ಆ್ಯಪ್ನಗರ

‘ಕಾಂಗ್ರೆಸ್‌ನಲ್ಲಿ ನಾನು ಹೇಳಿದಂತೆ ನಡೆಯಬೇಕು ಅಂದ್ರೆ ಆಗಲ್ಲ’ ಡಿಕೆಶಿ ಟಾಂಗ್ ಕೊಟ್ಟಿದ್ದು ಯಾರಿಗೆ ?

ಕಾಂಗ್ರೆಸ್‌ನಲ್ಲಿ ಯಾರ ಮಾತೂ ನಡೆಯುವುದಿಲ್ಲ. ಪಕ್ಷದಲ್ಲಿ ಟೋಪಿ ಐದು ನಿಮಿಷಕ್ಕೆ ಬದಲಾಗುತ್ತದೆ. ಯಾರು ಪಕ್ಷಕ್ಕೆ ನಿಷ್ಠೆ ಹೊಂದಿರುತ್ತಾರೆ ಅವರಿಗೆ ಮಾತ್ರ ಪಕ್ಷದಲ್ಲಿ ಗೌರವ ಸಿಗುತ್ತದೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

Vijaya Karnataka Web 26 Dec 2019, 3:33 pm
ಬೆಂಗಳೂರು: ಕಾಂಗ್ರೆಸ್‌ನಲ್ಲಿ ನಾನು ಹೇಳಿದಂತೆ ನಡೆಯಬೇಕು ಅಂದರೆ ಆಗುವುದಿಲ್ಲ. ಪಕ್ಷದಲ್ಲಿ ಟೋಪಿ ಐದು ನಿಮಿಷಕ್ಕೆ ಬದಲಾಗುತ್ತದೆ. ಬ್ಲ್ಯಾಕ್‌ಮೇಲ್ ಕಾಂಗ್ರೆಸ್‌ನಲ್ಲಿ ನಡೆಯೋದಿಲ್ಲ. ಯಾರಾದರೂ ಬ್ಲ್ಯಾಕ್‌ಮೇಲ್ ಮಾಡುತ್ತಾರೆ ಅಂದರೆ ಅವರಷ್ಟು ಮೂರ್ಖರು ಯಾರೂ ಇಲ್ಲ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಮಾರ್ಮಿಕ ಹೇಳಿಕೆ ನೀಡಿದ್ದಾರೆ.
Vijaya Karnataka Web there is no blackmail in congress says dk shivakumar
‘ಕಾಂಗ್ರೆಸ್‌ನಲ್ಲಿ ನಾನು ಹೇಳಿದಂತೆ ನಡೆಯಬೇಕು ಅಂದ್ರೆ ಆಗಲ್ಲ’ ಡಿಕೆಶಿ ಟಾಂಗ್ ಕೊಟ್ಟಿದ್ದು ಯಾರಿಗೆ ?


ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರವಾಗಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಜೊತೆಗೆ ಕೆಲವೊಂದು ಬೇಡಿಕೆಗಳನ್ನು ಇಟ್ಟಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷದಲ್ಲಿ ನನ್ನದೂ ನಡೆಯೋದಿಲ್ಲ ಬೇರೆಯವರದ್ದೂ ನಡೆಯೋದಿಲ್ಲ. ನನ್ನದೇ ನಡೆಯಬೇಕು ಎಂದರೆ ಅಂತಹ ಮೂರ್ಖರು ಸಿಗಲ್ಲ. ಕೇವಲ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದರೆ ಮಾತ್ರ ಗೌರವ ಸಿಗುತ್ತದೆ. ಅದರ ಬದಲಾಗಿ ಕಂಡೀಷನ್ಸ್‌ಗಳನ್ನು ಹಾಕಿದರೆ ಅದೆಲ್ಲಾ ನಡೆಯೋದಿಲ್ಲ ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ವಿಚಾರವಾಗಿ ಯಾವುದೇ ಮಾಹಿತಿ ಇಲ್ಲ. ರಾಜ್ಯದಲ್ಲಿ ಕೆಪಿಸಿಸಿ ಎಲ್ಲೂ ಕುಸಿದು ಬಿದ್ದಿಲ್ಲ. ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಹೋರಾಟ ಹಮ್ಮಿಕೊಂಡಿದೆ. ಎಲ್ಲರೂ ಬಾವುಟ ಹಿಡಿದುಕೊಂಡು ಹೋಗುತ್ತೇವೆ. ಈ ಸಂದರ್ಭದಲ್ಲಿ ಅಧ್ಯಕ್ಷರು ಹೊಸಬರಾಗುತ್ತಾರಾ ಅಥವಾ ಹಿಂದಿನ ಅಧ್ಯಕ್ಷರಿರುತ್ತಾರಾ ಎಂಬುವುದು ಗೊತ್ತಿಲ್ಲ. ಆದೇನೇ ಇದ್ದರೂ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲೇ ಕಾರ್ಯಕ್ರಮ ನಡೆಯುತ್ತೆ ಎಂದರು.

"ನನ್ನ ದನಿಗೆ ಇಲ್ಲಿ ಬೆಲೆ ಇಲ್ಲ": ಕಾಂಗ್ರೆಸ್ ತೊರೆದ ದಲಿತ ನಾಯಕಿ ಸಾವಿತ್ರಿಬಾಯಿ ಫುಲೆ

ಗೋಲಿಬಾರ್‌ನಲ್ಲಿ ಮೃತರ ಕುಟುಂಬಕ್ಕೆ ನೀಡಿದ್ದ ಪರಿಹಾರ ವಾಪಸ್‌ಗೆ ಡಿಕೆಶಿ ಕಿಡಿ

ಮಂಗಳೂರು ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರು ಯುವಕರ ಕುಟುಂಬಕ್ಕೆ ನೀಡಲಾಗಿದ್ದ ಪರಿಹಾರವನ್ನು ಸಿಎಂ ಬಿಎಸ್‌ ಯಡಿಯೂರಪ್ಪ ವಾಪಸ್‌ ಪಡೆದುಕೊಂಡಿದ್ದಕ್ಕಾಗಿ ಮಾಜಿ ಸಚಿವ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಎಚ್‌ಡಿಕೆ ಸರಕಾರದ ಅವೈಜ್ಞಾನಿಕ ಕ್ರಮ: ಗಡಿ ಸಂರಕ್ಷಣಾ ಆಯೋಗಕ್ಕೆ ನದಿ ರಕ್ಷಣೆಯ ಹೊಣೆ!

ಮೃತರ ಕುಟುಂಬಸ್ಥರಿಗೆ ರಾಜ್ಯ ಸರಕಾರವೇ ಪರಿಹಾರ ಘೋಷಿಸಿತ್ತು. ಆದರೆ ಈಗ ಅವರೇ ತಡೆ ಹಿಡಿದಿದ್ದಾರೆ. ಇದು ಬಿಜೆಪಿ ಸರಕಾರದ ನೀತಿಯಾಗಿದೆ. ಮೃತಪಟ್ಟವರು ಆರೋಪಿಯೋ ಇಲ್ಲವೋ ಎಂಬುವುದು ಮೊದಲು ಸಾಬೀತಾಗಬೇಕು. ಈ ಕುರಿತಾಗಿ ನ್ಯಾಯಾಲಯ ತೀರ್ಪು ನೀಡಬೇಕು.
ಆದರೆ ಸರಕಾರದ ಅದಕ್ಕೂ ಮುನ್ನವೇ ಮೃತಪಟ್ಟವರು ಆರೋಪಿಗಳೆಂದು ಘೋಷಣೆ ಮಾಡುತ್ತಾರೆ. ದೆಹಲಿಯಿಂದ ಯಡಿಯೂರಪ್ಪನವರಿಗೆ ಫೋನ್ ಬಂದಿದೆ. ಫೋನ್ ಬರುತ್ತಿದ್ದಂತೆ ಅವರು ಚೆಕ್ ತಡೆಹಿಡಿದಿದ್ದಾರೆ. ಇದು ರಾಜ್ಯದ ಜನರಿಗೆ ತಿಳಿಯಬೇಕು ಎಂದು ಡಿಕೆಶಿ ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ