ಆ್ಯಪ್ನಗರ

ಡಿಸಿಎಂ ಹುದ್ದೆ ನಾನು ಕೇಳ್ತಿಲ್ಲ, ನಮ್ಮ ಸಮುದಾಯ ಕೇಳ್ತಿದೆ: ಶ್ರೀರಾಮುಲು

ಕುಮಾರಸ್ವಾಮಿ ಸರಕಾರದ ವಿಶ್ವಾಸಮತ ಯಾಚನೆ ದಿನ ಸದನದಲ್ಲಿ ಒಬ್ಬಂಟಿಯಾಗಿ ನಿಂತಿದ್ದ ಶ್ರೀರಾಮುಲು ಅವರಿಗೆ 'ನಿನ್ನನ್ನು ಡಿಸಿಎಂ ಮಾಡುವುದಿಲ್ಲ, ರಮೇಶ್‌ ಜಾರಕಿಹೊಳಿಯನ್ನು ಡಿಸಿಎಂ ಮಾಡ್ತಾರೆ' ಎಂದು ಡಿಕೆ ಶಿವಕುಮಾರ್‌ ಮುನ್ಸೂಚನೆ ಕೊಟ್ಟಿದ್ದರು.

Vijaya Karnataka Web 28 Jan 2020, 9:49 am
ಬೆಂಗಳೂರು: ಸಮುದಾಯಕ್ಕೆ ಉನ್ನತ ಸ್ಥಾನ ದೊರೆಯುವ ನಿರೀಕ್ಷೆ ಇರುವುದರಿಂದ ಸಮುದಾಯದ ಇಬ್ಬರೂ ಪೈಪೋಟಿ ನಡೆಸಿದರೆ ಯಾರಿಗೂ ಸಿಗದೇ ಹೋಗಬಹುದು ಎಂದು ಮುಖಂಡರಿಗೆ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web Sriramulu


ಡಿಸಿಎಂ ಸ್ಥಾನದ ವಿಚಾರದಲ್ಲಿ ಶ್ರೀರಾಮುಲು ಅವರನ್ನು ಭೇಟಿಯಾದ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಕೆಲವು ಮಹತ್ವದ ಸಲಹೆಗಳನ್ನು ನೀಡಿದರು ಎನ್ನಲಾಗಿದೆ.

ಅರ್ಹ ಶಾಸಕ ರಮೇಶ್‌ ಜಾರಕಿಹೊಳಿ ಡಿಸಿಎಂ ಹುದ್ದೆಗೆ ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಶ್ರೀರಾಮುಲು ಅವರೂ ಬೆಂಬಲಿಗರ ಮೂಲಕ ಒತ್ತಡ ತರುತ್ತಿದ್ದಾರೆ. ಇಬ್ಬರೂ ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದರಿಂದ ಒಬ್ಬರಿಗಷ್ಟೆ ಡಿಸಿಎಂ ಸ್ಥಾನ ನೀಡಲು ಸಾಧ್ಯ. ಹೀಗಾಗಿ ಉಭಯ ನಾಯಕರ ನಡುವೆ ಸ್ಪರ್ಧೆ ಬೇಡ. ಯಾರಿಗೇ ಸಿಕ್ಕರೂ ಮತ್ತೊಬ್ಬರು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು ಎಂದು ಸಲಹೆ ನೀಡಿದರೆನ್ನಲಾಗಿದೆ.

ರಾಮುಲು ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಸನ್ನಾನಂದಪುರಿ ಸ್ವಾಮೀಜಿ, ''ಶ್ರೀರಾಮುಲು ಹಾಗೂ ರಮೇಶ್‌ ಜಾರಕಿಹೊಳಿ ನಮ್ಮ ಸಮುದಾಯದ ಎರಡು ಕಣ್ಣುಗಳಿದ್ದಂತೆ. ಸಮುದಾಯಕ್ಕೆ ಡಿಸಿಎಂ ಹುದ್ದೆ ಕೇಳಲಾಗಿದೆ. ಇಬ್ಬರಲ್ಲಿಯಾರಿಗಾದರೂ ಈ ಸ್ಥಾನ ನೀಡಲಿ,'' ಎಂದರು.

'ಹೊಸಬರು, ಹಳಬರ ಮಧ್ಯೆ ಗೊಂದಲವಿಲ್ಲ, ಶೀಘ್ರದಲ್ಲೇ ಸಂಪುಟ ವಿಸ್ತರಣೆ': ಶ್ರೀರಾಮುಲು

ಬೇಡಿಕೆ ಇಟ್ಟಿಲ್ಲ: ಡಿಸಿಎಂ ಹುದ್ದೆಗೆ ವೈಯಕ್ತಿಕವಾಗಿ ಬೇಡಿಕೆಯಿಟ್ಟಿಲ್ಲ. ಆದರೆ, ತಾವು ಪ್ರತಿನಿಧಿಸುವ ಸಮುದಾಯ ಈ ಸ್ಥಾನಮಾನವನ್ನು ಅಪೇಕ್ಷಿಸುತ್ತಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ,''ಡಿಸಿಎಂ ಬಗ್ಗೆ ಸಿಎಂ ಹಾಗೂ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಯಾರಿಗೆ ಯಾವ ಜವಾಬ್ದಾರಿ ನೀಡಬೇಕು ಎನ್ನುವುದನ್ನು ಪಕ್ಷ ನಿರ್ಧರಿಸುತ್ತದೆ,'' ಎಂದರು.

ಮುಖ್ಯಮಂತ್ರಿ ಬಿಎಸ್‌ವೈ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ: ಶ್ರೀರಾಮುಲು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ