ಆ್ಯಪ್ನಗರ

ಬೆಂಗಳೂರಿನಲ್ಲಿ ದಿನೇ ದಿನೇ ಏರುತ್ತಿದೆ ಸೋಂಕಿತರ ಸಂಖ್ಯೆ; ಸರ್ಕಾರಕ್ಕೆ ಇಲ್ವಾ ಜನಸಾಮಾನ್ಯರ ಚಿಂತೆ..!

ವರದಿಯ ಪ್ರಕಾರ, ಜುಲೈ ಒಂದರಿಂದ ಜುಲೈ 26ರ ನಡುವೆ ಒಟ್ಟು 40,898 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಇದು ಈಗಾಗಲೇ ರಾಜ್ಯದಲ್ಲಿ ದಾಖಲಾಗಿರುವ ಒಟ್ಟು ಪಾಸಿಟಿವ್ ಪ್ರಕರಣಗಳಿಗಿಂತ ಶೇ. 50.5%ನಷ್ಟು ಎನ್ನಲಾಗಿದೆ. ಭಾನುವಾರದ ತನಕ ರಾಜ್ಯದಲ್ಲಿ ಒಟ್ಟು 80,899 ಪಾಸಿಟಿವ್ ಪ್ರಕರಣಗಳು ದಾಖಲಾದರೆ, ಬೆಂಗಳೂರು ಒಂದು ಜಿಲ್ಲೆಯಲ್ಲೇ ಒಟ್ಟು 40,898 ಪ್ರಕರಣಗಳು ಕಾಣಿಸಿಕೊಂಡು ಇಡೀ ರಾಜ್ಯದ ಅರ್ಧದಷ್ಟು ಕೇಸ್‌ಗಳು ವರದಿಯಾಗಿದೆ.

Vijaya Karnataka Web 28 Jul 2020, 1:33 pm
ಬೆಂಗಳೂರು: ಮಹಾರಾಷ್ಟ್ರ ಮತ್ತು ತಮಿಳುನಾಡಿನಂತೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಅತೀ ಹೆಚ್ಚು ಕೊರೊನಾ ಸೋಂಕಿತರು ಮತ್ತು ಸಾವಿನ ಸಂಖ್ಯೆ ಕಂಡು ಬರುತ್ತಿದ್ದು, ದಿನದಿಂದ ದಿನಕ್ಕೆ ಇದರ ಸಂಖ್ಯೆ ದುಪ್ಪಟ್ಟಾಗಿ ಬೆಳೆಯುತ್ತಲೇ ಹೋಗುತ್ತಿದೆ. ಆರಂಭಿಕ ಸಮಯದಲ್ಲಿ ಅತೀ ಕಡಿಮೆ ಸಂಖ್ಯೆಯಲ್ಲಿ ಕೊರೊನಾ ಕೇಸ್‌ಗಳು ಕಾಣಿಸಿಕೊಂಡಿದ್ದಕ್ಕಾಗಿ ಶ್ಲಾಘನೆಗೆ ಒಳಗಾಗಿದ್ದ ಬೆಂಗಳೂರು, ನಂತರದ ದಿನಗಳಲ್ಲಿ ಸರ್ಕಾರ ಮತ್ತು ಬಿಬಿಎಂಪಿಯ ಅಸ್ಪಷ್ಟತೆಯ ನಿರ್ಣಯಗಳಿಂದಲೇ ಅತೀ ಹೆಚ್ಚು ಪಾಸಿಟಿವ್‌ ಪ್ರಕರಣಗಳು ಕಾಣಿಸಿಕೊಳ್ಳುತ್ತಿದೆ ಎಂದು ಸರ್ಕಾರ ಮತ್ತು ಸ್ವತಂತ್ರ ಸಂಸ್ಥೆಗಳ ವರದಿಗಳಿಂದ ತಿಳಿದುಬಂದಿದೆ.
Vijaya Karnataka Web Corona testing


ದೇವಾಲಯ, ಮಸೀದಿ, ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧ; ಸರಣಿ ಹಬ್ಬಗಳ ಹಿನ್ನೆಲೆಯಲ್ಲಿ ಪಾಲಿಕೆ ಆದೇಶ

ವರದಿಯ ಪ್ರಕಾರ, ಜುಲೈ ಒಂದರಿಂದ ಜುಲೈ 26ರ ನಡುವೆ ಒಟ್ಟು 40,898 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಇದು ಈಗಾಗಲೇ ರಾಜ್ಯದಲ್ಲಿ ದಾಖಲಾಗಿರುವ ಒಟ್ಟು ಪಾಸಿಟಿವ್ ಪ್ರಕರಣಗಳಿಗಿಂತ ಶೇ. 50.5%ನಷ್ಟು ಎನ್ನಲಾಗಿದೆ. ಭಾನುವಾರದ ತನಕ ರಾಜ್ಯದಲ್ಲಿ ಒಟ್ಟು 80,899 ಪಾಸಿಟಿವ್ ಪ್ರಕರಣಗಳು ದಾಖಲಾದರೆ, ಬೆಂಗಳೂರು ಒಂದು ಜಿಲ್ಲೆಯಲ್ಲೇ ಒಟ್ಟು 40,898 ಪ್ರಕರಣಗಳು ಕಾಣಿಸಿಕೊಂಡು ಇಡೀ ರಾಜ್ಯದ ಅರ್ಧದಷ್ಟು ಕೇಸ್‌ಗಳು ವರದಿಯಾಗಿದೆ. ಬೆಂಗಳೂರಿನಲ್ಲಿ ಕೊರೊನಾದಿಂದ ಚೇತರಿಕೆ ಕಾಣುತ್ತಿರುವವರ ಸಂಖ್ಯೆ ಕೂಡ ಕಡಿಮೆ ಆಗಿರೋದ್ರಿಂದ ಜಿಲ್ಲೆಯ ಒಟ್ಟು ಪ್ರಕರಣದ ಪೈಕಿ 47%ನಷ್ಟು ಸಾವನ್ನಪ್ಪಿದರೆ, 57%ನಷ್ಟು ಜನ ಸಕ್ರಿಯರಾಗಿದ್ದಾರೆ.

ಬೆಡ್‌ ಇಲ್ಲ, ವೆಂಟಿಲೇಟರ್‌ ಇಲ್ಲ! ಉಸಿರಾಟದ ಸಮಸ್ಯೆಯ ರೋಗಿಯ ಪರದಾಟ ಕೇಳೋರಿಲ್ಲ!

ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಬೃಹತ್ ಮಟ್ಟದಲ್ಲಿ ಹೆಚ್ಚಾಗಲು ಕಾರಣ, ಕೊರೊನಾ ಸೋಂಕಿತರನ್ನು ತಕ್ಷಣ ಗುರುತಿಸುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿರೋದು, ಕೊರೊನಾ ಕೇರ್ ಸೆಂಟರ್‌ಗಳನ್ನು ಅಲ್ಲಿನ ಜನಸಂಖ್ಯೆಗನುಗುಣವಾಗಿ ಸ್ಥಾಪನೆ ಮಾಡದೇ ಇರುವುದು ಮತ್ತು ಸಾವಿರಾರು ಸೋಂಕಿತರು ಕೊರೊನಾ ಪರೀಕ್ಷೆ ವೇಳೆ ತಮ್ಮ ವಿಳಾಸವನ್ನು ತಪ್ಪಾಗಿ ನಮೂದಿಸಿರುವುದು ಕಾರಣ ನಗರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಗಲ್ಲಿಗಲ್ಲಿಯಲ್ಲಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಇನ್ನೊಂದೆಡೆ ಬಿಬಿಎಂಪಿ ಆಯುಕ್ತರಾಗಿದ್ದ ಬಿ.ಹೆಚ್.ಅನಿಲ್ ಕುಮಾರ್‌ರನ್ನು ದಿಢೀರ್ ವರ್ಗಾವಣೆಗೊಳಿಸಿ ಅವರ ಸ್ಥಾನಕ್ಕೆ ಮಂಜುನಾಥ್ ಪ್ರಸಾದ್ ಅವರನ್ನು ಕರೆತಂದಿದ್ದು ಕೂಡ ಆತುರದ ತೀರ್ಮಾನವಾಗಿದೆ. ಈ ಮಧ್ಯೆ ಮಂಜುನಾಥ್ ಪ್ರಸಾದ್ ಅವರು ಆಯುಕ್ತರಾಗಿ ಬರ್ತಿದ್ದಂತೆ ಹಳೇ ತಪ್ಪುಗಳನ್ನು ಸರಿದೂಗಿಸಲು ಹೊಸ ಯೋಜನೆ ಮತ್ತು ರೂಪುರೇಷೆಗಳನ್ನು ಸಿದ್ಧಪಡಿಸಿ ಕೊರೊನಾ ನಿಯಂತ್ರಣ ಮಾಡಲು ಕಾರ್ಯತಂತ್ರ ರೂಪಿಸಿದ್ದಾರೆ.

ಬೆಂಗಳೂರಿನ ವಿಶ್ವೇಶ್ವರಯ್ಯ ಜಲ ನಿಗಮದ ಕಚೇರಿ ಸೀಲ್‌ಡೌನ್‌..!

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರ ಹೊರತಾಗಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದ ಜವಾಬ್ದಾರಿಯನ್ನು ಸಿಎಂ ಸೂಚನೆಯಂತೆ ಡಿಸಿಎಂ ಅಶ್ವತ್ಥ್ ನಾರಾಯಣ್, ಸಚಿವ ಸುಧಾಕರ್ ಜೊತೆಗೆ ಎಂಟು ಸಚಿವರು, 3೦ ಐಎಎಸ್ ಅಧಿಕಾರಿಗಳು ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿಗೆ ಜವಾಬ್ದಾರಿಯನ್ನು ನೀಡಲಾಗಿದೆ. ಹೀಗಿದ್ದರೂ ಕೂಡ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣ ಮಾಡಲು ಸಾಧ್ಯವಾಗದೆ ಪರಿಸ್ಥಿತಿ ಕರುಣಾಜನಕ ಸ್ಥಿತಿಗೆ ತಲುಪಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಕಳೆದ ವಾರ ಬೆಂಗಳೂರಿನಲ್ಲಿ ಮೂರು ಸಾವಿರ ಸೋಂಕಿತರನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ಒಪ್ಪಿಕೊಂಡಿದ್ದು, ಸದ್ಯ ಬಿಬಿಎಂಪಿಯ ವಲಯ ಕಚೇರಿಗಳಲ್ಲಿ ಬೆಡ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಮತ್ತು ಕಾರ್ಯದಕ್ಷತೆಯನ್ನು ಹೆಚ್ಚಿಸುವ ಕೆಲಸ ಮಾಡಲಾಗ್ತಿದೆ. ಈ ಮಧ್ಯೆ ಸರ್ಕಾರದೊಂದಿಗೆ ಸಹಕರಿಸದ ಅನೇಕ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ