ಆ್ಯಪ್ನಗರ

ಬೀದಿ ಬದಿ ವ್ಯಾಪಾರಿಗಳ ರಕ್ಷಣೆಗೆ ನಿಯಮ: ಹೈಕೋರ್ಟ್‌ ಆದೇಶ

ಬೀದಿ ಬದಿ ವ್ಯಾಪಾರಿಗಳ ಉಪಜೀವನ ಸಂರಕ್ಷ ಣೆ ಹಾಗೂ ನಿಯಂತ್ರಣ ಕಾಯಿದೆ 2014ರ ಅನ್ವಯ ರಾಜ್ಯ ಸರಕಾರ ಇನ್ನೂ ಏಕೆ ನಿಯಮಗಳನ್ನು ರೂಪಿಸಿಲ್ಲ ಎಂಬುದರ ಬಗ್ಗೆ ಮೂರು ವಾರಗಳಲ್ಲಿ ಕಾರಣ ಸಹಿತ ಉತ್ತರದ ಪ್ರಮಾಣ ಪತ್ರ ಸಲ್ಲಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Vijaya Karnataka 11 Jun 2019, 5:00 am
ಬೆಂಗಳೂರು : ಬೀದಿ ಬದಿ ವ್ಯಾಪಾರಿಗಳ ಉಪಜೀವನ ಸಂರಕ್ಷ ಣೆ ಹಾಗೂ ನಿಯಂತ್ರಣ ಕಾಯಿದೆ 2014ರ ಅನ್ವಯ ರಾಜ್ಯ ಸರಕಾರ ಇನ್ನೂ ಏಕೆ ನಿಯಮಗಳನ್ನು ರೂಪಿಸಿಲ್ಲ ಎಂಬುದರ ಬಗ್ಗೆ ಮೂರು ವಾರಗಳಲ್ಲಿ ಕಾರಣ ಸಹಿತ ಉತ್ತರದ ಪ್ರಮಾಣ ಪತ್ರ ಸಲ್ಲಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.
Vijaya Karnataka Web street vendors safty high court order
ಬೀದಿ ಬದಿ ವ್ಯಾಪಾರಿಗಳ ರಕ್ಷಣೆಗೆ ನಿಯಮ: ಹೈಕೋರ್ಟ್‌ ಆದೇಶ


ಬಿ.ಎಸ್‌.ಮುನೀರ್‌ ಆಹ್ಮದ್‌ ಮತ್ತು ಇತರರು ಸಲ್ಲಿಸಿರುವ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಆಲಿಸಿದ ಸಿಜೆ ಎ.ಎಸ್‌. ಓಕ್‌ ಹಾಗೂ ನ್ಯಾ.ಎಚ್‌.ಟಿ.ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು.

''ಕೇಂದ್ರ ಸರಕಾರ ಕಾಯಿದೆಯನ್ನು 2014ರ ಮೇ ತಿಂಗಳಲ್ಲಿ ಜಾರಿಗೊಳಿಸಿ, ಒಂದು ವರ್ಷದಲ್ಲಿ ರಾಜ್ಯಗಳು ನಿಯಮಗಳನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಸೂಚಿಸಿತ್ತು. ಆ ಪ್ರಕಾರ ಕರ್ನಾಟಕದಲ್ಲಿ ಏ.30, 2015ರಿಂದ ಹೊಸ ನಿಯಮ ಜಾರಿಯಾಗಬೇಕಿತ್ತು. ಆದರೆ ನಾಲ್ಕೂವರೆ ವರ್ಷ ಕಳೆಯುತ್ತಾ ಬಂದರೂ ಇನ್ನೂ ನಿಯಮ ರೂಪಿಸದಿರುವುದು ಬೇಸರದ ಸಂಗತಿ''ಎಂದು ನ್ಯಾಯಪೀಠ ಪ್ರಶ್ನಿಸಿತು.

ಸರಕಾರ ಇಷ್ಟು ನಿರ್ಲಕ್ಷ್ಯ ತೋರಿದರೆ ಸಾಲದು, ಹಾಗಾಗಿ ಸರಕಾರದ ಮುಖ್ಯ ಕಾರ‍್ಯದರ್ಶಿ ಏಕೆ ನಿಯಮ ರೂಪಿಸಲು ಏಕೆ ತಡವಾಯಿತು? ಅದಕ್ಕೆ ಕಾರಣಗಳೇನು ?ಯಾವಾಗ ನಿಯಮ ರೂಪಿಸಿ ಜಾರಿಗೊಳಿಸಲಾಗುವುದು ಎಂದು ಕಾಲಮಿತಿ ಸಹಿತ ವಿವರಣೆ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿ ವಿಚಾರಣೆಯನ್ನು ಜು.9ಕ್ಕೆ ಮುಂದೂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ