ಆ್ಯಪ್ನಗರ

‘ಸೆಪ್ಟೆಂಬರ್ 25ಕ್ಕೆ ಬಂದ್ ಇರಲ್ಲ, 28ನೇ ತಾರೀಕಿಗೆ ಕರ್ನಾಟಕ ಬಂದ್ ಮಾಡ್ತೀವಿ’; ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟನೆ

ಬಂದ್‌ ವಿಚಾರವಾಗಿ ನಾಳೆ ನಮ್ಮ ತೀರ್ಮಾನ ಸ್ಪಷ್ಟವಾಗಲಿದ್ದು, ಸಿಎಂ ಯಡಿಯೂಪ್ಪನವರು ಮಸೂದೆಯನ್ನು ವಾಪಸ್‌ ಪಡೆದರೆ ಬಂದ್‌ ಮಾಡುವ ಪ್ರಶ್ನೆಯಿಲ್ಲ. ಈ ಬಗ್ಗೆ ಎಲ್ಲಾ ಮುಖಂಡರು ತಮ್ಮ ಹೇಳಿಕೆಯನ್ನು ನೀಡುವವರಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

Vijaya Karnataka Web 23 Sep 2020, 12:45 pm
ಬೆಂಗಳೂರು: ಸೆಪ್ಟೆಂಬರ್ 25ಕ್ಕೆ ಬಂದ್ ಇರಲ್ಲ, 28ನೇ ತಾರೀಕಿಗೆ ಬಂದ್ ಮಾಡ್ತೀವಿ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
Vijaya Karnataka Web kodihalli chandrashekar


ರಾಜ್ಯ ಸರ್ಕಾರ ಮೂರು ಮಸೂದೆಗಳನ್ನು ವಾಪಾಸ್ ಪಡೆದರೆ ನಾವು ಬಂದ್ ಮಾಡಲ್ಲ, ಸರ್ಕಾರ ಮಸೂದೆಯನ್ನು ಪಾಸ್‌ ಮಾಡಿದರೆ ಮಾತ್ರ ಬಂದ್ ಮಾಡ್ತೀವಿ ಎಂದು ಕೋಡಿಹಳ್ಳಿ ಚಂದ್ರಶೇಖರ್‌ ಖಚಿತಪಡಿಸಿದ್ದಾರೆ. ಈಗಾಗಲೇ ಐಕ್ಯ ಹೋರಾಟ ಸಮಿತಿಯ ಮೂಲಕ 9 ರೈತ ಸಂಘಟನೆಗಳು ಆನ್‌ಲೈನ್ ಮೂಲಕ ಸಭೆ ನಡೆಸಿ ತೀರ್ಮಾನ ನಡೆಸಿದ್ದು, ಸೆಪ್ಟೆಂಬರ್ 28ನೇ ತಾರೀಕಿಗೆ ಕರ್ನಾಟಕ ಬಂದ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ಪೌರಕಾರ್ಮಿಕರನ್ನು ಪ್ರತಿಕ್ಷಣವು ತಾಯ್ತನದಿಂದ ಕಾಣುವುದೇ ನಾವು ಅವರಿಗೆ ಸಲ್ಲಿಸುವ ಕೃತಜ್ಞತೆ; ಎಚ್‌ಡಿಕೆ

ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಸೇರಿದಂತೆ ಒಟ್ಟು ಮೂರು ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆಯಲೇಬೇಕು. ಸರ್ಕಾರ ವಾಪಸ್ ಪಡೆಯದೇ ಇದ್ದರೆ ಆ ನಂತರ ಉಗ್ರಹೋರಾಟ ನಡೆಸುವ ಬಗ್ಗೆಯೂ ತೀರ್ಮಾನ ಮಾಡಲಿದ್ದೇವೆ. ಈಗ ನಮ್ಮ ಹೋರಾಟ ಶಾಂತ ರೀತಿಯಲ್ಲಿ ನಡೆಯುತ್ತಿದೆ. ಸರ್ಕಾರ ನಮಗೆ ಪ್ರಚೋದನೆ ನೀಡದೆ ನಮ್ಮ ಬೇಡಿಕೆಯನ್ನು ಈಡೇರಿಸಬೇಕು, ಸರ್ಕಾರ ಕಾಯ್ದೆಗಳ್ನು ವಾಪಸ್ ಪಡೆದ ನಂತರವೇ ನಾವು ಹೋರಾಟವನ್ನು ಕೈಬಿಡುತ್ತೇವೆ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಇನ್ನೊಂದೆಡೆ ರಾಜ್ಯ ಬಂದ್‌ಗೆ ಒಮ್ಮತ ಕೂಡಿಬಂದಿಲ್ಲ ಎಂದು ತಿಳಿದುಬಂದಿದ್ದು, ಈ ಬಗ್ಗೆ ಹಿರಿಯ ರೈತ ಮುಖಂಡ ಕುರುಬೂರು ಶಾಂತ ಕುಮಾರ್ ಅವರು, ಬಂದ್‌ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ ಎನ್ನಲಾಗಿದೆ. ಅಲ್ಲದೇ ಬಂದ್‌ ಮಾಡುವುದು ಸುಲಭವಲ್ಲ. ಅದಕ್ಕಾಗಿ ಸಾಕಷ್ಟು ರೂಪುರೇಷೆಗಳನ್ನು ಸಿದ್ಧಮಾಡಬೇಕಾಗುತ್ತದೆ. ಇದಕ್ಕಾಗಿ ಒಂದು ನಿರ್ದಿಷ್ಟ ಕಮಿಟಿ ರಚಿಸಿ ಬಂದ್‌ ಬೇಕೋ ಬೇಡ್ವೋ, ಬಂದ್‌ನಿಂದಾಗುವ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಬೇಕಾಗುತ್ತದೆ. ಈ ಬಗ್ಗೆ ನಾವು ಸೂಕ್ತ ನಿರ್ಧಾರಕ್ಕೆ ಬಂದು ಸುದ್ದಿಗೋಷ್ಠಿ ಮೂಲಕ ಸ್ಪಷ್ಟಪಡಿಸುತ್ತೇವೆ ಎಂದು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡಿದೆ; ವಿಪಕ್ಷಗಳಿಗೆ ಸುಧಾಕರ್ ಉತ್ತರ

ಇನ್ನು ರೈತಸಂಘಟನೆಗಳಲ್ಲಿ ಒಗ್ಗಟ್ಟು ಇಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಕೋಡಿಹಳ್ಳಿ ಚಂದ್ರಶೇಖರ್, ರೈತ ಸಂಘಟನೆಗಳಲ್ಲಿ ಒಡಕಿನ ಪ್ರಶ್ನೆ ಇಂದು ನಿನ್ನೆಯದಲ್ಲ. ಅನೇಕ ವರ್ಷಗಳಿಂದ ಇದೆ. ಅನೇಕ ಫೇಕ್‌ ಸಂಘಟನೆಗಳು ಇರುತ್ತವೆ, ರಾಜಕೀಯ ಪಕ್ಷಗಳ ಸದಸ್ಯರು ಕೂಡ ಹಸಿರು ಟವಲ್ ಹಾಕ್ಕೊಂಡು ಓಡಾಡ್ತಾರೆ ಅದು ಬೇರೆ ಪ್ರಶ್ನೆ. ಆದರೆ ಬಂದ್‌ ವಿಚಾರವಾಗಿ ನಾಳೆ ನಮ್ಮ ತೀರ್ಮಾನ ಸ್ಪಷ್ಟವಾಗಲಿದ್ದು, ಸಿಎಂ ಯಡಿಯೂಪ್ಪನವರು ಮಸೂದೆಯನ್ನು ವಾಪಸ್‌ ಪಡೆದರೆ ಬಂದ್‌ ಮಾಡುವ ಪ್ರಶ್ನೆಯಿಲ್ಲ. ಈ ಬಗ್ಗೆ ಎಲ್ಲಾ ಮುಖಂಡರು ತಮ್ಮ ಹೇಳಿಕೆಯನ್ನು ನೀಡುವವರಿದ್ದಾರೆ ಎಂದು ಹೇಳಿದರು.

'ರೈತರ ಬಗ್ಗೆ ಲಘುವಾಗಿ ಮಾತನಾಡಿದ್ರೆ ಮುಂದಾಗುವ ದುಷ್ಪರಿಣಾಮವನ್ನು ಅವರೇ

ಬೆಂಗಳೂರಿನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ರೈತರು ರಾಜ್ಯದ ವಿವೀಧ ಭಾಗಗಳಿಂದ ಜಮಾಯಿಸಿದ್ದು, ಸೆಪ್ಟೆಂಬರ್‌ 28ನೇ ತಾರೀಕಿನಂದು ನಡೆಯುವ ಕರ್ನಾಟಕ ಬಂದ್ ವೇಳೆ ಮೈಸೂರು ಬ್ಯಾಂಕ್‌ ಸರ್ಕಲ್ ಮುಂದೆ ನಡೆಯುವ ಪ್ರತಿಭಟನೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ