿ ಸರಕಾರದ ಅವಧಿಯಲ್ಲೂ ಈ ಎರಡು ಹುದ್ದೆಗಳು ಬೇರೆಬೇರೆಯಾಗಿದ್ದವು’’ಎಂದು ತಮ್ಮ ವಾದಕ್ಕೆ ಸಮರ್ಥನೆಯನ್ನೂ ನೀಡಿದರು.
4 ಕಾರ್ಯಾಧ್ಯಕ್ಷ ಹುದ್ದೆಗಳ ಸೃಷ್ಟಿ ಪ್ರಸ್ತಾಪವನ್ನು ವಿರೋಧಿಸಿದ ಅವರು ‘‘ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಹಾಲಿ ಒಬ್ಬ ಕಾರ್ಯಾಧ್ಯಕ್ಷರು ಸಾಕು. ನಾಲ್ಕು ಮಂದಿ ಕಾರ್ಯಾಧ್ಯಕ್ಷರ ಅಗತ್ಯವೇನಿದೆ’’ ಎಂದು ಪ್ರಶ್ನಿಸಿದರು.
ಪಕ್ಷದ ಮೇಲೆ ಹಿಡಿತ ಮುಂದುವರಿಸಲು ಸಿದ್ದರಾಮಯ್ಯ ಅವರು ಕೆಪಿಸಿಸಿ ನೂತನ ಸಾರಥಿ ಆಯ್ಕೆಗೆ ಅಡ್ಡಿಯಾಗಿದ್ದಾರೆ ಎಂಬ ಹಿರಿಯರ ಅಸಹನೆ ಹೆಚ್ಚಲಾರಂಭಿಸಿದೆ. ಮೊದಲಿಗೆ, ಮಲ್ಲಿಕಾರ್ಜುನ ಖರ್ಗೆ, ಬಳಿಕ ಡಾ.ಜಿ. ಪರಮೇಶ್ವರ್ ನಂತರ, ಮಂಗಳವಾರ ಕೆ.ಎಚ್.ಮುನಿಯಪ್ಪ ಹಾಗೂ ಎಚ್.ಕೆ.ಪಾಟೀಲ್ ಒಂದೇ ಧಾಟಿಯಲ್ಲಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಟ್ಟುಕೊಂಡು ಅಸಹನೆ ಹೊರಹಾಕಿದ್ದಾರೆ. ಪ್ರತಿಪಕ್ಷ ನಾಯಕ ಹಾಗೂ ಸಿಎಲ್ಪಿ ನಾಯಕ ಹುದ್ದೆ ಪ್ರತ್ಯೇಕಿಸುವ ಅಗತ್ಯವನ್ನು ಹಿರಿಯರು ಬಹಿರಂಗವಾಗೇ ಬಲವಾಗಿ ಪ್ರತಿಪಾದಿಸುವ ಮೂಲಕ ಸಿದ್ದರಾಮಯ್ಯ ವಿರುದ್ಧ ಧ್ವನಿ ಎತ್ತಿದ್ದಾರೆ.
ಸಿಎಲ್ಪಿ ಮತ್ತು ಪ್ರತಿಪಕ್ಷ ನಾಯಕ ಹುದ್ದೆಗಳು ಒಟ್ಟಿಗೇ ಇರಬೇಕು. ಒಬ್ಬರೇ ನಾಯಕ ಇರಬೇಕು. ವಿಭಜನೆ ಒಪ್ಪಲಾಗದು ಎಂಬ ಸಿದ್ದರಾಮಯ್ಯ ಪ್ರತಿಪಾದನೆ ವಿರುದ್ಧ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಕೆಂಡಾಮಂಡಲವಾಗಿದ್ದಾರೆ.
ಬಗೆಹರಿದಿಲ್ಲ ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ಕಸರತ್ತು; ಗೊಂದಲದಲ್ಲಿ ‘ಕೈ’ ಹೈಕಮಾಂಡ್
14 ವರ್ಷ ಅಧಿಕಾರ ಸಾಕಲ್ಲವೇ?
ಪ್ರತಿಪಕ್ಷ ಮತ್ತು ಸಿಎಲ್ಪಿ ವಿಭಜನೆ ಬೇಡ ಎಂಬ ಸಿದ್ದರಾಮಯ್ಯ ವಾದವನ್ನು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರೂ ತೀವ್ರವಾಗಿ ವಿರೋಧಿಸಿದ್ದಾರೆ. ಮಂಗಳವಾರ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘‘ಸಿದ್ದರಾಮಯ್ಯ ಅವರು ಕಾಂಗ್ರೆಸ್ಗೆ ಬಂದು 14 ವರ್ಷಗಳಾಗಿವೆ. ಆರಂಭದಿಂದ ಇವತ್ತಿನವರೆಗೆ ಅವರಿಗೆ ನಿರಂತರ ಅಧಿಕಾರ, ಸ್ಥಾನಮಾನ ಸಿಕ್ಕಿವೆ. ಸಿದ್ದರಾಮಯ್ಯ ಅವರಿಗಿಂತ ಹಿರಿಯರಾದ 40 ವರ್ಷಗಳಿಂದ ಪಕ್ಷಕ್ಕೆ ದುಡಿದವರಿಗೂ ಅಷ್ಟೊಂದು ಅವಕಾಶಗಳು ಸಿಕ್ಕಿಲ್ಲ’’ಎಂದು ನೇರವಾಗಿಯೇ ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರು ಇಬ್ಬರೋ, ನಾಲ್ವರೋ ? ಡಿಕೆಶಿ ಹೈಕಮಾಂಡ್ ಮುಂದಿಟ್ಟ ಶರತ್ತು ಹೀಗಿದೆ
‘‘ಸಿಎಲ್ಪಿ ಮತ್ತು ಪ್ರತಿಪಕ್ಷ ನಾಯಕ ಹುದ್ದೆ ಪ್ರತ್ಯೇಕಿಸುವುದು ಸೂಕ್ತ. ಪಕ್ಷದಲ್ಲಿ ಹಲವು ಹಿರಿಯ ನಾಯಕರಿದ್ದಾರೆ. ಅಧಿಕಾರ ಮತ್ತು ಜವಾಬ್ದಾರಿಗಳು ಎಲ್ಲರ ನಡುವೆ ಹಂಚಿಕೆಯಾಗಬೇಕು ಮತ್ತು ಆಗ ಮಾತ್ರವೇ ಪಕ್ಷ ಕಟ್ಟಲು ಸಾಧ್ಯ. ಎಐಸಿಸಿ ವರಿಷ್ಠರ ಬಳಿಯೂ ಈ ಮಾತು ಹೇಳಿದ್ದೇನೆ’’ಎಂದು ಮುನಿಯಪ್ಪ ಸ್ಪಷ್ಟಪಡಿಸಿದರು.
ವಿಪಕ್ಷ ನಾಯಕ, ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಒಬ್ಬರೇ ಏಕೆ..? ಸಿದ್ದುಗೆ ಪರಂ ಗುದ್ದು..!
ನಾನೂ ಆಕಾಂಕ್ಷಿ
‘‘ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೂ ಕೂಡ ಆಕಾಂಕ್ಷಿ. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸಂಬಂಧ ರಾಜ್ಯಕ್ಕೆ ಆಗಮಿಸಿದ್ದ ಎಐಸಿಸಿ ವೀಕ್ಷಕರ ಮುಂದೆ ಹಲವು ನಾಯಕರು ನನ್ನ ಪರ ಅಭಿಪ್ರಾಯ ನೀಡಿದ್ದಾರೆ. ಈ ವರದಿ ಆಧಾರದ ಮೇಲೆ ಅಧ್ಯಕ್ಷರ ನೇಮಕ ಆಗಲಿದೆ. ಪಕ್ಷ ಸಂಘಟನೆ ಬಲಪಡಿಸುವುದು ನಮ್ಮ ಮೂಲ ಉದ್ದೇಶವಾಗಬೇಕು ಮತ್ತು ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ಕುಳಿತುಕೊಳ್ಳುವವರು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನಗಳನ್ನು ಮಾಡುವಂತಾಗಬೇಕು. ಹೆಚ್ಚು ಕಾರ್ಯಾಧ್ಯಕ್ಷರ ನೇಮಕದಿಂದ ತೊಂದರೆ ಏನಿಲ್ಲ’’ಎಂದರು.
ವಿಭಜನೆಗೆ ಎಚ್ಕೆಪಿ ಪ್ರತಿಪಾದನೆ
ವಿಧಾನಸೌಧದಲ್ಲಿ ಮಂಗಳವಾರ ಮಾತನಾಡಿದ ಎಚ್.ಕೆ.ಪಾಟೀಲ್ ‘‘ಶಾಸಕಾಂಗ ಪಕ್ಷ, ಪ್ರತಿಪಕ್ಷ ನಾಯಕ ಎರಡೂ ಸ್ಥಾನಗಳನ್ನು ಪ್ರತ್ಯೇಕಗೊಳಿಸಬೇಕು’’ಎಂದು ಬಲವಾಗಿ ಪ್ರತಿಪಾದಿಸಿದರು. ‘‘ಯುಪಿಎ ಅವಧಿಯಲ್ಲಿ ಸಂಸತ್ನಲ್ಲಿ ಪ್ರತಿ ಪಕ್ಷ ನಾಯಕ ಸ್ಥಾನ ಮತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿದ್ದವು. ಈ ಹಿಂದೆ ರಾಜ್ಯದಲ್ಲೂ ಮೈತ್ರಿ ಸರಕಾರದ ಅವಧಿಯಲ್ಲೂ ಈ ಎರಡು ಹುದ್ದೆಗಳು ಬೇರೆಬೇರೆಯಾಗಿದ್ದವು’’ಎಂದು ತಮ್ಮ ವಾದಕ್ಕೆ ಸಮರ್ಥನೆಯನ್ನೂ ನೀಡಿದರು.
4 ಕಾರ್ಯಾಧ್ಯಕ್ಷ ಹುದ್ದೆಗಳ ಸೃಷ್ಟಿ ಪ್ರಸ್ತಾಪವನ್ನು ವಿರೋಧಿಸಿದ ಅವರು ‘‘ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಹಾಲಿ ಒಬ್ಬ ಕಾರ್ಯಾಧ್ಯಕ್ಷರು ಸಾಕು. ನಾಲ್ಕು ಮಂದಿ ಕಾರ್ಯಾಧ್ಯಕ್ಷರ ಅಗತ್ಯವೇನಿದೆ’’ ಎಂದು ಪ್ರಶ್ನಿಸಿದರು.
14 ವರ್ಷಗಳಿಂದ ಪಕ್ಷದಲ್ಲಿ ಎಲ್ಲ ಅಧಿಕಾರವನ್ನೂ ಅನುಭವಿಸಿದ್ದಾರೆ. ಆದರೆ, 40 ವರ್ಷಗಳಿಂದ ಏನೂ ಆಗದೆ ದುಡಿದ ಬಹಳಷ್ಟು ನಾಯಕರು ಕಾಂಗ್ರೆಸ್ನಲ್ಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿ.
ಶಾಸಕಾಂಗ ಪಕ್ಷ ಹಾಗೂ ಪ್ರತಿಪಕ್ಷ ನಾಯಕ ಎರಡೂ ಸ್ಥಾನಗಳನ್ನು ಪ್ರತ್ಯೇಕಗೊಳಿಸಬೇಕು. ಯುಪಿಎ ಅವಧಿಯಲ್ಲಿ ಸಂಸತ್ನಲ್ಲೂ ಇದೇ ವ್ಯವಸ್ಥೆ ಇತ್ತು.