ಆ್ಯಪ್ನಗರ

ತಾಜ್‌ಮಹಲ್‌ ವೀಕ್ಷಣೆಗೆ ನೇರ ಫ್ಲೈಟ್‌

ಬೇಸಿಗೆ ಅವಧಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಆಗ್ರಾ ಸೇರಿ ನಾಲ್ಕು ಹೊಸ ದೇಶಿಯ ಮಾರ್ಗಗಳು ಹಾಗೂ 2 ಕಾರ್ಗೋ ಮತ್ತು ...

Vijaya Karnataka 28 Mar 2019, 5:00 am
ಬೆಂಗಳೂರು: ಬೇಸಿಗೆ ಅವಧಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಆಗ್ರಾ ಸೇರಿ ನಾಲ್ಕು ಹೊಸ ದೇಶಿಯ ಮಾರ್ಗಗಳು ಹಾಗೂ 2 ಕಾರ್ಗೋ ಮತ್ತು ಬೆಂಗಳೂರು-ಸಿಂಗಾಪುರ ನಡುವೆ ಐಷಾರಾಮಿ ವಿಮಾನ ಹಾರಾಟ ಆರಂಭವಾಗಲಿದೆ.
Vijaya Karnataka Web flight


ಮಾರ್ಚ್‌ 31ರಿಂದ ಅಕ್ಟೋಬರ್‌ 26ರವರೆಗೆ ಬೇಸಿಗೆ ಹಾರಾಟ ಅವಧಿ ಚಾಲ್ತಿಯಲ್ಲಿರಲಿದ್ದು, ವಿಮಾನಯಾನ ಕಂಪನಿಗಳು ವಿಶೇಷ ರಿಯಾಯಿತಿ ಒದಗಿಸಲಿವೆ.

ತಾಜ್‌ ಮಹಲ್‌ ನೋಡಲು ನೇರವಾಗಿ ಆಗ್ರಾ ವಿಮಾನ ನಿಲ್ದಾಣಕ್ಕೆ ಹಾಗೂ ನಾಶಿಕ್‌ಗೆ ಇಂಡಿಗೋ ಏರ್‌ಲೈನ್ಸ್‌, ಗ್ವಾಲಿಯರ್‌ಗೆ ಸ್ಪೈಸ್‌ ಜೆಟ್‌ ಮತ್ತು ಜಾಮ್‌ ನಗರಕ್ಕೆ ಸ್ಟಾರ್‌ ಏರ್‌ ವಿಮಾನಯಾನ ಕಂಪನಿಗಳು ನೇರ ವಿಮಾನ ಸೇವೆಯನ್ನು ಕೆಐಎನಿಂದ ಆರಂಭಿಸುತ್ತಿವೆ.

ಇದೇ ವೇಳೆ ಸೌದಿ ಅರೇಬಿಯಾ ಮೂಲದ ಏರ್‌ಲೈನ್‌ ಫೈನಾಸ್‌, ಮೊದಲ ಬಾರಿ ಬೆಂಗಳೂರಿನಿಂದ ಹಾರಾಟ ನಡೆಸುತ್ತಿದ್ದು, ಬೆಂಗಳೂರು-ಜೆದ್ದಾ ನಡುವೆ ವಾರಕ್ಕೆ ಮೂರು ಬಾರಿ ಹಾರಾಟ ನಡೆಸಲು ಮುಂದಾಗಿದೆ.

ಐಷಾರಾಮಿ ವಿಮಾನ ಏರ್‌ಬಸ್‌ ಎ350-900 ವಿಮಾನವನ್ನು ಸಿಂಗಾಪುರ್‌ ಏರ್‌ಲೈನ್ಸ್‌ ಬೆಂಗಳೂರು-ಸಿಂಗಾಪುರ ನಡುವೆ ವಾರಕ್ಕೆ ಹತ್ತು ಬಾರಿ ಹಾರಾಟ ಆರಂಭಿಸಲಿದೆ. ಕೆಐಎನಿಂದ ಎ350 ವಿಮಾನ ಹಾರಾಟವನ್ನು ಮೊದಲ ಬಾರಿ ಆರಂಭಿಸಿದ ವಿಮಾನಯಾನ ಕಂಪನಿ ಸಿಂಗಾಪುರ್‌ ಏರ್‌ಲೈನ್ಸ್‌ ಆಗಿದೆ. ಗರಿಷ್ಠ 350 ಸೀಟ್‌ಗಳಿರುವ ಎರಡು ಎಂಜಿನ್‌ಗಳ ದೊಡ್ಡ ವಿಮಾನದಲ್ಲಿ ಐಷಾರಾಮಿ ಸೀಟ್‌ ಸೌಲಭ್ಯ, ಸೇವೆಗಳನ್ನು ಒದಗಿಸಲಾಗುತ್ತದೆ.

ಇದೇ ವೇಳೆ ಸ್ಪೈಸ್‌ಜೆಟ್‌ ಹೆಚ್ಚುವರಿಯಾಗಿ ಸಿಂಗಾಪುರ ಮತ್ತು ಅಬುದಾಬಿ ನಡುವೆ ಮೇ ತಿಂಗಳಿಂದ ಹೆಚ್ಚುವರಿಯಾಗಿ ವಿಮಾನಗಳ ಹಾರಾಟ ಆರಂಭಿಸಲು ನಿರ್ಧರಿಸಿದೆ. ಇದರಿಂದ ಕೆಐಎನಿಂದ ಕಾರ್ಗೋ ಸಾಗಣೆ ಪ್ರಮಾಣ ಹೆಚ್ಚಳವಾಗಲಿದೆ.

''ನೂತನ ಸೇವೆಗಳಿಂದ ಬೆಂಗಳೂರು ನಗರ, ರಾಜ್ಯದ ಆರ್ಥಿಕ ಬೆಳವಣಿಗೆ ಮತ್ತಷ್ಟು ವೇಗ ಪಡೆಯಲಿದೆ. ನವ ಭಾರತದ ಗೇಟ್‌ವೇ ಎಂಬ ಅಗ್ಗಳಿಕೆಯನ್ನು ಕೆಐಎ ಪಡೆಯಲಿದೆ. ಬರುವ ದಿನಗಳಲ್ಲಿ ಮತ್ತಷ್ಟು ನೂತನ ಮಾರ್ಗಗಳು ಮತ್ತು ದೇಶ-ವಿದೇಶಗಳ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಕುರಿತು ಯೋಚಿಸುತ್ತೇವೆ'' ಎಂದು ನಿಲ್ದಾಣದ ಸಿಇಒ ಹರಿ ಮರಾರ್‌ ತಿಳಿಸಿದರು.

ಕೆಐಎನಿಂದ ಅಂತಾರಾಷ್ಟ್ರೀಯ ಮಾರ್ಗದ ಹಾರಾಟ

ಇಂಡಿಗೋ ಶೇ 15.3,

ಏರ್‌ ಇಂಡಿಯಾ ಶೇ.8.1

ದೇಶಿಯ ಮಾರ್ಗದ

ಇಂಡಿಗೋ ಶೇ.46.5 ,

ಸ್ಪೈಸ್‌ ಜೆಟ್‌ ಶೇ.13.8

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ