ಆ್ಯಪ್ನಗರ

ಹಬ್ಬಗಳ ನಡುವೆ ಏರಿಕೆ ಕಂಡ ಅಡಕೆ ದರ; ಬೆಳೆಗಾರರಲ್ಲಿ ಸಂತಸ

ಕೆಲ ತಿಂಗಳ ಹಿಂದೆ ಆಮದು ಸುಂಕ ಹೆಚ್ಚಳ ಮತ್ತು ನೆರೆ ದೇಶಗಳಿಂದ ಅಕ್ರಮವಾಗಿ ಆಮದು ಮಾಡಿಕೊಳ್ಳುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವುದು ಈಗ ಅಡಕೆ ದರ ತೇಜಿಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

Vijaya Karnataka Web 15 Oct 2020, 6:15 am
ಶಿವಮೊಗ್ಗ: ರಾಜ್ಯದ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆ ಅಡಕೆ ಧಾರಣೆ ಏರಿಕೆ ಕಂಡಿರುವುದು ಬೆಳೆಗಾರರಿಗೆ ಸಮಾಧಾನ ತಂದಿದೆ.
Vijaya Karnataka Web areca nut


ಚಾಲಿ ಅಡಕೆ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕ್ವಿಂಟಾಲ್‌ಗೆ 7-8 ಸಾವಿರ ರೂ.ಗಳಷ್ಟು ಹೆಚ್ಚಳವಾಗಿದೆ. ಕೆಂಪಡಕೆ ದರವೂ ಬಹುತೇಕ ಸ್ಥಿರತೆ ಕಂಡುಕೊಂಡಿದೆ. ಹಬ್ಬಗಳ ಸಾಲಿನ ನಡುವೆ ದರ ಏರಿಕೆಯಾಗಿರುವುದು ಬೆಳೆಗಾರರಿಗೆ ಖುಷಿ ಕೊಟ್ಟಿದೆ. ಅಡಕೆ ಹೊಸ ಬೆಳೆಯ ಹಂಗಾಮು ರಾಜ್ಯದ ಶಿವಮೊಗ್ಗ, ದಾವಣಗೆರೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸದ್ಯವೇ ಪ್ರಾರಂಭವಾಗಲಿದೆ. ಉಳಿದ ಕಡೆ ಡಿಸೆಂಬರ್‌ನಲ್ಲಿ ಶುರು. ಇದೀಗ ಕಳೆದ ಹಂಗಾಮಿನ ಅಡಕೆ ಮಾರುಕಟ್ಟೆಗೆ ಬರುತ್ತಿದೆ.

ಹುಟ್ಟಿನಿಂದಲೇ ನರದೌರ್ಬಲ್ಯ, ತಾಯಿಗೂ ಬೇಡವಾದ ಆನೆ ಮರಿಗೆ ಸಕ್ರೆಬೈಲು ಬಿಡಾರದಲ್ಲಿ ಟ್ರೀಟ್‌ಮೆಂಟ್..

ಸುಂಕ ಹೆಚ್ಚಳ, ಬಿಗು ಕ್ರಮ ಕಾರಣ: ಕೆಲ ತಿಂಗಳ ಹಿಂದೆ ಆಮದು ಸುಂಕ ಹೆಚ್ಚಳ ಮತ್ತು ನೆರೆ ದೇಶಗಳಿಂದ ಅಕ್ರಮವಾಗಿ ಆಮದು ಮಾಡಿಕೊಳ್ಳುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವುದು ಈಗ ಅಡಕೆ ದರ ತೇಜಿಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಇಂಡೋನೇಷ್ಯಾ, ಮಲೇಶಿಯಾ ಮತ್ತು ಥಾಯ್ಲೆಂಡ್‌ ದೇಶಗಳಿಂದ ಅಡಕೆ ಆಮದು ಮಾಡಿಕೊಳ್ಳುವ ಶ್ರೀಲಂಕಾ, ಬಾಂಗ್ಲಾಮತ್ತು ನೇಪಾಳ ದೇಶಗಳು ಸಾರ್ಕ್ ಒಪ್ಪಂದದ ದುರುಪಯೋಗ ಮಾಡಿಕೊಂಡು ಭಾರತಕ್ಕೆ ಅಡಕೆ ರವಾನೆ ಮಾಡುತ್ತಿವೆ.

ಮಂಗಗಳ ಹಾವಳಿ ತಡೆಗಟ್ಟಲು ಶಿವಮೊಗ್ಗದಲ್ಲಿ ಮಂಕಿಪಾರ್ಕ್ ನಿರ್ಮಾಣ; ಕೋಟ ಶ್ರೀನಿವಾಸ ಪೂಜಾರಿ

ಪ್ರಸ್ತುತ ಶ್ರೀಲಂಕಾ ಚೀನಾ ದೇಶದತ್ತ ಒಲವು ತೋರಿವೆ ಮತ್ತು ಬಾಂಗ್ಲಾ ದೇಶದಲ್ಲಿ ಚುನಾವಣೆ ಘೋಷಣೆಯಾಗಿದೆ. ದರ ಸ್ಥಿರಗೊಳ್ಳುತ್ತಿದೆ ಎಂಬುದು ತಜ್ಞರ ಅಭಿಮತ. ದಸರಾ ಹಬ್ಬಗಳು ಹತ್ತಿರುವಿರುವಾಗಲೇ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆ ಅಡಕೆ ಧಾರಣೆ ಏರಿಕೆ ಕಂಡಿರುವುದು ಬೆಳೆಗಾರರಿಗೆ ಸಮಾಧಾನ ತಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ