ಬೆಂಗಳೂರು : ಗೌರವ ಧನ ಹೆಚ್ಚಳ ಮತ್ತು ಸೇವೆ ಕಾಯಂಗೆ ಒತ್ತಾಯಿಸಿ ಗ್ರಂಥಾಲಯ ಸಹಾಯಕರ ಸಂಘದ ಕಾರ್ಯದರ್ಶಿ ಆತ್ಮಹತ್ಯೆ ಯತ್ನಕ್ಕೆ ಸಂಬಂಧಪಟ್ಟಂತೆ ನಗರ ಮೀಸಲು ಪಡೆಯ ಸಬ್ಇನ್ಸ್ಪೆಕ್ಟರ್ ಸೇರಿ 10 ಮಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಬ್ಲೇಡ್ನಿಂದ ಕೊರೆದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಗ ಕರ್ತವ್ಯದಲ್ಲಿದ್ದ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆಂಬ ಆರೋಪದ ಮಾಡಲಾಗಿದೆ. ಈ ಸಂಬಂಧ ವಿಧಾನಸೌಧದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪಿಎಸ್ಐ ಮಹದೇವ, ಎಎಸ್ಐ ಶಿವಲಿಂಗಯ್ಯ, ಮುಖ್ಯಪೇದೆಗಳಾದ ಜಕಾರಿಯಸ್, ಲಕ್ಷ್ಮಮ್ಮ ಅವರುಗಳ ಸಮೇತ ಪೇದೆಗಳಾದ ಸೀಮಾ, ಎಂ.ನಿವೇದಿತಾ, ಸವಿತಾ, ಕೆನೆತ್, ಯಲ್ಲಪ್ಪ, ಆನಂದನಾಯ್ಕ್ ಅವರುಗಳನ್ನು ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯದಡಿ ಅಮಾತನಗೊಳಿಸಿ ಸಿಎಆರ್ ಜಂಟಿ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಗ್ರಂಥಾಲಯ ನೌಕರರ ಸಂಘದ ಕಾರ್ಯದರ್ಶಿ ರೇವಣ್ಣ ಅವರು ಜೂ.24 ರಂದು ಮೂರನೇ ಮಹಡಿಗೆ ತೆರಳಿ ಅಲ್ಲಿನ ಶೌಚಾಲಯಲದಲ್ಲಿ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ವಿಧಾನಸೌಧ ಭದ್ರತೆಯ 'ಎ' ಪಾಳಿಯಲ್ಲಿ ಅಂಬೇಡ್ಕರ್ ದ್ವಾರ ಮತ್ತು ಪೂರ್ವ ದ್ವಾರಗಳಲ್ಲಿ 10 ಮಂದಿ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.
ಕರ್ತವ್ಯಲೋಪ ಏನು ?
ರೇವಣ್ಣ ವಿಧಾನಸೌಧ ಪ್ರವೇಶಿಸಿರುವ ಬಗ್ಗೆ ಎರಡು ದ್ವಾರಗಳಲ್ಲಿ ಇದ್ದ ಸಿಬ್ಬಂದಿ ನೋಂದಣಿ ಪುಸ್ತಕದಲ್ಲಿ ನಮೂದಿಸಿರಲಿಲ್ಲ. ದ್ವಾರಗಳಲ್ಲಿ ಗುರುತಿನ ಚೀಟಿ ಮತ್ತು ಪಾಸ್ಗಳನ್ನು ಪರಿಶೀಲನೆಗೆ ಒಳಪಡಿಸಿಲ್ಲ. ರೇವಣ್ಣ ವಿಧಾನಸೌಧ ಪ್ರವೇಶಿಸುವಾಗ ಡಿಪಿಎಆರ್ ನೀಡುವ ಪ್ರವೇಶ ಪಾಸ್ ಆಗಲೀ ಅಥವಾ ಸಚಿವಾಲಯ ನೌಕರರ ಐಡಿ ಕೂಡ ಇರಲಿಲ್ಲ. ಸೂಕ್ತ ತಪಾಸಣೆ ನಡೆಸದ ಕಾರಣದಿಂದ ಈ ಅವಘಡ ಸಂಭವಿಸಿದೆ. ಸಿಬ್ಬಂದಿಯ ನಿರ್ಲಕ್ಷ್ಯತೆ, ಬೇಜವಾಬ್ದಾರಿ ಹಾಗೂ ಶಿಸ್ತಿನ ಇಲಾಖೆ ಘನತೆ ಗೌರವಗಳಿಗೆ ಕುಂದುಬರುವಂತೆ ವರ್ತಿಸಿರುವ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.
ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಬ್ಲೇಡ್ನಿಂದ ಕೊರೆದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಗ ಕರ್ತವ್ಯದಲ್ಲಿದ್ದ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆಂಬ ಆರೋಪದ ಮಾಡಲಾಗಿದೆ. ಈ ಸಂಬಂಧ ವಿಧಾನಸೌಧದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪಿಎಸ್ಐ ಮಹದೇವ, ಎಎಸ್ಐ ಶಿವಲಿಂಗಯ್ಯ, ಮುಖ್ಯಪೇದೆಗಳಾದ ಜಕಾರಿಯಸ್, ಲಕ್ಷ್ಮಮ್ಮ ಅವರುಗಳ ಸಮೇತ ಪೇದೆಗಳಾದ ಸೀಮಾ, ಎಂ.ನಿವೇದಿತಾ, ಸವಿತಾ, ಕೆನೆತ್, ಯಲ್ಲಪ್ಪ, ಆನಂದನಾಯ್ಕ್ ಅವರುಗಳನ್ನು ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯದಡಿ ಅಮಾತನಗೊಳಿಸಿ ಸಿಎಆರ್ ಜಂಟಿ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಗ್ರಂಥಾಲಯ ನೌಕರರ ಸಂಘದ ಕಾರ್ಯದರ್ಶಿ ರೇವಣ್ಣ ಅವರು ಜೂ.24 ರಂದು ಮೂರನೇ ಮಹಡಿಗೆ ತೆರಳಿ ಅಲ್ಲಿನ ಶೌಚಾಲಯಲದಲ್ಲಿ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ವಿಧಾನಸೌಧ ಭದ್ರತೆಯ 'ಎ' ಪಾಳಿಯಲ್ಲಿ ಅಂಬೇಡ್ಕರ್ ದ್ವಾರ ಮತ್ತು ಪೂರ್ವ ದ್ವಾರಗಳಲ್ಲಿ 10 ಮಂದಿ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.
ಕರ್ತವ್ಯಲೋಪ ಏನು ?
ರೇವಣ್ಣ ವಿಧಾನಸೌಧ ಪ್ರವೇಶಿಸಿರುವ ಬಗ್ಗೆ ಎರಡು ದ್ವಾರಗಳಲ್ಲಿ ಇದ್ದ ಸಿಬ್ಬಂದಿ ನೋಂದಣಿ ಪುಸ್ತಕದಲ್ಲಿ ನಮೂದಿಸಿರಲಿಲ್ಲ. ದ್ವಾರಗಳಲ್ಲಿ ಗುರುತಿನ ಚೀಟಿ ಮತ್ತು ಪಾಸ್ಗಳನ್ನು ಪರಿಶೀಲನೆಗೆ ಒಳಪಡಿಸಿಲ್ಲ. ರೇವಣ್ಣ ವಿಧಾನಸೌಧ ಪ್ರವೇಶಿಸುವಾಗ ಡಿಪಿಎಆರ್ ನೀಡುವ ಪ್ರವೇಶ ಪಾಸ್ ಆಗಲೀ ಅಥವಾ ಸಚಿವಾಲಯ ನೌಕರರ ಐಡಿ ಕೂಡ ಇರಲಿಲ್ಲ. ಸೂಕ್ತ ತಪಾಸಣೆ ನಡೆಸದ ಕಾರಣದಿಂದ ಈ ಅವಘಡ ಸಂಭವಿಸಿದೆ. ಸಿಬ್ಬಂದಿಯ ನಿರ್ಲಕ್ಷ್ಯತೆ, ಬೇಜವಾಬ್ದಾರಿ ಹಾಗೂ ಶಿಸ್ತಿನ ಇಲಾಖೆ ಘನತೆ ಗೌರವಗಳಿಗೆ ಕುಂದುಬರುವಂತೆ ವರ್ತಿಸಿರುವ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.