ಆ್ಯಪ್ನಗರ

ಕೊರೊನಾ ನಿಯಂತ್ರಣಕ್ಕೆ ಪ್ರತೀ ಜಿಲ್ಲೆಯಲ್ಲಿ ರ‍್ಯಾಪಿಡ್ ಅಪ್ರೈಸಲ್‌ ತಂಡ ರಚನೆ!

ದೇಶದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ಸಮುದಾಯ ಹಂತದಲ್ಲಿ ಹರಡುವಿಕೆ ಮತ್ತು ನಿಯಂತ್ರಣ ಪರಿಶೀಲನೆಗೆ ಪ್ರತೀ ಜಿಲ್ಲೆಗಳಲ್ಲಿ'ರ‍್ಯಾಪಿಡ್‌ ಅಪ್ರೈಸಲ್‌' ತಂಡ ರಚಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

Vijaya Karnataka Web 26 May 2020, 6:24 pm
ಬೆಂಗಳೂರು: ಕೊರೊನಾ ಸೋಂಕು ಸಮುದಾಯ ಹಂತದಲ್ಲಿ ಹರಡುವಿಕೆ ಮತ್ತು ನಿಯಂತ್ರಣ ಪರಿಶೀಲನೆಗೆ ಪ್ರತೀ ಜಿಲ್ಲೆಗಳಲ್ಲಿ'ರ‍್ಯಾಪಿಡ್‌ ಅಪ್ರೈಸಲ್‌' ತಂಡ ರಚಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ವಲಸೆ ಕಾರ್ಮಿಕರು, ವಿದೇಶದಲ್ಲಿ ನೆಲೆಸಿರುವವರು, ಅನ್ಯರಾಜ್ಯಗಳಲ್ಲಿ ನಾನಾ ಕಾರಣಗಳಿಂದ ಸಿಲುಕಿದವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
Vijaya Karnataka Web coronavirus-outbreak-govt-confirms-29th-positive-case-in-india


ಹೈರಿಸ್ಕ್‌ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸುತ್ತಿರುವ ಜನರಿಂದ ಕೊರೋನಾ ವ್ಯಾಪಕವಾಗಿ ಹರಡಬಹುದೆಂಬ ಆತಂಕ ಎದುರಾಗಿದೆ. ಹೀಗಾಗಿ ಅವರು ಆಗಮಿಸಿದ ಒಂದು ವಾರದ ಬಳಿಕ ಸಮುದಾಯ ಹಂತದಲ್ಲಿ ಕೊರೋನಾ ಹರಡಿದೆಯೇ? ಅಥವಾ ನಿಯಂತ್ರಣದಲ್ಲಿದೆಯೇ? ಎಂಬ ಬಗ್ಗೆ ಜಿಲ್ಲಾವಾರು ನಿಗಾ ವಹಿಸುವುದಕ್ಕಾಗಿ ಈ ತಂಡ ರಚನೆ ಮಾಡಲು ನಿರ್ಧರಿಸಲಾಗಿದೆ.

ಈ ಸಮಿತಿಯ ಕಾರ್ಯ ನಿರ್ವಹಣೆ ಬಗ್ಗೆ ಸರಕಾರ ಪ್ರತ್ಯೇಕ ನಿಯಮಾವಳಿ (ಎಸ್‌ಓಪಿ) ರೂಪಿಸಲಿದೆ. ಸಮುದಾಯ ವೈದ್ಯ ಪದ್ಧತಿ (ಕಮ್ಯುನಿಟಿ ಮೆಡಿಸಿನ್‌ ) ತಜ್ಞರ ನೇತೃತ್ವದಲ್ಲಿ ಸಮಿತಿ ಕಾರ್ಯ ನಿರ್ವಹಿಸಲಿದೆ. ಜೂನ್‌ 1ರಿಂದ ಈ ತಂಡ ತನ್ನ ಕಾರ್ಯ ಆರಂಭಿಸಲಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ತಂಡದ ಪ್ರತಿನಿಧಿಗಳಾಗಿರುತ್ತಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ಮೊದಲ ಅಂತಾರಾಜ್ಯ ವಿಮಾನ..

ನಿಗಾ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಮುಗಿಸಿ ಹೋಮ್‌ ಕ್ವಾರಂಟೈನ್‌ಗೆ ಹೋಗುವವರಲ್ಲಿ ಸೋಂಕು ಲಕ್ಷಣ ಒಮ್ಮಿಂದೊಮ್ಮೆಲೆ ಕಾಣಿಸಿಕೊಂಡು ಸಮುದಾಯ ಹಂತಕ್ಕೆ ಪ್ರಸರಿಸುವ ಸಾಧ್ಯತೆ ಇದೆ. ದೊಡ್ಡ ಪ್ರಮಾಣದಲ್ಲಿಅನ್ಯ ರಾಜ್ಯಗಳಿಂದ ಜನರು ಆಗಮಿಸುತ್ತಿರುವುದರಿಂದ ಅವರನ್ನು ನಿರ್ವಹಣೆ ಮಾಡುವುದು ಅನಿವಾರ್ಯವಾಗಿದೆ.
ಲಕ್ಷಕ್ಕೂ ಮೇಲ್ಪಟ್ಟು ಕ್ವಾರಂಟೈನ್‌ ಸೇವಾಸಿಂಧು ಮೂಲಕ ನೋಂದಾಯಿಸಿಧಿಕೊಂಡು ರಾಜ್ಯಕ್ಕೆ ಬಂದಿರುವ 1,15,598 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲು ಸರಕಾರ ಈಗಾಗಲೇ ಸಿದ್ಧತೆ ನಡೆಸಿದೆ. ಇವರೆಲ್ಲರೂ ಮಹಾರಾಷ್ಟ್ರ, ಗುಜರಾತ್‌, ದಿಲ್ಲಿ, ತಮಿಳುನಾಡು, ಮಧ್ಯ ಪ್ರದೇಶ, ರಾಜಸ್ಥಾನದಂಥ ಹೈರಿಸ್ಕ್‌ ರಾಜ್ಯಗಳಿಂದ ವಾಪಾಸ್‌ ಆದವರಾಗಿದ್ದಾರೆ. ಇದು ಸರಕಾರದ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ