ಆ್ಯಪ್ನಗರ

Viral Video: ಕೈಲಾಸದಲ್ಲಿ ಹೆರಿಗೆಯಾದ್ರೆ ಮಗುವಿಗೆ ಅಲೌಕಿಕ ಶಕ್ತಿಯ ಡಿಎನ್ಎ ಅಳವಡಿಕೆ: ಜಗತ್ತಿನ ಮಹಿಳೆಯರಿಗೆ ನಿತ್ಯಾನಂದನ ಆಫರ್!

ವಿಡಿಯೋದ ತುಣುಕಿನ ಆರಂಭದಲ್ಲಿ ಆತ, ಕೈಲಾಸದಲ್ಲಿ ಸದ್ಯದಲ್ಲೇ ಇಡೀ ಬ್ರಹ್ಮಾಂಡಕ್ಕಾಗಿಯೇ ಮೀಸಲಾಗಿರುವ ಪರ್ಮನೆಂಟ್ ಕಾಸ್ಮಿಕ್ ಏರ್ ಪೋರ್ಟ್ ಹಾಗೂ ಹೆರಿಗೆ ಆಸ್ಪತ್ರೆಯನ್ನು ಸದ್ಯದಲ್ಲೇ ನಿರ್ಮಿಸಲಾಗುತ್ತದೆ. ಇಲ್ಲಿ ಹೆರಿಗೆಯಾಗುವ ಪ್ರತಿ ಮಗುವಿಗೂ ಪ್ರಬುದ್ಧವಾದಂಥ ಅಲೌಕಿಕವಾದ ಪ್ರಕಾಶಮಾನವಾದ ಶಕ್ತಿಯುಳ್ಳ ಡಿಎನ್ಎ ಅಳವಡಿಸಲಾಗುತ್ತದೆ. ಜೊತೆಗೆ, ಬ್ರಹ್ಮಜ್ಞಾನವುಳ್ಳ ಅನುವಂಶೀಯ ಕೋಡ್ ಅನ್ನು ನೀಡಲಾಗುತ್ತದೆ. ಹಾಗಾಗಿ, ನೀವು ಎಲ್ಲೇ ಇರಿ, ಯಾವ ದೇಶದಲ್ಲೇ ಇರಿ ಅಲ್ಲೇ ಗರ್ಭಿಣಿಯಾಗಿರಿ. ಆದರೆ, ನೀವು ಪ್ರಸೂತಿಗಾಗಿ ನೀವು ಕೈಲಾಸವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದ್ದಾನೆ.

Authored byಚೇತನ್ ಓ.ಆರ್. | Vijaya Karnataka Web 7 Oct 2022, 5:07 pm
ಬೆಂಗಳೂರು: ದೇಶ ಬಿಟ್ಟು ಪರಾರಿಯಾಗಿ ದೂರದಲ್ಲೆಲ್ಲೋ ‘ಕೈಲಾಸ’ ಎಂಬ ಪ್ರತ್ಯೇಕ ರಾಷ್ಟ್ರವನ್ನು ಕಟ್ಟಿಕೊಂಡು, ತನ್ನದೇ ಪ್ರತ್ಯೇಕ ರಾಷ್ಟ್ರಧ್ವಜ, ಕರೆನ್ಸಿ, ಪಾಸ್ ಪೋರ್ಟ್ ವ್ಯವಸ್ಥೆ ಇತ್ಯಾದಿಗಳನ್ನು ಸೃಷ್ಟಿಸಿಕೊಂಡಿರುವ ಬಿಡದಿ ಸ್ವಾಮಿ ನಿತ್ಯಾನಂದ, ಈಗ ವಿಶ್ವದ ಎಲ್ಲಾ ಗರ್ಭಿಣಿ ಮಹಿಳೆಯರಿಗೆ ಹೆರಿಗೆಗೆ ತನ್ನ ದೇಶಕ್ಕೆ ಬರುವಂತೆ ಸಲಹೆ ನೀಡಿದ್ದಾನೆ.
Vijaya Karnataka Web Swami Nityananda
ಸ್ವಾಮಿ ನಿತ್ಯಾನಂದ (ಸಂಗ್ರಹ ಚಿತ್ರ)


ಕೈಲಾಸದಲ್ಲಿ ಹೆರಿಗೆಯಾಗುವ ಪ್ರತಿ ಮಗುವಿಗೆ, ಪ್ರಬುದ್ಧವಾದಂಥ ಅಲೌಕಿಕವಾದ ಪ್ರಕಾಶಮಾನವಾದ ಶಕ್ತಿಯುಳ್ಳ (enlightened supernal effulgence) ಡಿಎನ್ಎ ದಯಪಾಲಿಸುವುದಾಗಿ ಆತ ಹೇಳಿದ್ದಾನೆ. ಇದೂ ಸೇರಿದಂತೆ ಕೈಲಾಸದಲ್ಲಿ ಪ್ರಸವವಾದರೆ ಏನೇನು ಪ್ರಯೋಜನೆ ಎಂಬುದರ ಬಗ್ಗೆ ಪ್ರತ್ಯೇಕ ವಿಡಿಯೋವೊಂದನ್ನು ಮಾಡಿ ಆತ ಹರಿಬಿಟ್ಟಿದ್ದಾನೆ. ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.

'ನಿತ್ಯಾನಂದ ಜೊತೆ ಮದುವೆ ಆಗುವೆ..' ಎಂದಿದ್ದ ಪ್ರಿಯಾ ಆನಂದ್; ಕೊನೆಗೂ ಸ್ಪಷ್ಟನೆ ನೀಡಿದ 'ಜೇಮ್ಸ್' ನಟಿ!
ವಿಡಿಯೋದಲ್ಲಿ ಆತ ನೀಡುವ ಸಲಹೆಯೇನು?

ವಿಡಿಯೋದ ತುಣುಕಿನ ಆರಂಭದಲ್ಲಿ ಆತ, ಕೈಲಾಸದಲ್ಲಿ ಸದ್ಯದಲ್ಲೇ ಇಡೀ ಬ್ರಹ್ಮಾಂಡಕ್ಕಾಗಿಯೇ ಮೀಸಲಾಗಿರುವ ಪರ್ಮನೆಂಟ್ ಕಾಸ್ಮಿಕ್ ಏರ್ ಪೋರ್ಟ್ ಹಾಗೂ ಹೆರಿಗೆ ಆಸ್ಪತ್ರೆಯನ್ನು ಸದ್ಯದಲ್ಲೇ ನಿರ್ಮಿಸಲಾಗುತ್ತದೆ. ಇಲ್ಲಿ ಹೆರಿಗೆಯಾಗುವ ಪ್ರತಿ ಮಗುವಿಗೂ ಪ್ರಬುದ್ಧವಾದಂಥ ಅಲೌಕಿಕವಾದ ಪ್ರಕಾಶಮಾನವಾದ ಶಕ್ತಿಯುಳ್ಳ ಡಿಎನ್ಎ ಅಳವಡಿಸಲಾಗುತ್ತದೆ. ಜೊತೆಗೆ, ಬ್ರಹ್ಮಜ್ಞಾನವುಳ್ಳ ಅನುವಂಶೀಯ ಕೋಡ್ ಅನ್ನು ನೀಡಲಾಗುತ್ತದೆ.

ಹಾಗಾಗಿ, ನೀವು ಎಲ್ಲೇ ಇರಿ, ಯಾವ ದೇಶದಲ್ಲೇ ಇರಿ ಅಲ್ಲೇ ಗರ್ಭಿಣಿಯಾಗಿರಿ. ಆದರೆ, ನೀವು ಪ್ರಸೂತಿಗಾಗಿ ನೀವು ಕೈಲಾಸವನ್ನು ಆಯ್ಕೆ ಮಾಡಿಕೊಳ್ಳಿ. ಅದರಿಂದ ನಿಮಗೆ ಮೇಲೆ ಹೇಳಲಾಗಿರುವ ಪ್ರಯೋಜನಗಳು ಸಿಗುತ್ತವೆ ಎಂದು ಹೇಳಿದ್ದಾನೆ.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ