ಆ್ಯಪ್ನಗರ

ಕಾಂಗ್ರೆಸ್‌ ನಾಯಕರ 'ಗುಂಪು ಕಾಳಗ', ಎಐಸಿಸಿ ಹೈಕಮಾಂಡ್‌ ಭೇಟಿಗೆ ನಿರ್ಧಾರ

ರಾಜ್ಯ ಕಾಂಗ್ರೆಸ್‌ ನಾಯಕರ 'ಗುಂಪು ಕಾಳಗ' ವಾರಾಂತ್ಯದಲ್ಲಿ ಎಐಸಿಸಿ ಹೈಕಮಾಂಡ್‌ ಅಂಗಳಕ್ಕೆ ಶಿಫ್ಟ್‌ ಆಗಲಿದ್ದು, ನಾಯಕತ್ವ ನಿರ್ಧಾರಕ್ಕಾಗಿ ವರಿಷ್ಠರ ಓಲೈಕೆ, ಒತ್ತಡ ತಂತ್ರಕ್ಕಾಗಿ ನಾಯಕರು ದೆಹಲಿಗೆ ಪ್ರಯಾಣ

Vijaya Karnataka Web 2 Jan 2020, 11:43 am
ಬೆಂಗಳೂರು: ರಾಜ್ಯ ಕಾಂಗ್ರೆಸ್‌ ನಾಯಕರ 'ಗುಂಪು ಕಾಳಗ' ವಾರಾಂತ್ಯದಲ್ಲಿ ಎಐಸಿಸಿ ಹೈಕಮಾಂಡ್‌ ಅಂಗಳಕ್ಕೆ ಶಿಫ್ಟ್‌ ಆಗಲಿದ್ದು, ನಾಯಕತ್ವ ನಿರ್ಧಾರಕ್ಕಾಗಿ ವರಿಷ್ಠರ ಓಲೈಕೆ, ಒತ್ತಡ ತಂತ್ರಕ್ಕಾಗಿ ಒಂದೆರಡು ದಿನಗಳಲ್ಲಿ ಮುಂಚೂಣಿ ನಾಯಕರು ದಿಲ್ಲಿಗೆ ವಿಮಾನ ಏರಲಿದ್ದಾರೆ.
Vijaya Karnataka Web congress


ಸಿದ್ದರಾಮಯ್ಯ ಮತ್ತು ಬೆಂಬಲಿಗ ನಾಯಕರು ಒಂದು ತಂಡವಾಗಿ, ಹಿರಿಯ ಮತ್ತು ಮೂಲ ಕಾಂಗ್ರೆಸ್ಸಿಗರು ಮತ್ತೊಂದು ಗುಂಪಾಗಿ ದಿಲ್ಲಿಗೆ ತೆರಳುತ್ತಿದ್ದಾರೆ. ಗುಂಪುಗಾರಿಕೆಯಿಂದ ಸೊರಗಿರುವ ರಾಜ್ಯ ಕಾಂಗ್ರೆಸ್‌ನಲ್ಲಿನ ಬಿಕ್ಕಟ್ಟಿನ ಪರಿಹಾರೋಪಾಯ ಕುರಿತಂತೆ ಹೈಕಮಾಂಡ್‌ಗೆ ವಸ್ತುಸ್ತಿತಿ ಮನದಟ್ಟು ಮಾಡಿಕೊಡಲು ತಮ್ಮದೇ ವಾದದೊಂದಿಗೆ ತಯಾರಿ ಮಾಡಿಕೊಂಡಿದ್ದಾರೆ.

ಉಪಚುನಾವಣೆ ಸೋಲಿನ ಬಳಿಕ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೀಡಿದ ರಾಜೀನಾಮೆ ಪತ್ರಗಳು ಇನ್ನೂ ಸ್ವೀಕೃತವೂ ಆಗಿಲ್ಲ. ಕೆಪಿಸಿಸಿ ನೂತನ ಅಧ್ಯಕ್ಷರ ನೇಮಕ, ಶಾಸಕಾಂಗ ಪಕ್ಷ ನಾಯಕ ಹಾಗೂ ಪ್ರತಿಪಕ್ಷ ನಾಯಕ ಸ್ಥಾನ ಪ್ರತ್ಯೇಕಿಸುವುದು, ಸಿಡಬ್ಲ್ಯೂಸಿಯಲ್ಲಿ ಕೆಲವು ಹಿರಿತಲೆಗಳಿಗೆ ಅವಕಾಶ ಮತ್ತು ಜವಾಬ್ದಾರಿ ನಿಗದಿ ಸಂಬಂಧ ಹೈಕಮಾಂಡ್‌ ಬಳಿ ಕರಡು ಸಿದ್ಧವಿದೆ. ತೀರ್ಮಾನ ಪ್ರಕಟಿಸುವ ಮುನ್ನ ಮತ್ತೊಮ್ಮೆ ಆಯ್ದ ಹಿರಿಯ ನಾಯಕರೊಂದಿಗೆ ಸಮಾಲೋಚನೆಗೆ ವರಿಷ್ಠರು ಬಯಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ