ಆ್ಯಪ್ನಗರ

'ಸಿಮಿ' ರೂಪಾಂತರ ಸಂಘಟನೆಗಳಿಗೆ ಬೆಂಬಲ ಸಲ್ಲದು, ಪ್ರತಿಪಕ್ಷಗಳಿಗೆ ಗೃಹ ಸಚಿವ ಬೊಮ್ಮಾಯಿ ತಾಕೀತು

ಮಂಗಳೂರು ಗಲಭೆ ವಿಚಾರ ಕುರಿತು ಕಳೆದ ಮೂರು ದಿನಗಳಿಂದ ನಡೆದ ಚರ್ಚೆಗೆ ಪರಿಷತ್ತಿನಲ್ಲಿ ಗುರುವಾರ ಸುದೀರ್ಘ ಉತ್ತರ ನೀಡಿದ ಬೊಮ್ಮಾಯಿ "ಸಮಾಜದಲ್ಲಿ ಆಶಾಂತಿ ಸೃಷ್ಟಿಸಿ, ಸ್ವಾಸ್ಥ್ಯ ಹಾಳುಗೆಡುವ ದುರುದ್ದೇಶದ ಇಂತಹ (ಪಿಎಫ್‌ಐ, ಎಸ್‌ಡಿಪಿಐ) ಸಂಘಟನೆಗಳ ಕೃತ್ಯಗಳಿಗೆ ಯಾವ ರಾಜಕೀಯ ಪಕ್ಷ, ನಾಯಕರೂ ಬೆಂಬಲ ಕೊಡಬಾರದು," ಎಂದು ಮನವಿ ಮಾಡಿಕೊಂಡರು.

Vijaya Karnataka 20 Feb 2020, 8:51 pm

ಬೆಂಗಳೂರು: ಹಿಂದಿನ 'ಸಿಮಿ' ಸಂಘಟನೆಯ ರೂಪಾಂತರವೇ ಈಗಿನ ಎಸ್‌ಡಿಪಿಐ, ಪಿಎಫ್‌ಐ. ಕಾನೂನು -ಸುವ್ಯವಸ್ಥೆ ಹಾಳುಗೆಡವಿ ಸಮಾಜದಲ್ಲಿ ಹಿಂಸೆ ಹುಟ್ಟುಹಾಕುವ ಈ ದುಷ್ಟಕೂಟವನ್ನು ಮಟ್ಟಹಾಕಲು ಸರಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಗುಡುಗಿದ್ದಾರೆ.
Vijaya Karnataka Web Basavaraj Bommai


ಮಂಗಳೂರು ಗಲಭೆ ವಿಚಾರ ಕುರಿತು ಕಳೆದ ಮೂರು ದಿನಗಳಿಂದ ನಡೆದ ಚರ್ಚೆಗೆ ಪರಿಷತ್ತಿನಲ್ಲಿ ಗುರುವಾರ ಸುದೀರ್ಘ ಉತ್ತರ ನೀಡಿದ ಬೊಮ್ಮಾಯಿ "ಸಮಾಜದಲ್ಲಿ ಆಶಾಂತಿ ಸೃಷ್ಟಿಸಿ, ಸ್ವಾಸ್ಥ್ಯ ಹಾಳುಗೆಡುವ ದುರುದ್ದೇಶದ ಇಂತಹ ಸಂಘಟನೆಗಳ ಕೃತ್ಯಗಳಿಗೆ ಯಾವ ರಾಜಕೀಯ ಪಕ್ಷ, ನಾಯಕರೂ ಬೆಂಬಲ ಕೊಡಬಾರದು," ಎಂದು ಮನವಿ ಮಾಡಿಕೊಂಡರು.

"ಮಂಗಳೂರು ಗಲಭೆಯಲ್ಲಿ ಮೃತಪಟ್ಟವರು ಅಮಾಯಕರಲ್ಲ. ಅಬ್ದುಲ್‌ ಜಲೀಲ್‌ ವಿರುದ್ಧ ಒಂದು ಪ್ರಕರಣ ಇದ್ದು, ನೌಶಿನ್‌ ಕೂಡ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ. ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶ ಸರಕಾರದ್ದಲ್ಲ. ಆದರೆ, ಮಂಗಳೂರು ಗಲಭೆ ಹಿಂದೆ ಸಾಮಾಜಿಕ ಸ್ವಾಸ್ಥ್ಯ ಹಾಳುಮಾಡುವ ವ್ಯವಸ್ಥಿತ ಹಿಂಸೆಯ ಪಿತೂರಿ ಇತ್ತು. ಹೀಗಾಗಿ, ಕಾನೂನು -ಸುವ್ಯವಸ್ಥೆ ಕಾಪಾಡಲು ಪೊಲೀಸರು ಅನಿವಾರ್ಯವಾಗಿ ಗೋಲಿಬಾರ್‌ ನಡೆಸುವುದು ಅನಿವಾರ್ಯವಾಗಿತ್ತು. ಈ ವಿಚಾರದಲ್ಲಿ ಪೊಲೀಸ್‌ ವೈಫಲ್ಯ ಅಥವಾ ಲೋಪ ಆಗಿಲ್ಲ," ಎಂದು ಸಮರ್ಥಿಸಿಕೊಂಡರು.

ಪ್ರವಾಹ ನಿರ್ವಹಣೆಯಲ್ಲಿ ಬಿಎಸ್‌ವೈ ಸರ್ಕಾರ ವಿಫಲ, ಸದನದಲ್ಲಿ ಸಿದ್ದರಾಮಯ್ಯ ಗದಾಪ್ರಹಾರ


ಕೇಸ್‌ ಹಿಂಪಡೆದಿದ್ದು ಪ್ರೇರಣೆಯಾಯ್ತು!

''ಮೈಸೂರು, ಶಿವಮೊಗ್ಗ, ಹಾಸನ ಭಾಗದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸಿದ್ದ ಎಸ್‌ಡಿಪಿಐ, ಎಸ್‌ಎಫ್‌ಐ ವಿರುದ್ಧದ 175 ಪ್ರಕರಣಗಳನ್ನು ಹಿಂದಿನ ಸರಕಾರಗಳು ವಾಪಸ್‌ ಪಡೆದಿದ್ದು ಈ ಸಂಘಟನೆಗಳ ದುಷ್ಕೃತ್ಯಗಳಿಗೆ ಪ್ರೇರಣೆಯಾಯಿತು. ಮೊಕದ್ದಮೆಗಳನ್ನು ವಾಪಸ್‌ ಪಡೆಯುವ ತೀರ್ಮಾನಕ್ಕೆ ಸದುದ್ದೇಶ ಇದ್ದರೂ, ಈ ವಿಚಾರದಲ್ಲಿ ಜಾಗರೂಕತೆ ವಹಿಸಬೇಕಾಗುತ್ತದೆ. ತಮ್ಮದೇ ಗುರಿಯೊಂದಿಗೆ ವ್ಯವಸ್ಥಿತ ಜಾಲ ಹೆಣೆದು ಕಾರ್ಯನಿರ್ವಹಿಸುವ ಇಂತಹ ಸಂಘಟನೆಗಳನ್ನು ಪಕ್ಷಭೇದವಿಲ್ಲದೆ ನಾವೆಲ್ಲರೂ ಒಟ್ಟಾಗಿ ನಿಗ್ರಹಿಸುವ ಕೆಲಸ ಮಾಡಬೇಕಿದೆ'' ಎಂದು ಬೊಮ್ಮಾಯಿ ಪ್ರತಿಪಕ್ಷಗಳಿಗೆ ಮನವಿ ಮಾಡಿದರು.

'ನನಗೆ ಶಿಸ್ತಿನ ಪಾಠ ಮಾಡಬೇಡಿ' ಸ್ಪೀಕರ್‌ ವಿರುದ್ಧ ರಾಮಲಿಂಗಾ ರೆಡ್ಡಿ ಗರಂ

ನ್ಯಾಯಾಂಗ ತನಿಖೆ ಅಗತ್ಯವಿಲ್ಲ

''ರಾಜ್ಯದಲ್ಲಿ ಹಿಂದೆಯೂ ಹಲವಾರು ಗೋಲಿಬಾರ್‌ ಪ್ರಕರಣಗಳು ನಡೆದಿದ್ದು, ನ್ಯಾಯಾಂಗ ತನಿಖೆಗಳು ಆಗಿವೆ. ಆದರೆ, ಅದರಿಂದ ಏನು ಪ್ರಯೋಜನವಾಗಿದೆ? ಮಂಗಳೂರು ಗೋಲಿಬಾರ್‌ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಯ ಅಗತ್ಯ ಇಲ್ಲ. ಮ್ಯಾಜಿಸ್ಟೀರಿಯಲ್‌ ತನಿಖೆ ಜತೆಜತೆಗೆ, ಸಿಐಡಿ ತನಿಖೆಯೂ ನಡೆಯುತ್ತಿದೆ ಮತ್ತು ಈ ತೀರ್ಮಾನ ಬದಲಾವಣೆ ಇಲ್ಲ'' ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ