ಆ್ಯಪ್ನಗರ

ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ

ವರ್ಗಾವಣೆಗೆ ಅವಕಾಶ ನೀಡಿದ್ರೆ ಉತ್ತರ ಕರ್ನಾಟಕದಲ್ಲಿ ಇದ್ದ ದಕ್ಷಿಣ ಭಾಗದ ಶಿಕ್ಷಕರು ವರ್ಗಾವಣೆ ಆಗುತ್ತೆ. ಇದರಿಂದ ನಮ್ಮ ಭಾಗದಲ್ಲಿ ತೊಂದರೆ ಉಂಟಾಗುತ್ತೆ ಎಂದು ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

Vijaya Karnataka Web 22 Sep 2021, 8:30 pm
ಬೆಂಗಳೂರು: 2021ನೇ ಸಾಲಿನ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿತು.
Vijaya Karnataka Web ವಿಧಾನಸೌಧ
ವಿಧಾನಸೌಧ


ಸಿವಿಲ್ ಸರ್ವಿಸ್ ಶಿಕ್ಷಕರ ವರ್ಗಾವಣೆ ತಿದ್ದುಪಡಿ ವಿಧೇಯಕಯನ್ನು ಸಚಿವ ಗೋವಿಂದ ಕಾರಜೋಳ ಮಂಡನೆ ಮಾಡಿದರು.ಆದರೆ ತಿದ್ದುಪಡಿ ವಿಧೇಯಕಕ್ಕೆ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ವರ್ಗಾವಣೆಗೆ ಅವಕಾಶ ನೀಡಿದ್ರೆ ಉತ್ತರ ಕರ್ನಾಟಕದಲ್ಲಿ ಇದ್ದ ದಕ್ಷಿಣ ಭಾಗದ ಶಿಕ್ಷಕರು ವರ್ಗಾವಣೆ ಆಗುತ್ತೆ. ಇದರಿಂದ ನಮ್ಮ ಭಾಗದಲ್ಲಿ ತೊಂದರೆ ಉಂಟಾಗುತ್ತೆ ಎಂದು ಶಾಸಕರಾದ ಎ ಎಸ್ ಪಾಟೀಲ್ ನಡಹಳ್ಳಿ, ವೆಂಕಟರಾವ್ ನಾಡಗೌಡ ಆಕ್ಷೇಪ ವ್ಯಕ್ತಪಡಿಸಿದರು.‌

ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ವಿಧೇಯಕ

ವಿಧೇಯಕದ ಬಗ್ಗೆ ಶಿಕ್ಷಣ ಸಚಿವ ನಾಗೇಶ್ ವಿವರಣೆ ನೀಡಿ, ಈಗಾಗಲೇ 2018-19 ರಲ್ಲಿ ಯಾರು ಕಡ್ಡಾಯ ವರ್ಗಾವಣೆ ಅದರವರಿಗೆ ಮಾತ್ರ ಮರು ವರ್ಗಾವಣೆಗೆ ಅವಕಾಶ ನೀಡಲಾಗಿದೆ.‌ ಇದರಿಂದ ಅಧ್ಯಾಪಕರಿಗೆ ಅನಾನುಕೂಲವಾದ ಕಾರಣ ಸುಗ್ರೀವಾಜ್ಞೆ ಮೂಲಕ ಅವಕಾಶ ಕೊಡಲಾಗಿದೆ. ಇದೀಗ ಅದನ್ನು ವಿಧೇಯಕದ ಮೂಲಕ ಮಂಡಿಸಲಾಗಿದೆ ಎಂದರು.

ಫ್ಲಾಟ್ ಖರೀದಿಸುವವರಿಗೆ ಇಲ್ಲಿದೆ ಭಾರಿ ಗುಡ್ ನ್ಯೂಸ್..! ವಿಧಾನಮಂಡಲದಲ್ಲಿ ವಿಧೇಯಕ ಅಂಗೀಕಾರ..!

ವಿಧೇಯಕದ ಮೂಲಕ ಒಂದು ಬಾರಿ ವರ್ಗಾವಣೆ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಬೇರೆ ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದರ ಜೊತೆಗೆ 2021ನೇ ಸಾಲಿನ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಗಳ (ತಿದ್ದುಪಡಿ) ವಿಧೇಯಕ ಹಾಗೂ 2021 ನೇ ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು ಎರಡನೇ ‌ತಿದ್ದುಪಡಿ ವಿಧೇಯಕವೂ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ