ಆ್ಯಪ್ನಗರ

ರಜೆ ಪಡೆಯದೇ ಕೆಲಸ ಮಾಡಿ: ಕೆಎಸ್‌ಆರ್‌ಟಿಸಿ ಸೂಚನೆ

ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಎಲ್ಲ ವಿಭಾಗೀಯ ಮತ್ತು ಡಿಪೊ ಅಧಿಕಾರಿಗಳು ರಜೆ ಪಡೆಯದೇ ಕೇಂದ್ರ ಸ್ಥಳದಲ್ಲಿಯೇ ಇದ್ದು ಪರಿಸ್ಥಿತಿ ನಿಭಾಯಿಸಬೇಕು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Vijaya Karnataka 10 Aug 2019, 5:00 am
ಬೆಂಗಳೂರು : ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಎಲ್ಲ ವಿಭಾಗೀಯ ಮತ್ತು ಡಿಪೊ ಅಧಿಕಾರಿಗಳು ರಜೆ ಪಡೆಯದೇ ಕೇಂದ್ರ ಸ್ಥಳದಲ್ಲಿಯೇ ಇದ್ದು ಪರಿಸ್ಥಿತಿ ನಿಭಾಯಿಸಬೇಕು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
Vijaya Karnataka Web there is no leave for employs ksrtc
ರಜೆ ಪಡೆಯದೇ ಕೆಲಸ ಮಾಡಿ: ಕೆಎಸ್‌ಆರ್‌ಟಿಸಿ ಸೂಚನೆ


ಕೆಎಸ್‌ಆರ್‌ಟಿಸಿಯ ಕೇಂದ್ರ ಕಚೇರಿಯಲ್ಲಿನ ನಿಯಂತ್ರಣ ಕೊಠಡಿಗೆ ಶುಕ್ರವಾರ ಭೇಟಿ ನೀಡಿದ ಅವರು, ಮೈಸೂರು ಗ್ರಾಮಾಂತರ, ಮಂಗಳೂರು, ಪುತ್ತೂರು, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ಕೇಂದ್ರೀಯ ವಿಭಾಗ, ಕೆಂಪೇಗೌಡ ಬಸ್‌ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಖದ್ದು ಕರೆ ಮಾಡಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಬಸ್‌ಗಳ ಆಚರಣೆ, ಪರಿಹಾರ ಕ್ರಮಗಳ ಕುರಿತು ಮಾಹಿತಿ ಪಡೆದರು.

ಪ್ರವಾಹದಿಂದಾಗಿ ಬಸ್‌ ಸಂಚಾರ ರದ್ದು:

ಪ್ರವಾಹ ಪರಿಸ್ಥಿತಿಯ ಕಾರಣಕ್ಕೆ ನಿತ್ಯ ಶೇ.6ರಿಂದ 8ರಷ್ಟು ಬಸ್‌ಗಳ ಸಂಚಾರ ರದ್ದುಗೊಳಿಸಲಾಗುತ್ತಿದೆ. ಆ. 8ರಂದು ಒಂದೇ ದಿನ ರದ್ಧತಿ ಪ್ರಮಾಣವು ಶೇ 32ಕ್ಕೆ ಏರಿಕೆಯಾಗಿದೆ. 7,150 ಪ್ರಯಾಣಿಕರು ಮುಂಗಡ ಕಾಯ್ದಿರಿಸಿದ್ದ ಟಿಕೆಟ್‌ಗಳನ್ನು ರದ್ದುಪಡಿಸಿದ್ದರು.

ಸೂಚನೆ ಏನು?

ವಿಭಾಗ ಮಟ್ಟದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಿ

ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಿ

ಬಸ್‌ಗಳ ಸಂಚಾರದ ಮೇಲೆ ನಿಗಾ ಇಡಿ

ಪ್ರತಿ ಮೂರು ತಾಸಿಗೊಮ್ಮೆ ಕೇಂದ್ರ ಕಚೇರಿಗೆ ಮಾಹಿತಿ ನೀಡಿ

ಪರಿಹಾರ ಸಾಮಗ್ರಿ ಉಚಿತವಾಗಿ ಸಾಗಿಸಲು ಅವಕಾಶ ಕಲ್ಪಿಸಿ

ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕ ಇರಿಸಿ

ಪ್ರವಾಹ ಪೀಡಿತ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿ

ಬದಲಿ ಮಾರ್ಗದಲ್ಲಿ ಬಸ್‌ ಓಡಿಸುವಾಗ ಮುಂಜಾಗ್ರತಾ ಕ್ರಮ ಇರಲಿ

ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ ಓಡಿಸಿ

ಬಸ್‌ ಸಂಚರಿಸುವ ಮಾರ್ಗದಲ್ಲಿ ರಸ್ತೆ, ಸೇತುವೆ, ನೀರಿನ ಕುರಿತು ಮಾಹಿತಿ ಸಂಗ್ರಹಿಸಿ

ಟ್ರಿಪ್‌ ರದ್ದಾದರೆ ಪೂರ್ಣ ಮೊತ್ತವನ್ನು ಮರುಪಾವತಿಸಿ

ಬಸ್‌ ಪ್ರವಾಹದಲ್ಲಿ ಸಿಲುಕಿದ್ದರೆ, ಪ್ರಯಾಣಿಕರ ಸುರಕ್ಷಿತಗೆ ಒತ್ತು ನೀಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ