ಆ್ಯಪ್ನಗರ

ಡಿನೋಟಿಫಿಕೇಷನ್‌ ಪ್ರಕರಣ: ಬಿಎಸ್‌ವೈಗೆ ಸುಪ್ರೀಂಕೋರ್ಟ್‌ ಒಂದೇ ದಾರಿ

ಡಿನೋಟಿಫಿಕೇಷನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಕೋರ್ಟ್‌ ನಡೆಸುತ್ತಿರುವ ವಿಚಾರಣೆ ರದ್ದುಗೊಳಿ ಸಲು ಹೈಕೋರ್ಟ್‌ ನಿರಾಕರಿಸಿದ್ದು, ಸಿಎಂ ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟ್‌ ಮೊರೆ ಹೋಗುವುದೊಂದೇ ಸದ್ಯಕ್ಕಿರುವ ದಾರಿ ಎನ್ನಲಾಗಿದೆ.

Vijaya Karnataka Web 24 Dec 2020, 12:43 pm
ಬೆಂಗಳೂರು: ದೇವರಬೀಸನಹಳ್ಳಿ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಲೋಕಾಯುಕ್ತ ಕೋರ್ಟ್‌ ನಡೆಸುತ್ತಿರುವ ವಿಚಾರಣೆ ರದ್ದುಗೊಳಿ ಸಲು ಹೈಕೋರ್ಟ್‌ ನಿರಾಕರಿಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟ್‌ ಮೊರೆ ಹೋಗುವುದೊಂದೇ ಸದ್ಯಕ್ಕಿರುವ ದಾರಿ.
Vijaya Karnataka Web BS yediyurappa


ತಕ್ಷಣಕ್ಕೆ ಅವರು ಸುಪ್ರೀಂಕೋರ್ಟ್‌ನಲ್ಲಿ ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ, ಮಧ್ಯಂತರ ತಡೆಯಾಜ್ಞೆ ಪಡೆದು ತಾತ್ಕಾಲಿಕ ರಿಲೀಫ್‌ ಪಡೆದು ಕೊಳ್ಳಬಹುದು. ಆನಂತರ ಆರ್‌.ವಿ. ದೇಶಪಾಂಡೆ ಪ್ರಕರಣದಲ್ಲಿ ಹೈಕೋರ್ಟ್‌ ತೀರ್ಪು ಮುಂದಿಟ್ಟು ಕೊಂಡು ಪ್ರಕರಣ ರದ್ದುಗೊಳಿಸಲು ಕೋರಬಹುದು. ಸದ್ಯ ಸುಪ್ರೀಂಕೋರ್ಟ್‌ಗೆ ಚಳಿಗಾಲದ ರಜೆ ಇರುವುದರಿಂದ ಜ.4ರ ನಂತರ ಮುಖ್ಯಮಂತ್ರಿ ಬಿಎಸ್‌ವೈ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಕೋರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕ್ರಿಮಿನಲ್‌ ಪ್ರಕರಣಗಳಲ್ಲಿ ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠದಲ್ಲಿಪ್ರಶ್ನಿಸಲು ಅವಕಾಶವಿಲ್ಲ. ಹಾಗಾಗಿ, ಸುಪ್ರೀಂಕೋರ್ಟ್‌ ಮೊರೆ ಹೋಗುವು ದೊಂದೇ ಬಿಎಸ್‌ವೈ ಮುಂದಿರುವ ದಾರಿ. ಅವರು ಮುಖ್ಯಮಂತ್ರಿಯಂತಹ ಪ್ರಭಾವಿ ಹುದ್ದೆಯಲ್ಲಿರುವುದರಿಂದ ಆದಷ್ಟು ಬೇಗ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಅಲ್ಲಿಂದ ತಡೆಯಾಜ್ಞೆ ಪಡೆದುಕೊಳ್ಳಬೇಕು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಿರಿಯ ಕಾನೂನು ತಜ್ಞ ಹಾಗೂ ಮಾಜಿ ಅಡ್ವೊಕೇಟ್‌ ಜನರಲ್‌ ಬಿ.ವಿ. ಆಚಾರ್ಯ ''ಸಾಮಾನ್ಯ ಕ್ರಿಮಿನಲ್‌ ಪ್ರಕರಣಗಳಂತೆ ಇದರಲ್ಲೂ ಬಿ.ಎಸ್‌. ಯಡಿಯೂರಪ್ಪ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿ ತಡೆಯಾಜ್ಞೆ ಪಡೆದುಕೊಳ್ಳಬಹುದು. ಆನಂತರ ಪ್ರಕರಣದ ರದ್ದು ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಿ ಪರಿಹಾರ ಪಡೆದು ಕೊಳ್ಳಬಹುದು,'' ಎಂದರು.

ಬಿಎಸ್‌ವೈ ಬೆಂಬಿಡದ ಡಿನೋಟಿಫಿಕೇಷನ್ ಕೇಸ್‌, ಲೋಕಾಯುಕ್ತ ತನಿಖೆ ತೀವ್ರಗೊಳಿಸಲು ಹೈಕೋ

ದೇಶಪಾಂಡ ತೀರ್ಪು ವರದಾನ?:
ವಾಸುದೇವರೆಡ್ಡಿ ನೀಡಿದ್ದ ಡಿನೋಟಿಫಿಕೇಷನ್‌ ದೂರಿನನ್ವಯವೇ ಮಾಜಿ ಸಚಿವ ಆರ್‌.ವಿ.ದೇಶಪಾಂಡೆ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ 2015ರ ಅ.9ರಂದು ರದ್ದುಗೊಳಿಸಿದೆ. ಅದೇ ದೂರಿನನ್ವಯವೇ ಬಿಎಸ್‌ವೈ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್‌ ದಾಖಲಾಗಿದೆ. ಹಾಗಾಗಿ, ಹೈಕೋರ್ಟ್‌ನ ಆ ತೀರ್ಪು ಆಧರಿಸಿ ಯಡಿಯೂರಪ್ಪ ಸುಪ್ರೀಂಕೋರ್ಟ್‌ ನಿಂದ ಪರಿಹಾರ ಪಡೆಯಬಹುದು. ಹೈಕೋರ್ಟ್‌ ಮುಂದೆಯೂ ಯಡಿಯೂರಪ್ಪ ಪರ ವಕೀಲರು, ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಪ್ರಕರಣದ ವಾದವನ್ನೇ ಮುಂದಿಟ್ಟಿದ್ದರು. ಆದರೆ, ಏಕಸದಸ್ಯ ಪೀಠದ ನ್ಯಾ.ಜಾನ್‌ ಮೈಕೆಲ್‌ ಕುನ್ಹಾ ಆ ವಾದ ತಳ್ಳಿಹಾಕಿದ್ದಾರೆ. ಇದೀಗ ಸುಪ್ರೀಂನಲ್ಲಿದೇಶಪಾಂಡೆ ಪ್ರಕರಣದ ಅಂಶಗಳನ್ನೇ ಪುನಃ ಪ್ರಸ್ತಾಪಿಸ ಬಹುದಾಗಿದೆ. ಅಧಿಲ್ಲದೆ, ಇತರೆ ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ತೀರ್ಪುಗಳನ್ನೂ ಉಲ್ಲೇ ಖಿಸಿ ಪರಿಹಾರ ಪಡೆದು ಕೊಳ್ಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ