ಆ್ಯಪ್ನಗರ

ರಾಜ್ಯದಲ್ಲಿ ಶೇ.90 ಬಿಪಿಎಲ್ ಕುಟುಂಬಗಳು!: ಪರಮೇಶ್ವರ್‌ಗೆ ಆಘಾತ

ರಾಜ್ಯದಲ್ಲಿ ಶೇ. 90 ರಷ್ಟು ಕುಟುಂಬಗಳಲ್ಲಿ​ ಬಿಪಿಎಲ್ ಕಾರ್ಡ್ ಇದೆ ಎನ್ನುವ ಮಾಹಿತಿ ಇದೆ. ಅಭಿವೃದ್ಧಿಯತ್ತ ನಡೆಯುತ್ತಿರುವ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ 90% ಇದೆ ಅಂದ್ರೆ ನಂಬಲು ಸಾಧ್ಯವಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ವಹಿಸಬೇಕು. ಬಿಪಿಎಲ್ ಕಾರ್ಡ್ ಹಂಚಿಕೆ ಕುರಿತು ಮರು ಚಿಂತನೆ ಆಗಬೇಕು ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ.

Vijaya Karnataka Web 12 Jun 2019, 3:22 pm
ಬೆಂಗಳೂರು: ರಾಜ್ಯದ ಶೇ. 90ರಷ್ಟು ಕುಟುಂಬಗಳ ಬಳಿ ಬಿಪಿಎಲ್ ಕಾರ್ಡ್‌ಗಳಿರುವ ಬಗ್ಗೆ ಡಿಸಿಎಂ ಪರಮೇಶ್ವರ್ ಆಘಾತ ವ್ಯಕ್ತಪಡಿಸಿದ್ದಾರೆ. ಬಿಪಿಎಲ್ ಕಾರ್ಡ್‌ಗಳ ಬಗ್ಗೆ ಮರು ಸರ್ವೇ ಆಗುವ ಅವಶ್ಯಕತೆ ಇದೆ ಎಂದು ಡಿಸಿಎಂ ಪರಮೇಶ್ವರ್ ಅಭಿಪ್ರಾಯ ಪಟ್ಟಿದ್ದಾರೆ.
Vijaya Karnataka Web parameshwar


ರಾಜ್ಯದಲ್ಲಿ ಶೇ. 90 ರಷ್ಟು ಕುಟುಂಬಗಳಲ್ಲಿ ಬಿಪಿಎಲ್ ಕಾರ್ಡ್ ಇದೆ ಎನ್ನುವ ಮಾಹಿತಿ ಇದೆ. ಅಭಿವೃದ್ಧಿಯತ್ತ ನಡೆಯುತ್ತಿರುವ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ 90% ಇದೆ ಅಂದ್ರೆ ನಂಬಲು ಸಾಧ್ಯವಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ವಹಿಸಬೇಕು. ಬಿಪಿಎಲ್ ಕಾರ್ಡ್ ಹಂಚಿಕೆ ಕುರಿತು ಮರು ಚಿಂತನೆ ಆಗಬೇಕು ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ.

ಇನ್ನು, ಬಿಪಿಎಲ್ ಕಾರ್ಡ್ ಸಂಖ್ಯೆ ಜಾಸ್ತಿ ಆಗಿದೆ. ಈ ಬಗ್ಗೆ ಮರು ಸರ್ವೇ ಆಗುವ ಅವಶ್ಯಕತೆ ಇದೆ. ಬಿಪಿಎಲ್ ಕಾರ್ಡ್ ಹಂಚಿಕೆ ಕುರಿತು ಮತ್ತೊಮ್ಮೆ ಚಿಂತನೆ ನಡೆಸಿ ಎಂದು ಸಹ ಡಿಸಿಎಂ ಪರಮೇಶ್ವರ್ ಹೇಳಿಕೊಂಡಿದ್ದಾರೆ.

ಅಲ್ಲದೆ, ರಾಜ್ಯ ಸಮ್ಮಿಶ್ರ ಸರಕಾರದ ಬಗ್ಗೆ ಮಾತನಾಡಿದ ಡಿಸಿಎಂ ಪರಮೇಶ್ವರ್, ನಮ್ಮ ಸರಕಾರ ಸುಭದ್ರವಾಗಿದೆ ಎಂದು ಹೇಳಿದರು. ಕೆಲವರು ಸರಕಾರ ಸುಭದ್ರ ಇಲ್ಲ ಎಂದುಕೊಂಡಿದ್ದಾರೆ. ಕೆಲ ಅಧಿಕಾರಿಗಳು ಸಹ ಹೀಗೆ ಮಾತಾಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಹೀಗೆ ಮಾತಾಡಿಕೊಳ್ಳಬಾರದು. ಸರಕಾರ ಭದ್ರವಾಗಿ ಇಡೋದನ್ನು ನಾವು ಮಾಡಿಕೊಳ್ತೀವಿ. ಕಾಮಿಡಿಗಾಗಿಯೂ ಸರಕಾರ ಬೀಳುವ ಬಗ್ಗೆ ಅಧಿಕಾರಿಗಳು ಮಾತಾಡಬೇಡಿ ಎಂದು ಪರಂ ಸರಕಾರಿ ಅಧಿಕಾರಿಗಳಿಗೆ ಸಲಹೆ ನೀಡಿದರು.

ಜತೆಗೆ, ನಮ್ಮ ಸರಕಾರ ಸುಭದ್ರವಾಗಿದೆ. ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಅಧಿಕಾರಿಗಳು ಇದನ್ನ ತಲೆಗೆ ಹಾಕಿಕೊಂಡ್ರೆ ಅಭಿವೃದ್ಧಿ ಕೆಲಸ ಆಗೊಲ್ಲ. ಹೀಗಾಗಿ ಸರಕಾರ ಬೀಳುತ್ತೆ ಅನ್ನೋ ಅಭಿಪ್ರಾಯ ಬಿಟ್ಟು ಬಿಡಿ. ಸರಕಾರದ ಭದ್ರತೆ ಬಗ್ಗೆ ನಾವು ಯೋಚನೆ ಮಾಡಿಕೊಳ್ತೀವಿ. ನೀವು ನಿಮ್ಮ ಪಾಡಿಗೆ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಡಿಸಿಎಂ ಪರಮೇಶ್ವರ್ ಸೂಚನೆ ನೀಡಿದ್ದಾರೆ.

ಇನ್ನೊಂದೆಡೆ, ನಾವು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡ್ತೀವಿ ಅಂತ ಪ್ರಮಾಣ ವಚನ ಸಂದರ್ಭದಲ್ಲಿ ಮಾತು ಕೊಟ್ಟಿದ್ದೇವೆ. ಇದನ್ನ ಉಳಿಸಿಕೊಳ್ಳುವ‌ ಕೆಲಸ ನಾವು ನೀವು ಒಟ್ಟಿಗೆ ಮಾಡಬೇಕು ಎಂದು ಸಮ್ಮಿಶ್ರ ಸರಕಾರದ ಉಪಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ