ಆ್ಯಪ್ನಗರ

‘ನಮ್ಮ ನಡುವೆ ಗಲಾಟೆ ಏನಿಲ್ಲ, ಅವರೇನೋ ಪದ ಬಳಕೆ ಮಾಡಿದ್ದು ನಂಗೆ ಬೇಜಾರಾಯ್ತು’; ಸಚಿವ ನಾರಾಯಣ ಗೌಡ ಸ್ಪಷ್ಟನೆ

ಇನ್ನು ಮುಂದೆ ಹೀಗೆಲ್ಲಾ ಮಾತಾಡಬಾರದು ಎಂದು ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್‌ಗೆ ಹೇಳಿದ್ದೇನೆ ಎಂದಿರುವ ಸಚಿವ ನಾರಾಯಣ ಗೌಡ, ಅವರು ಮಾತನಾಡುವ ರೀತಿ ಟಫ್ ಇದೆ. ಹಾಗಂತ ಅವರು ಆ ರೀತಿ ಮಾತಾಡಕೂಡದು ಎಂದು ಹೇಳಿದರು.

Vijaya Karnataka Web 21 Sep 2020, 4:00 pm
ಬೆಂಗಳೂರು: ತೋಟಗಾರಿಕಾ ಸಚಿವ ನಾರಾಯಣ ಗೌಡ ಹಾಗೂ ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ನಡುವೆ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಸಚಿವ ನಾರಯಣಗೌಡ ಸ್ಪಷ್ಟನೆ ನೀಡಿದ್ದಾರೆ.
Vijaya Karnataka Web narayana gowda


ಶನಿವಾರದವರೆಗೆ ವಿಧಾನಸಭಾ ಅಧಿವೇಶನ ನಡೆಸಲು ಸದನ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ವಿಧಾನಸೌಧದಲ್ಲಿ ಮಾತನಾಡಿದ ಸಚಿವ ನಾರಾಯಣ ಗೌಡ, ನಮ್ಮ ನಡುವೆ ಗಲಾಟೆ ಏನಿಲ್ಲ, ವರ್ಗಾವಣೆ ಇತ್ತು, ಅದರ ಬಗ್ಗೆ ಬನ್ನಿ ಮಾತಾಡೋಣ ಎಂದಿದ್ದೆ. ಅವರು ಸ್ವಲ್ಪ ಏಕವಚನದಲ್ಲಿ ಮಾತಾಡಿದ್ರು, ಇದರಿಂದ ನನಗೆ ಸ್ವಲ್ಪ ಬೇಜಾರು ಆಯ್ತು ಎಂದರು. ಅಲ್ಲದೇ ಇನ್ನು ಮುಂದೆ ಹೀಗೆಲ್ಲಾ ಮಾತಾಡಬಾರದು ಎಂದು ಹೇಳಿದ್ದೇನೆ ಎಂದಿರುವ ಸಚಿವ ನಾರಾಯಣ ಗೌಡ, ಅವರು ಮಾತನಾಡುವ ರೀತಿ ಟಫ್ ಇದೆ. ಹಾಗಂತ ಅವರು ಆ ರೀತಿ ಮಾತಾಡಕೂಡದು ಎಂದು ಹೇಳಿದರು.

‘ಈ ಬಾರಿಯ ಅಧಿವೇಶನದಲ್ಲಿ ಜನವಿರೋಧಿ ಬಿಲ್‌ಗಳು ಹೆಚ್ಚಾಗಿವೆ’; ಸಿದ್ದರಾಮಯ್ಯ

ಇದೇ ವೇಳೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಒಂದು ವೇಳೆ ಸಿಎಂ ನನ್ನನ್ನು ಕರೆದ್ರೆ ನಾನು ಹೋಗಿ ಮಾತಾಡ್ತೇನೆ ಎಂದ ನಾರಾಯಣ ಗೌಡ, ಮಾತುಕತೆ ವೇಳೆ ಅವರು ಏನೋ ಶಬ್ದ ಬಳಕೆ ಮಾಡಿದ್ರು, ಅದರಿಂದ ನನಗೆ ತುಂಬಾ ಬೇಜಾರು ಆಯ್ತು. ಇನ್ಮುಂದೆ ಅವರು ಈ ರೀತಿ ಮಾತಾಡಬಾರದು ಅಷ್ಟೇ ಎಂದು ಹೇಳಿದ್ದಾರೆ.

ಶಾಸಕರು ಸಚಿವರು ಸೌಜನ್ಯದಿಂದ ವರ್ತಿಸಬೇಕು, ಜನ ನಮ್ಮ ನಡವಳಿಕೆಯನ್ನು ಗಮನಿಸುತ್ತಾರೆ; ಸಿದ್ದರಾಮಯ್ಯ

ತೋಟಗಾರಿಕಾ ಸಚಿವ ನಾರಾಯಣ ಗೌಡ ಹಾಗೂ ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ನಡುವೆ ಇಂದು ಮಧ್ಯಾಹ್ನ ವಿಧಾನಸೌಧದಲ್ಲಿ ಜಟಾಪಟಿ ಉಂಟಾಗಿತ್ತು. ಇಬ್ಬರೂ ಬಿಜೆಪಿ ನಾಯಕರು ಪರಸ್ಪರ ಏಕವಚನದಲ್ಲಿ ಬೈದುಕೊಂಡು ವಾಗ್ವಾದ ನಡೆಸಿದ್ದರು. ಶಾಸಕರ ಕ್ಯಾಂಟೀನ್‌ನಲ್ಲಿ ಕಿತ್ತಾಟ ನಡೆಸಿದ ವೇಳೆ ಶಾಸಕ ಬೆಳ್ಳಿ ಪ್ರಕಾಶ್ ಅವರು ಯಾವ ಕೆಲಸನೂ ಮಾಡೋ ಯೋಗ್ಯತೆ ಇಲ್ಲ, ಕ್ಷೇತ್ರದ ಕೆಲಸ ಮಾಡದ ನೀನು ಎಂತಹ ಸಚಿವ ಎಂದು ಸಚಿವ ನಾರಾಯಣ್ ಗೌಡ ವಿರುದ್ಧ ಕಿಡಿಕಾರಿದ್ದರು. ಈ ವೇಳೆ ಈ ವೇಳೆ ನೀನು ನನ್ನ ಕಛೇರಿಗೆ ಬಂದು ಮಾತನಾಡು‌ ಎಂದ ನಾರಾಯಣ್ ಗೌಡ ಅವರಿಗೆ ನಾನೇಕೆ ನಿನ್ನ ಕಚೇರಿಗೆ ಬರಲಿ ಎಂದು‌ ಕೆಟ್ಟ ಶಬ್ದದಿಂದಲೇ ಗೌಡರಿಗೆ ಅವಾಜ್ ಹಾಕಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ