ಆ್ಯಪ್ನಗರ

ಗೋವಾ ಗಣೇಶನಿಗೆ ಈ ಬಾರಿ ಕರ್ನಾಟಕದ ಪುರೋಹಿತರಿಲ್ಲ!

ಗೋವಾದಲ್ಲಿ ಗೌರಿ ಗಣೇಶ ಹಬ್ಬ ಆಚರಿಸುವುದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಕೊರೊನಾ ಕಾರಣಕ್ಕೆ ಕರ್ನಾಟಕದ ಪುರೋಹಿತರ ಅಲಭ್ಯತೆ ಇರಲಿದ್ದು ಸಮಸ್ಯೆ ಪರಿಹಾರಕ್ಕೆ ಆನ್‌ಲೈನ್‌ ಮೂಲಕ ಪೂಜಾ ವಿಧಿವಿಧಾನ ಆರಂಭವಾಗಿದೆ.

Vijaya Karnataka Web 29 Jul 2020, 2:50 pm
ಪಣಜಿ: ಕರ್ನಾಟಕದ ಪುರೋಹಿತರ ಅಲಭ್ಯತೆಯಿಂದಾಗಿ ಈ ಬಾರಿ ಗೋವಾದಲ್ಲಿ ಗೌರಿ ಗಣೇಶ ಹಬ್ಬ ಆಚರಿಸುವುದು ಹೇಗೆ ಎಂಬ ಸಮಸ್ಯೆ ಎದುರಾಗಿದೆ.
Vijaya Karnataka Web ganesh


ಗೋವಾದಲ್ಲಿ ಗೌರಿ ಗಣೇಶ ಹಬ್ಬವನ್ನು ಪ್ರತಿ ವರ್ಷ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಮನೆ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲು ನೆರೆಯ ಕರ್ನಾಟಕದಿಂದ ಸಾವಿರಾರು ಪುರೋಹಿತರು ಗೋವಾಕ್ಕೆ ಆಗಮಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ಕಾರಣಕ್ಕೆ ಹೊರ ರಾಜ್ಯಗಳಿಂದ ಪುರೋಹಿತರನ್ನು ಕರೆಸಲು ಸಾಧ್ಯವಾಗುತ್ತಿಲ್ಲ.

ನೆರೆ ರಾಜ್ಯಗಳಿಂದ ಗೋವಾಕ್ಕೆ ಪುರೋಹಿತರು ಆಗಮಿಸಿದರೂ ಇಲ್ಲಿ 14 ದಿನಗಳ ಕ್ವಾರಂಟೈನ್‌ ಕಡ್ಡಾಯವಾಗಿದ್ದು, ಪೂಜೆ ನಂತರ ಮತ್ತೆ ಕರ್ನಾಟಕಕ್ಕೆ ತೆರಳಿದರೆ ಅಲ್ಲೂ 14 ದಿನಗಳ ಹೋಂ ಕ್ವಾರಂಟೈನ್‌ ಆಗಬೇಕಿದೆ. ಈ ಎಲ್ಲ ಸಮಸ್ಯೆಯ ಹಿನ್ನೆಲೆಯಲ್ಲಿ ಕರ್ನಾಟಕದ ಪುರೋಹಿತರೂ ಈ ಬಾರಿ ಗೋವಾದತ್ತ ಮುಖ ಮಾಡಲು ಮನಸ್ಸು ಮಾಡಿಲ್ಲ.

ದೇವಾಲಯ, ಮಸೀದಿ, ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧ; ಸರಣಿ ಹಬ್ಬಗಳ ಹಿನ್ನೆಲೆಯಲ್ಲಿ ಪಾಲಿಕೆ ಆದೇಶ

ಸಮಸ್ಯೆ ಪರಿಹಾರಕ್ಕೆ ಆನ್‌ಲೈನ್‌ ಮೂಲಕ ಪೂಜಾ ವಿಧಿವಿಧಾನಗಳನ್ನು ನಡೆಸಿಕೊಡುವ ಪದ್ಧತಿ ಈಗಾಗಲೇ ಆರಂಭಗೊಂಡಿದ್ದು, ಗೌರಿ ಗಣೇಶ ಹಬ್ಬವನ್ನೂ ಆನ್‌ಲೈನ್‌ ಮೂಲಕ ನಡೆಸಿಕೊಡುವ ನಿಟ್ಟಿನಲ್ಲಿಇಲ್ಲಿನ ತಪೋಭೂಮಿ ವೈದಿಕ ಶಿಕ್ಷಣ ಸಂಸ್ಥೆ ಸಿದ್ಧತೆ ಆರಂಭಿಸಿದೆ. ಈಗಾಗಲೇ ಹಲವು ಪೂಜಾ ವಿಧಿ ವಿಧಾನಗಳನ್ನು ಸಂಸ್ಥೆ ಆನ್‌ಲೈನ್‌ ಮೂಲಕ ಆರಂಭಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ