ಆ್ಯಪ್ನಗರ

ಸಂಬಳ ತೆಗೆದುಕೊಳ್ಳಿ, ಭ್ರಷ್ಟಾಚಾರ ಮಾಡ್ಬೇಡಿ! ಕೊರೊನಾ ನಿಧಿಗೆ ದೇಣಿಗೆ ನೀಡಿದ ರಾಜಕಾರಣಿಗಳಿಗೆ ಹೀಗೊಂದು ಮನವಿ

ಕೊರೊನಾ ನಿಧಿಗಾಗಿ ತಮ್ಮ ವೇತನವನ್ನು ದಾನ ಮಾಡುವ ರಾಜಕಾರಣಿಗಳನ್ನು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ರವಿಕೃಷ್ಣಾ ರೆಡ್ಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಬಳ ಬೇಕಾದರೆ ಮತ್ತಷ್ಟು ತೆಗೆದುಕೊಳ್ಳಿ ಆದರೆ ಭ್ರಷ್ಟಾಚಾರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

Vijaya Karnataka Web 1 Apr 2020, 1:42 pm
ಬೆಂಗಳೂರು: ಕೊರೊನಾ ಸೋಂಕು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಹಣಕಾಸು ಸಹಾಯವನ್ನು ಸಾಕಷ್ಟು ಜನರು ಮಾಡುತ್ತಿದ್ದಾರೆ. ಅದರಲ್ಲೂ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮಾಡಿರುವ ಮನವಿಗೆ ಶಾಸಕರು, ಸಚಿವರು ಸ್ಪಂದಿಸುತ್ತಿದ್ದಾರೆ. ಸ್ವತಃ ಸಿಎಂ ಬಿಎಸ್‌ವೈ ತಮ್ಮ ಒಂದು ವರ್ಷದ ವೇತನವನ್ನು ಕೊರೊನಾ ನಿಧಿಗಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರರೊಬ್ಬರು ನೀಡಿರುವ ಸಲಹೆ ಸಾಕಷ್ಟು ಗಮನಸೆಳೆಯುತ್ತಿದೆ.
Vijaya Karnataka Web ravikrishna reddy


ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟಗಾರರಾಗಿರುವ ರವಿ ಕೃಷ್ಣಾರೆಡ್ಡಿ ತಮ್ಮ ಫೇಸ್ ಬುಕ್‌ ಖಾತೆಯಲ್ಲಿ ರಾಜಕಾರಣಿಗಳಿಗೆ ನೀಡಿರುವ ಸಲಹೆ ಸದ್ದು ಮಾಡುತ್ತಿದೆ.

ಕೊರೊನಾ ಪರಿಹಾರ ನಿಧಿಗೆ ಒಂದು ವರ್ಷದ ವೇತನವನ್ನು ನೀಡಿದ ಬಿಎಸ್‌ವೈ

ಕೊರೊನಾ ನಿಧಿಗಾಗಿ ಮುಖ್ಯಮಂತ್ರಿ ಬಿಎಸ್‌ವೈ ಸೇರಿದಂತೆ ಶಾಸಕರು, ಸಂಸದರು ತಮ್ಮ ಸಂಬಳದ ದುಡ್ಡನ್ನು ನೀಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸ್ವಾಮಿ, ದಯವಿಟ್ಟು ಸಂಬಳ ತೆಗೆದುಕೊಳ್ಳಿ! ಆದರೆ ಈ ಒಂದು ವರ್ಷ ಯಾವುದೇ ಭ್ರಷ್ಟಾಚಾರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಕೊರೊನಾ ನಿಧಿಗಾಗಿ ವೇತನ ನೀಡುವ ರಾಜಕಾರಣಿಗಳೇ ಲಂಚ ತೆಗೆದುಕೊಳ್ಳಬೇಡಿ, ಕಮೀಷನ್ ಪಡೆಯಬೇಡಿ, ಸಾರ್ವಜನಿಕ ಆಸ್ತಿಗಳನ್ನು ಹೊಡೆಯಲು ಪ್ರಯತ್ನಿಸಬೇಡಿ, ಬೇಕಾದವರಿಗೆ ಅಕ್ರಮ ಲಾಭಗಳನ್ನು ಮಾಡಿಕೊಡಬೇಡಿ, ಸಾವಿರಾರು ಕೋಟಿ ರೂಪಾಯಿಗಳ ಅನಗತ್ಯ ಯೋಜನೆಗಳಿಗೆ ದುಡ್ಡು ವ್ಯಯಿಸಬೇಡಿ, ಸುಳ್ಳು ಬಿಲ್‌ಗಳ ಮೂಲಕ ಹಣ ಎಗರಿಸಬೇಡಿ ಎಂದಿದ್ದಾರೆ.

ಕೊರೊನಾ ಪರಿಹಾರ ನಿಧಿಗೆ ಕನಿಷ್ಠ 1 ಲಕ್ಷ ದೇಣಿಗೆ ನೀಡಿ; ಶಾಸಕರು, ಸಂಸದರಿಗೆ ಸಿದ್ದರಾಮಯ್ಯ ಮನವಿ

ದಯವಿಟ್ಟು ಇಷ್ಟು ಮಾಡಿ. ಆಗ ಈ ಕಠಿಣ ಪರಿಸ್ಥಿತಿಯಲ್ಲಿಯೂ ಸರ್ಕಾರದ ಬಳಿ ಖರ್ಚು ಮಾಡಲಾಗದಷ್ಟು ದುಡ್ಡು ಇರುತ್ತದೆ. ಸಾಲದೇ ಬಂದರೆ ಆಗ ಜನರೇ ಹೊಟ್ಟೆಬಟ್ಟೆ ಕಟ್ಟಿಯಾದರೂ ಕೊಡುತ್ತಾರೆ ಎಂದು ವ್ಯಂಗ್ಯದ ರೂಪದಲ್ಲಿ ರಾಜಕಾರಣಿಗಳಿಸಿ ಬಿಸಿ ಮುಟ್ಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ