ಆ್ಯಪ್ನಗರ

ತೆಂಗು ಬೆಳೆಗಾರರಿಗೆ ಸಬ್ಸಿಡಿ ವಿತರಣೆ ಅಭಾದಿತ

ರಾಜ್ಯದ ತೆಂಗು ಬೆಳೆಗಾರರ ಹಿತರಕ್ಷಣೆಗಾಗಿ 2018 -19ನೇ ಸಾಲಿಗೆ ಜಾರಿ ಮಾಡಲಾಗಿದ್ದ 'ತೆಂಗು ಉತ್ಪಾದನೆ ಸುಧಾರಣೆ ಕಾರ್ಯಯೋಜನೆಗಾಗಿ ಸಂಯೋಜಿತ ಬೇಸಾಯ' ಯೋಜನೆಯಡಿ ರೈತರಿಗೆ ಸಹಾಯಧನÜ ವಿತರಣೆ ಮಾಡಲು ನಿಗದಿಯಾಗಿದ್ದ ಗಡುವನ್ನು ಪ್ರಸಕ್ತ ಹಣಕಾಸು ವರ್ಷದ ಜೂನ್‌ ತಿಂಗಳ ಅಂತ್ಯದ ವರೆಗೆ ವಿಸ್ತರಿಸಲಾಗಿದೆ.

Vijaya Karnataka 2 Apr 2019, 5:00 am
ಬೆಂಗಳೂರು : ರಾಜ್ಯದ ತೆಂಗು ಬೆಳೆಗಾರರ ಹಿತರಕ್ಷಣೆಗಾಗಿ 2018 -19ನೇ ಸಾಲಿಗೆ ಜಾರಿ ಮಾಡಲಾಗಿದ್ದ 'ತೆಂಗು ಉತ್ಪಾದನೆ ಸುಧಾರಣೆ ಕಾರ್ಯಯೋಜನೆಗಾಗಿ ಸಂಯೋಜಿತ ಬೇಸಾಯ' ಯೋಜನೆಯಡಿ ರೈತರಿಗೆ ಸಹಾಯಧನÜ ವಿತರಣೆ ಮಾಡಲು ನಿಗದಿಯಾಗಿದ್ದ ಗಡುವನ್ನು ಪ್ರಸಕ್ತ ಹಣಕಾಸು ವರ್ಷದ ಜೂನ್‌ ತಿಂಗಳ ಅಂತ್ಯದ ವರೆಗೆ ವಿಸ್ತರಿಸಲಾಗಿದೆ.
Vijaya Karnataka Web subsidy for coconut growers
ತೆಂಗು ಬೆಳೆಗಾರರಿಗೆ ಸಬ್ಸಿಡಿ ವಿತರಣೆ ಅಭಾದಿತ


ಬರಗಾಲದಿಂದ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಪೂರ್ಣ ಒಣಗಿದ ಮತ್ತು ಅನುತ್ಪಾದಕ ಹಂತ ತಲುಪಿದ ತೆಂಗಿನ ಮರಗಳನ್ನು ಹೊಂದಿರುವ ರೈತರಿಗೆ ಪ್ರತಿ ತೆಂಗಿನ ಮರಕ್ಕೆ 400 ರೂ. ನಂತೆ ಪ್ರೋತ್ಸಾಹಧನ ವಿತರಿಸಲು ನಿರ್ಧರಿಸಲಾಗಿತ್ತು. ಈ ಯೋಜನೆಯಡಿ ಒಟ್ಟು 44,54,793 ತೆಂಗಿನ ಮರಗಳಿಗೆ ಒಟ್ಟು 178.19 ಕೋಟಿ ರೂ. ಪರಿಹಾರದ ಮೊತ್ತ ವಿತರಣೆ ಮಾಡಬೇಕಿತ್ತು.

ಆದರೆ, ಹಣಕಾಸು ವರ್ಷ ಮಾರ್ಚ್‌ 31ಕ್ಕೆ ಮುಗಿದಿದ್ದು, ಈವರೆಗೆ ಡಿಬಿಟಿ ವ್ಯವಸ್ಥೆ ಮೂಲಕ 108 ಕೋಟಿ ರೂ. ಸಹಾಯಧನವನ್ನು ಮಾತ್ರ ವಿತರಣೆ ಮಾಡಲಾಗಿದೆ. ಹೀಗಾಗಿ, ಉಳಿದ ಮೊತ್ತವನ್ನು ರಾಜ್ಯ ತೋಟಗಾರಿಕೆ ಮಿಷನ್‌ ನಿರ್ದೇಶಕರ ಖಾತೆಯಲ್ಲಿರಿಸಿ, ಜೂನ್‌ 2019ರೊಳಗೆ ಸಂಬಂಧಪಟ್ಟ ರೈತರಿಗೆ ವಿತರಿಸಲು ಸೂಚಿಸಿ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ