ಆ್ಯಪ್ನಗರ

ಸಾಲ ಮನ್ನಾಗೆ ನನ್ನ ವಿರೋಧವಿಲ್ಲ: ಸಿದ್ದರಾಮಯ್ಯ

ಸಾಲಮನ್ನಾಗೆ ನನ್ನ ಯಾವುದೇ ವಿರೋಧ ಇಲ್ಲ, ನಾನು ಕಳೆದ ಸಾರಿ ಸಾಲ ಮನ್ನಾ ಮಾಡಲಿಲ್ಲವೇ, ನಾನು ಸಾಲ ಮನ್ನಾದ ಪರವಾಗಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Vijaya Karnataka Web 16 Jun 2018, 2:24 pm
ಬೆಂಗಳೂರು: ಸಾಲಮನ್ನಾಗೆ ನನ್ನ ಯಾವುದೇ ವಿರೋಧ ಇಲ್ಲ, ನಾನು ಕಳೆದ ಸಾರಿ ಸಾಲ ಮನ್ನಾ ಮಾಡಲಿಲ್ಲವೇ, ನಾನು ಸಾಲ ಮನ್ನಾದ ಪರವಾಗಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Vijaya Karnataka Web cm siddaram


ಕಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವರ್ಷ ನನ್ನನ್ನು ಯಾರೂ ಟಚ್‌ ಮಾಡಲಾಗದು ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅವರನ್ನೇ ಕೇಳಿ. ಅವರು ಏನಕ್ಕೆ ಹೇಳಿದ್ದಾರೋ ನನಗೆ ಅರ್ಥ ಆಗಿಲ್ಲ, ಅರ್ಥ ಆಗುವುದು ಬೇಡ ಎಂದರು.

ಸಂಪುಟ ವಿಸ್ತರಣೆ ಮಾಡುತ್ತೇವೆ. ಈಗಲೇ ಮಾಡುತ್ತೇವೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ನಿಗಮ ಮಂಡಳಿ ಅಧ್ಯಕ್ಷರ ನೇಮಕ ಬಳಿಕ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಿಮ್ಮ ಹೆಸರು ಕೇಳಿಬಂದಿರುವ ವಿಚಾರದ ಬಗ್ಗೆ ಪ್ರಶ್ನಿಸಿದಾಗ, ಇದರ ಬಗ್ಗೆ ನನಗೆ ಆಸಕ್ತಿ ಇಲ್ಲ, ನಾಯಕರು ಕುಳಿತು ಅದರ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಉತ್ತರಿಸಿದರು.

ಈಗಾಗಲೇ ಮಂಡಿಸಿದ ಬಜೆಟ್‌ನಲ್ಲಿ ಸಿಎಂ ಕುಮಾರಸ್ವಾಮಿ ಕೆಲವನ್ನು ಸೇರಿಸಬಹುದು. ನಾವು ಮಂಡಿಸಿದ ಬಜೆಟ್ ಮುಂದುವರಿಯುತ್ತದೆ. ನಾನು ಅಡ್ಮಿನಿಸ್ಟ್ರೇಷನ್‌ಗೆ ಕೈಹಾಕಲ್ಲ, ಅದನ್ನು ಸಂಬಂಧಿಸಿದ ಮಿನಿಸ್ಟರ್ ಹತ್ತಿರ ಕೇಳಬೇಕು. ನಾನು ಸಮನ್ವಯ ಸಮಿತಿ ಅಧ್ಯಕ್ಷ ಅಧ್ಯಕ್ಷ ಅಷ್ಟೆ ಎಂದು ಸಿದ್ದರಾಮಯ್ಯ ಹೇಳಿದರು.

ಲೋಕಸಭೆ ಚುನಾವಣೆ ಇದೆ, ಅದಕ್ಕೆ ರೆಡಿ ಆಗಬೇಕಲ್ವ, ಹೀಗಾಗಿ ರೆಸ್ಟ್‌ಗಾಗಿ ಧರ್ಮಸ್ಥಳಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದರು.
l

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ