ಆ್ಯಪ್ನಗರ

ಸಂಪರ್ಕಕ್ಕೆ ಹಿಂದಿ ಅವಶ್ಯಕ, ಆದರೆ ಕನ್ನಡ ಕಡೆಗಣನೆ ಬೇಡ: ಸುರೇಶ್‌ ಅಂಗಡಿ

ಹಿಂದಿ ನಮ್ಮ ರಾಷ್ಟ್ರೀಯ ಭಾಷೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಂಪರ್ಕ ಸಾಧಿಸಬೇಕಾದ್ರೆ ಹಿಂದಿ ಅವಶ್ಯಕ. ಎಲ್ಲ ಭಾಷೆಗಳನ್ನೂ ಕಲಿಯುವುದು ಉತ್ತಮ ಬೆಳವಣಿಗೆ. ಆದ್ರೆ ಕನ್ನಡ ಭಾಷೆಯನ್ನ ಕಡೆಗಣಿಸಬಾರದು ಎಂದು ಸುರೇಶ್‌ ಅಂಗಡಿ ಹೇಳಿದರು.

Vijaya Karnataka Web 3 Jun 2019, 8:35 pm
ಹುಬ್ಬಳ್ಳಿ: ಮತದಾರರು ಆಶೀರ್ವಾದಿಸಿ ಗೆಲ್ಲಿಸಿದ್ದಾರೆ ನಾನು ಯಾವಾಗಲೂ ಆಭಾರಿಯಾಗಿದ್ದೇನೆ ಎಂದು ಕೇಂದ್ರ ಸಚಿವ ಸುರೇಶ್‌ ಅಂಗಡಿ ತಿಳಿಸಿದ್ದಾರೆ.
Vijaya Karnataka Web ಸುರೇಶ್‌ ಅಂಗಡಿ
ಸುರೇಶ್‌ ಅಂಗಡಿ


ಹುಬ್ಬಳ್ಳಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಡ್ಡಾಯ ಹಿಂದಿ ಹೇರಿಕೆ ವಿಚಾರ ಕುರಿತು ಸಚಿವರು ಸ್ಪಷ್ಟನೆ ನೀಡಿದರು.

ಹಿಂದಿ ನಮ್ಮ ರಾಷ್ಟ್ರೀಯ ಭಾಷೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಂಪರ್ಕ ಸಾಧಿಸಬೇಕಾದ್ರೆ ಹಿಂದಿ ಅವಶ್ಯಕ. ಎಲ್ಲ ಭಾಷೆಗಳನ್ನೂ ಕಲಿಯುವುದು ಉತ್ತಮ ಬೆಳವಣಿಗೆ. ಆದ್ರೆ ಕನ್ನಡ ಭಾಷೆಯನ್ನ ಕಡೆಗಣಿಸಬಾರದು ಎಂದರು.

ಯಾವುದೇ ಸ್ಥಾನವಾದರೂ ಜನರ ಸೇವೆ ಮಾಡುವಂತದ್ದು ಸಣ್ಣ ಸ್ಥಾನ ದೊಡ್ಡ ಸ್ಥಾನ‌ ಅಂತಾ ಅಂದುಕೊಳ್ಳೋದು ಸರಿಯಲ್ಲ. ಯಾವುದೇ ಸ್ಥಾನದಲ್ಲಿದ್ದರೂ ಜನರ ಸೇವೆ ಮಾಡಬೇಕಾಗುತ್ತದೆ. ನರೇಂದ್ರ ಮೋದಿಯವರೇ ಪೊರಕೆ ಹಿಡಿದು ಸ್ವಚ್ಚತೆಗೆ ಮುಂದಾಗಿದ್ದಾರೆ. ಅವರು ಯಾವತ್ತಾದರೂ ಅದು ಸಣ್ಣ ಕೆಲಸ ಅಂದುಕೊಂಡಿದ್ದಾರೆ ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಹೇಳಿಕೆಗೆ ಸುರೇಶ್‌ ಅಂಗಡಿ ತಿರುಗೇಟು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ