ಆ್ಯಪ್ನಗರ

ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಯಲ್ಲಿ ವಿವಾದವೇ ಇಲ್ಲ: ಬಿಜೆಪಿ

ಕಾಲಕಾಲಕ್ಕೆ ಸಂವಿಧಾನ ತಿದ್ದುಪಡಿ ಆಗಿದೆ. ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಗೆ ತಕ್ಕಂತೆ ಸಂವಿಧಾನ ತಿದ್ದುಪಡಿಯಾಗಬೇಕು ಎಂಬ ಅರ್ಥದಲ್ಲಿ ಸಚಿವ ಹೆಗಡೆ ಅವರು ಹೇಳಿಕೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಸಮರ್ಥಿಸಿದ್ದಾರೆ.

Vijaya Karnataka 26 Dec 2017, 8:46 am

ಬೆಂಗಳೂರು: ಕಾಲಕಾಲಕ್ಕೆ ಸಂವಿಧಾನ ತಿದ್ದುಪಡಿ ಆಗಿದೆ. ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಗೆ ತಕ್ಕಂತೆ ಸಂವಿಧಾನ ತಿದ್ದುಪಡಿಯಾಗಬೇಕು ಎಂಬ ಅರ್ಥದಲ್ಲಿ ಸಚಿವ ಹೆಗಡೆ ಅವರು ಹೇಳಿಕೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಸಮರ್ಥಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ 'ಹೆಗಡೆ ಹೇಳಿಕೆಯಲ್ಲಿ ವಿವಾದವಾಗುವ ಯಾವುದೇ ಅಂಶ ಇಲ್ಲ. ಕೆಲವರು ಸಾಮಾನ್ಯ ಹೇಳಿಕೆಗಳನ್ನೂ ವಿವಾದವಾಗಿ ಪ್ರತಿಬಿಂಬಿಸುತ್ತಾರೆ. ಅವರು ಉದ್ದೇಶಪೂರ್ವಕವಾಗಿ ಸಂವಿಧಾನ ಬದಲಾವಣೆ ಬಗ್ಗೆ ಹೇಳಿರುವ ಸಾಧ್ಯತೆ ಇಲ್ಲ,' ಎಂದು ಹೇಳಿದ್ದಾರೆ.

Vijaya Karnataka Web there is no controversy in hegde statement bjp
ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಯಲ್ಲಿ ವಿವಾದವೇ ಇಲ್ಲ: ಬಿಜೆಪಿ


'ಸಂವಿಧಾನದ ಮೂಲ ಚೌಕಟ್ಟು ಬದಲಾಯಿಸಲು ಕೆಲ ತಿದ್ದುಪಡೆ ಅಗತ್ಯವಿರುವ ಬಗ್ಗೆ ಹೇಳಿದ್ದಾರೆ. ಸಂವಿಧಾನಕ್ಕೆ ಕಾಲ ಕಾಲಕ್ಕೆ ಕೆಲ ತಿದ್ದುಪಡೆ ಮಾಡಲಾಗಿದೆ. ಅದರಂತೆ ಕೆಲ ಬದಲಾವಣೆಗಳನ್ನು ಮಾಡಬೇಕು ಎಂದಿದ್ದಾರೆಯೇ ಹೊರತು ಪೂರ್ಣ ಪ್ರಮಾಣದಲ್ಲಿ ಬದಲಾವಣೆ ಮಾಡುತ್ತೇವೆ ಎಂದಿಲ್ಲ. ಅವರ ಮಾತನ್ನು ತಪ್ಪಾಗಿ ಅರ್ಥೈಸುವ ಮೂಲಕ ವಿವಾದ ಹುಟ್ಟುಹಾಕಲಾಗಿದೆ.'
-ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ (ಹುಬ್ಬಳ್ಳಿಯಲ್ಲಿ ಹೇಳಿದ್ದು)

'ಪ್ರಧಾನಿ ನರೇಂದ್ರ ಮೋದಿ ಅವರೇ ಸಂವಿಧಾನವನ್ನು ದೇಶದ ಮೂಲ ಗ್ರಂಥ ಎಂದಿದ್ದಾರೆ. ಅಗತ್ಯ ತಿದ್ದುಪಡೆ ಆಗಬೇಕೆಂಬ ಸಚಿವ ಹೆಗಡೆ ಅವರ ಹೇಳಿಕೆಯನ್ನು ತಿರುಚಲಾಗಿದೆ.'
-ಪ್ರಹ್ಲಾದ ಜೋಶಿ, ಸಂಸದ (ಹುಬ್ಬಳ್ಳಿಯಲ್ಲಿ ಹೇಳಿದ್ದು)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ