ಬೆಂಗಳೂರು: ರಾಜ್ಯದಲ್ಲಿ ಬುಧವಾರ ಒಂದೇ ದಿನ 10 ಕೊರೊನಾ ವೈರಸ್ ಪ್ರಕರಣಗಳು ಕಂಡುಬಂದಿವೆ. ಇದರೊಂದಿಗೆ ಕರ್ನಾಟಕದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಇದರಲ್ಲಿ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಉಳಿದ 47 ಜನ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲರ ಆರೋಗ್ಯವೂ ಸ್ಥಿರವಾಗಿದೆ. ಬೆಂಗಳೂರಿನಲ್ಲಿ 8, ಚಿತ್ರದುರ್ಗ ಹಾಗೂ ಉಡುಪಿಯಲ್ಲಿ ತಲಾ ಒಂದು ಪಾಸಿಟಿವ್ ಕೇಸ್ ಕಂಡುಬಂದಿವೆ. ಗಯಾನಾದಿಂದ ಆಗಮಿಸಿದ್ದ ಚಿತ್ರದುರ್ಗ ಜಿಲ್ಲೆಯ 37 ವರ್ಷದ ಮಹಿಳೆ, ದುಬೈನಿಂದ ಉಡುಪಿಗೆ ಆಗಮಿಸಿದ್ದ 34 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಇನ್ನು, ಬ್ರೆಜಿಲ್, ಅರ್ಜೆಂಟೈನಾ ಪ್ರಯಾಣ ಮುಗಿಸಿ ಬಂದಿದ್ದ ಬೆಂಗಳೂರಿನ 63 ವರ್ಷದ ವ್ಯಕ್ತಿ ಹಾಗೂ 59 ವರ್ಷದ ಮಹಿಳೆಯಲ್ಲಿ ಕೋವಿಡ್-19 ಇರುವುದು ದೃಢಪಟ್ಟಿದೆ.
ದುಬೈ ಮೂಲಕ ಸ್ಪೇನ್ನಿಂದ ಮಾರ್ಚ್ 14 ರಂದು ಬೆಂಗಳೂರಿಗೆ ಬಂದಿದ್ದ 26 ವರ್ಷದ ಹೊಂದಿದ ಇಬ್ಬರು ವ್ಯಕ್ತಿಯಲ್ಲಿ ಸೋಂಕು ಇರುವುದು ಕಂಡು ಬಂದಿದ್ದು, ಲಂಡನ್, ಅಥೆನ್ಸ್ನಿಂದ ಮಾರ್ಚ್ 18ರಂದು ಬೆಂಗಳೂರಿಗೆ ಬಂದಿದ್ದ ದಂಪತಿಯಲ್ಲಿ (69 ವರ್ಷ ಗಂಡ/ 67 ವರ್ಷ ಹೆಂಡತಿ) ವೈರಸ್ ಕಾಣಿಸಿಕೊಂಡಿದೆ. ಇನ್ನು, ರಾಜ್ಯದಲ್ಲಿ ಕಂಡುಬಂದ 17ನೇ ಕೊರೊನಾ ಸೋಂಕಿತರ 9 ವರ್ಷದ ಮಗಳು ಹಾಗೂ 7 ವರ್ಷದ ಪುತ್ರಿಯಲ್ಲಿ ಕೊರೊನಾ ವೈರಸ್ ಇರುವುದು ಕಂಡುಬಂದಿದೆ.
ಇದುವರೆಗೂ ರಾಜ್ಯದಲ್ಲಿ ಪತ್ತೆಯಾದ ಕೊರೊನಾ ಸೋಂಕಿತರ ಜಿಲ್ಲಾವಾರು ಪಟ್ಟಿ
ಕೊರೊನಾ ಭೀತಿ ನಡುವೆಯೂ ಸಚಿವರ ಕಿತ್ತಾಟ! ಬಿಎಸ್ವೈ ನಿರ್ಧಾರಕ್ಕೆ ಶ್ರೀರಾಮುಲು ಅಸಮಾಧಾನ
ಇನ್ನು, ಇದುವರೆಗೂ ಭಾರತದಲ್ಲಿ 562 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ 9 ಜನ ಕೋವಿಡ್-19ನಿಂದ ಮೃತಪಟ್ಟಿದ್ದಾರೆ. 40 ಜನ ಇದುವರೆಗೂ ಕೊರೊನಾ ವೈರಸ್ನಿಂದ ಗುಣಮುಖರಾಗಿದ್ದಾರೆ. ವಿಶ್ವದಾದ್ಯಂತ 4 ಲಕ್ಷ 34 ಸಾವಿರ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 19 ಸಾವಿರದ 600 ಜನ ಸಾವನ್ನಪ್ಪಿದ್ದಾರೆ.
ಕೊರೊನಾ ವಿರುದ್ಧದ ಹೋರಾಟಕ್ಕೆ 15 ಸಾವಿರ ಕೋಟಿ ರೂ. ಮೀಸಲು: ಪ್ರಧಾನಿ ಮೋದಿ
ಕೊರೊನಾ ವೈರಸ್ ಹಬ್ಬುವುದನ್ನು ತಡೆಯಲು ಭಾರತದಲ್ಲಿ ಸದ್ಯ 21 ದಿನಗಳ ಕಾಲ ಲಾಕ್ಡೌನ್ ಘೋಷಿಸಲಾಗಿದ್ದು, ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸಲಾಗಿದೆ. ಶಿಸ್ತುಕ್ರಮ ತೆಗೆದುಕೊಳ್ಳದಿದ್ದರೆ ಕೊರೊನಾ ವ್ಯಾಪಕವಾಗಿ ದೇಶದಲ್ಲಿ ಹಬ್ಬುತ್ತದೆ ಎಂದು ಹೇಳಿದ ಪ್ರಧಾನಿ ಮೋದಿ ಮೂರು ವಾರಗಳ ಕಾಲ ಲಾಕ್ಡೌನ್ ಘೋಷಿಸಿದ್ದಾರೆ.
ಕೊರೊನಾ ವೈರಸ್ಗಿಂತಾ ಪೊಲೀಸ್ ಲಾಠಿ ಭಯ! ಅಗತ್ಯ ವಸ್ತು ಖರೀದಿಗೂ ಪರದಾಟ..!
ದುಬೈ ಮೂಲಕ ಸ್ಪೇನ್ನಿಂದ ಮಾರ್ಚ್ 14 ರಂದು ಬೆಂಗಳೂರಿಗೆ ಬಂದಿದ್ದ 26 ವರ್ಷದ ಹೊಂದಿದ ಇಬ್ಬರು ವ್ಯಕ್ತಿಯಲ್ಲಿ ಸೋಂಕು ಇರುವುದು ಕಂಡು ಬಂದಿದ್ದು, ಲಂಡನ್, ಅಥೆನ್ಸ್ನಿಂದ ಮಾರ್ಚ್ 18ರಂದು ಬೆಂಗಳೂರಿಗೆ ಬಂದಿದ್ದ ದಂಪತಿಯಲ್ಲಿ (69 ವರ್ಷ ಗಂಡ/ 67 ವರ್ಷ ಹೆಂಡತಿ) ವೈರಸ್ ಕಾಣಿಸಿಕೊಂಡಿದೆ. ಇನ್ನು, ರಾಜ್ಯದಲ್ಲಿ ಕಂಡುಬಂದ 17ನೇ ಕೊರೊನಾ ಸೋಂಕಿತರ 9 ವರ್ಷದ ಮಗಳು ಹಾಗೂ 7 ವರ್ಷದ ಪುತ್ರಿಯಲ್ಲಿ ಕೊರೊನಾ ವೈರಸ್ ಇರುವುದು ಕಂಡುಬಂದಿದೆ.
ಇದುವರೆಗೂ ರಾಜ್ಯದಲ್ಲಿ ಪತ್ತೆಯಾದ ಕೊರೊನಾ ಸೋಂಕಿತರ ಜಿಲ್ಲಾವಾರು ಪಟ್ಟಿ
ಕ್ರಮ ಸಂಖ್ಯೆ | ಜಿಲ್ಲೆಗಳು | ಕೊರೊನಾ ಸೋಂಕಿತರು | ಗುಣಮುಖ | ಸಾವು |
1. | ಬೆಂಗಳೂರು | 32 | 03 | 00 |
2. | ಕಲಬುರಗಿ | 3 | 00 | 01 |
3. | ಕೊಡಗು | 1 | 00 | 00 |
4. | ಚಿಕ್ಕಬಳ್ಳಾಪುರ | 3 | 00 | 00 |
5. | ಮೈಸೂರು | 2 | 00 | 00 |
6. | ಧಾರವಾಡ | 1 | 00 | 00 |
7. | ದಕ್ಷಿಣ ಕನ್ನಡ | 5 | 00 | 00 |
8. | ಉತ್ತರಕನ್ನಡ | 2 | 00 | 00 |
9. | ದಾವಣಗೆರೆ | 1 | 00 | 00 |
10. | ಉಡುಪಿ | 1 | 00 | 00 |
Total | -- | 51 | 03 | 01 |
ಕೊರೊನಾ ಭೀತಿ ನಡುವೆಯೂ ಸಚಿವರ ಕಿತ್ತಾಟ! ಬಿಎಸ್ವೈ ನಿರ್ಧಾರಕ್ಕೆ ಶ್ರೀರಾಮುಲು ಅಸಮಾಧಾನ
ಇನ್ನು, ಇದುವರೆಗೂ ಭಾರತದಲ್ಲಿ 562 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ 9 ಜನ ಕೋವಿಡ್-19ನಿಂದ ಮೃತಪಟ್ಟಿದ್ದಾರೆ. 40 ಜನ ಇದುವರೆಗೂ ಕೊರೊನಾ ವೈರಸ್ನಿಂದ ಗುಣಮುಖರಾಗಿದ್ದಾರೆ. ವಿಶ್ವದಾದ್ಯಂತ 4 ಲಕ್ಷ 34 ಸಾವಿರ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 19 ಸಾವಿರದ 600 ಜನ ಸಾವನ್ನಪ್ಪಿದ್ದಾರೆ.
ಕೊರೊನಾ ವಿರುದ್ಧದ ಹೋರಾಟಕ್ಕೆ 15 ಸಾವಿರ ಕೋಟಿ ರೂ. ಮೀಸಲು: ಪ್ರಧಾನಿ ಮೋದಿ
ಕೊರೊನಾ ವೈರಸ್ ಹಬ್ಬುವುದನ್ನು ತಡೆಯಲು ಭಾರತದಲ್ಲಿ ಸದ್ಯ 21 ದಿನಗಳ ಕಾಲ ಲಾಕ್ಡೌನ್ ಘೋಷಿಸಲಾಗಿದ್ದು, ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸಲಾಗಿದೆ. ಶಿಸ್ತುಕ್ರಮ ತೆಗೆದುಕೊಳ್ಳದಿದ್ದರೆ ಕೊರೊನಾ ವ್ಯಾಪಕವಾಗಿ ದೇಶದಲ್ಲಿ ಹಬ್ಬುತ್ತದೆ ಎಂದು ಹೇಳಿದ ಪ್ರಧಾನಿ ಮೋದಿ ಮೂರು ವಾರಗಳ ಕಾಲ ಲಾಕ್ಡೌನ್ ಘೋಷಿಸಿದ್ದಾರೆ.
ಕೊರೊನಾ ವೈರಸ್ಗಿಂತಾ ಪೊಲೀಸ್ ಲಾಠಿ ಭಯ! ಅಗತ್ಯ ವಸ್ತು ಖರೀದಿಗೂ ಪರದಾಟ..!