ಆ್ಯಪ್ನಗರ

ವಿಮೆ ಪರಿಹಾರ ನೆರವಿಗೆ ವಿಶೇಷ ತಂಡ

ವಿಮೆ ಪರಿಹಾರ ಪಡೆಯುವ ಪ್ರಕ್ರಿಯೆಗಳಿಗೆ ಮಾಲೀಕರಿಗೆ ನೆರವಾಗಲು ಈ ತಂಡ ಸಹಕರಿಸಲಿದೆ. ಸುಟ್ಟ ಕಾರುಗಳ ದಾಖಲೆಗಳ ಪ್ರತಿಯನ್ನು ಮಾಲೀಕರಿಗೆ ನೀಡಲು ಸಾರಿಗೆ ಇಲಾಖೆಗೆ ಸೂಚನೆ ನೀಡಲಾಗಿದೆ.

Vijaya Karnataka 24 Feb 2019, 10:52 am
ಬೆಂಗಳೂರು: ಬೆಂಕಿಗೆ ಆಹುತಿಯಾದ ಕಾರುಗಳ ವಿಮೆ ಪರಿಹಾರಕ್ಕೆ ಸಂಬಂಧಿಸಿದ ಪ್ರಕ್ರಿಯೆ ನಡೆಸಲು ರಾಜ್ಯ ಸರಕಾರ ಅಧಿಕಾರಿಗಳ ವಿಶೇಷ ತಂಡ ರಚಿಸಿದೆ. ಜತೆಗೆ ಅಗ್ನಿ ದುರಂತಕ್ಕೆ ಕಾರಣ ತಿಳಿಯಲು ತನಿಖೆ ನಡೆಸಲಾಗುವುದು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ತಿಳಿಸಿದ್ದಾರೆ.
Vijaya Karnataka Web car


ವಿಮೆ ಪರಿಹಾರ ಪಡೆಯುವ ಪ್ರಕ್ರಿಯೆಗಳಿಗೆ ಮಾಲೀಕರಿಗೆ ನೆರವಾಗಲು ಈ ತಂಡ ಸಹಕರಿಸಲಿದೆ. ಸುಟ್ಟ ಕಾರುಗಳ ದಾಖಲೆಗಳ ಪ್ರತಿಯನ್ನು ಮಾಲೀಕರಿಗೆ ನೀಡಲು ಸಾರಿಗೆ ಇಲಾಖೆಗೆ ಸೂಚನೆ ನೀಡಲಾಗಿದೆ. ಮಾಲೀಕರಿಗೆ ವಿಮೆ ಪರಿಹಾರ ಸಿಗುವಾಗ ಆಗುವ ಸಮಸ್ಯೆಗಳನ್ನು ಸಹಾನುಭೂತಿಯ ದೃಷ್ಟಿಕೋನದಿಂದ ಪರಿಹರಿಸಿಕೊಡಬೇಕು ಎಂದು ಕೇಂದ್ರ ಸರಕಾರಕ್ಕೂ ಮನವಿ ಮಾಡಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾನುವಾರದ ಕೊನೆ ದಿನದ ಪ್ರದರ್ಶನಕ್ಕೆ ಬರುವವರಿಗೆ ಪಾರ್ಕಿಂಗ್‌ಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ