ಆ್ಯಪ್ನಗರ

ಸುಪ್ರೀಂಕೋರ್ಟ್‌ ತೀರ್ಪಿಗೆ ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಏನಂದ್ರು ಗೊತ್ತಾ?

ಅನರ್ಹತೆ ಪ್ರಕರಣವನ್ನು ಸುಪ್ರೀಂ ಎತ್ತಿ ಹಿಡಿದಿರುವುದರಿಂದ ಈ ಶಾಸಕರು ಅನರ್ಹತೆ ಅನುಭವಿಸುವಂಥ ತಪ್ಪು ಮಾಡಿದ್ದಾರೆ ಎಂಬುದನ್ನು ನ್ಯಾಯಾಲಯದ ತೀರ್ಪು ಸಾಬೀತುಪಡಿಸಿದೆ ಎಂದು ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಹೇಳಿದ್ದಾರೆ.

Vijaya Karnataka Web 13 Nov 2019, 9:58 pm
ಬೆಂಗಳೂರು: ಅನರ್ಹತೆ ಪ್ರಕರಣವನ್ನು ಸುಪ್ರೀಂ ಎತ್ತಿ ಹಿಡಿದಿರುವುದರಿಂದ ಈ ಶಾಸಕರು ಅನರ್ಹತೆ ಅನುಭವಿಸುವಂಥ ತಪ್ಪು ಮಾಡಿದ್ದಾರೆ ಎಂಬುದನ್ನು ನ್ಯಾಯಾಲಯ ಒಪ್ಪಿಕೊಂಡಂತಾಗಿದೆ. ಆದರೆ, ಆ ತಪ್ಪಿಗೆ ನೀಡಿದ ಶಿಕ್ಷೆ ಏನು ? ಎಂಬುದು ಅರ್ಥವಾಗುತ್ತಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಶಾಸಕರ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪಿಗೆ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Vijaya Karnataka Web supreme court judgment on karnataka disqualified mla x speaker ramesh kumar statement
ಸುಪ್ರೀಂಕೋರ್ಟ್‌ ತೀರ್ಪಿಗೆ ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಏನಂದ್ರು ಗೊತ್ತಾ?


ಸುಪ್ರೀಂ ಕೋರ್ಟ್‌ನಲ್ಲಿ ಗೆದ್ದ ಅನರ್ಹರಿಗೆ ಜನತಾ ನ್ಯಾಯಾಲಯದಲ್ಲಿ ಅಗ್ನಿಪರೀಕ್ಷೆ

ಪಕ್ಷಾಂತರ ಪಿಡುಗು ಪ್ರಜಾಪ್ರಭುತ್ವದ ಬುನಾದಿ ಅಲ್ಲಾಡಿಸುತ್ತದೆ ಎಂಬ ಕಾರಣಕ್ಕೆ ಪಕ್ಷಾಂತರ ನಿಷೇಧ ಕಾಯಿದೆ ರಚಿಸಿ ಸಂವಿಧಾನದ 10ನೇ ಪರಿಚ್ಛೇದಕ್ಕೆ ಸೇರಿಸಲಾಗಿತ್ತು. ಅದರ ಅನುಷ್ಠಾನದ ಜವಾಬ್ದಾರಿ ಸ್ಪೀಕರ್‌ ಕೊರಳಿಗೆ ಕಟ್ಟಲಾಗಿದೆ. ಸಭಾಧ್ಯಕ್ಷ ಕಾನೂನು ಪಂಡಿತನಾಗಿರಬೇಕೆಂಬ ನಿಯಮ ನಮ್ಮ ದೇಶದಲ್ಲಿಲ್ಲ. ಲಭ್ಯವಿರುವ ನ್ಯಾಯ-ಅನ್ಯಾಯಗಳನ್ನು ತುಲನೆ ಮಾಡಿ ನಿರ್ಣಯ ಕೊಡುತ್ತಾನೆ. ಈ ಪ್ರಕರಣದಲ್ಲಿ ನಾನು ಮಾಡಿದ್ದಿಷ್ಟೇ.

ಬೆಂಗಳೂರಿಗೆ ವಾಪಸ್ ಆದ್ರು ಅನರ್ಹ ಶಾಸಕರು; ಬೆಂಬಲಿಗರಿಂದ ಭರ್ಜರಿ ಸ್ವಾಗತ

ಒಂದು ಪಕ್ಷದ ಸದಸ್ಯನಾಗಿ ಆಯ್ಕೆಯಾದವರು ಗುಂಪಾಗಿ ರಾಜೀನಾಮೆ ಕೊಟ್ಟಾಗ ಅದರ ಸಹಜತೆ ಬಗ್ಗೆ ಪರಿಶೀಲಿಸಿ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಕಾನೂನು ಪ್ರಕಾರ ಸ್ಪೀಕರ್‌ ನೀಡಲಾಗಿದೆ. ಇದರ ಆಧಾರದ ಮೇಲೆ ನನ್ನ ನಿರ್ಣಯ ಪ್ರಕಟಿಸಿದ್ದೆ. ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿರುವುದೇಕೆ? ಶಾಸಕತ್ವಕ್ಕೆ ಅನರ್ಹರಾದವರು ಮತ್ತೆ ಹೇಗೆ ಜನರ ಮುಂದೆ ತೆರಳಿ ಮತ ಕೇಳುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದರು.

ರಾಜೀನಾಮೆ ಎಂಬುದು ಪ್ರಜಾಪ್ರಭುತ್ವದಲ್ಲಿ ಗೌರವಯುತ ಅಸ್ತ್ರ. ಇದು ನಿಲುವಿಗೆ ಮತ್ತು ಸಿದ್ಧಾಂತಕ್ಕೆ ಸಂಬಂಧಪಟ್ಟಿದ್ದು. ಹಿಂದೆ ಲಾಲ್‌ ಬಹದ್ದೂರ್‌ ಶಾಸ್ತ್ರಿ, ಚಂದ್ರಶೇಖರ್‌ ಮೊದಲಾದವರು ಸಿದ್ಧಾಂತ ಮತ್ತು ನಿಲುವಿಗಾಗಿ ರಾಜೀನಾಮೆ ನೀಡಿದ್ದರು. ಆದರೆ ಇಲ್ಲಿಆ ರೀತಿ ಆಗಿರಲಿಲ್ಲ. ಹೀಗಾಗಿ ನಾನು ಅನರ್ಹತೆ ಅಸ್ತ್ರ ಪ್ರಯೋಗಿಸಿದ್ದೆ. ಸುಪ್ರೀಂಕೋರ್ಟ್‌ ಈ ಆದೇಶ ಎತ್ತಿ ಹಿಡಿದಿದೆ. ಇದರರ್ಥ ಪಕ್ಷಾಂತರ ನಿಷೇಧ ಕಾಯಿದೆಯ ಯಾವುದೋ ಅಂಶವನ್ನು ಇವರು ಉಲ್ಲಂಘಿಘಿಸಿದ್ದಾರೆ ಎಂದಾಯಿತು ಎಂದಿದ್ದಾರೆ.

ಸುಪ್ರೀಂಕೋರ್ಟ್‌ ಆದೇಶವನ್ನು ಇಡಿ ರಾಷ್ಟ್ರ ಗೌರವಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನಂಬಿಕೆ ಹೊಂದಿರುವ ನಾನು ನ್ಯಾಯಾಲಯದ ಆದೇಶಕ್ಕೆ ಬದ್ಧನಾಗಿರುತ್ತೇನೆ. ಈ ಪ್ರಕರಣದಲ್ಲಿ ನಾನು ವಾದಿಯೂ ಅಲ್ಲ. ಪ್ರತಿವಾದಿಯೂ ಅಲ್ಲ. ಹೀಗಾಗಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೇಲ್ಮನವಿ ಸಲ್ಲಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರು ಹೊಸ ಕ್ರಾಂತಿ ಮಾಡುತ್ತಿದ್ದಾರೆ. ದೇಶದಲ್ಲಿಸುಧಾರಣೆ ತರುವುದಕ್ಕಾಗಿಯೇ ಇವರಿಬ್ಬರು ಜನ್ಮ ತಾಳಿರಬಹುದು ಎಂಬ ಭಾವನೆ ಇದೆ. ಹೀಗಾಗಿ ಅವರಾದರೂ ಸುಧಾರಣೆ ತರುತ್ತಾರೋ ಅಥವಾ ಇದ್ದ ವ್ಯವಸ್ಥೆಯೇ ಸಾಕು ಎನ್ನುತ್ತಾರೋ ನೋಡೋಣ ಎಂದು ಸುಪ್ರೀಂ ತೀರ್ಪು ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ