ಆ್ಯಪ್ನಗರ

ಪ್ಲ್ಯಾಸ್ಟಿಕ್‌ ಅಕ್ಕಿ, ಮೊಟ್ಟೆ ನಿಜವಲ್ಲ: ರಮೇಶ್‌ ಕುಮಾರ್‌

ಪ್ಲಾಸ್ಟಿಕ್‌ ಅಕ್ಕಿ, ಮೊಟ್ಟೆ ಶುದ್ಧ ಸುಳ್ಳು ಇಂತಹ ವಸ್ತುಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿಲ್ಲ.

Vijaya Karnataka Web 13 Jun 2017, 8:20 am

ಬೆಂಗಳೂರು: ಪ್ಲಾಸ್ಟಿಕ್‌ ಅಕ್ಕಿ, ಮೊಟ್ಟೆ ಶುದ್ಧ ಸುಳ್ಳು. ಇಂತಹ ವಸ್ತುಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿಲ್ಲ. ಹೀಗಾಗಿ ಸಾರ್ವಜನಿಕರು ಅನಗತ್ಯ ಭಯ ಪಡಬೇಕಿಲ್ಲ ಎಂದು ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಮನವಿ ಮಾಡಿದ್ದಾರೆ.

ಮೇಲ್ಮನೆಯಲ್ಲಿ ಸೋಮವಾರ ಸದಸ್ಯರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಸಚಿವರು ''ಬೆಂಗಳೂರು, ತುಮಕೂರು, ಮಂಡ್ಯ ಸಹಿತ ಕೆಲ ಜಿಲ್ಲೆಗಳಲ್ಲಿ ಕೃತಕ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬುದರಲ್ಲಿ ಸತ್ಯಾಂಶವಿಲ್ಲ. ಪ್ಲಾಸ್ಟಿಕ್‌ ಅಕ್ಕಿ, ಪ್ಲಾಸ್ಟಿಕ್‌ ಮೊಟ್ಟೆಗಳು ಆರೋಗ್ಯದ ಮೇಲೆ ಪರಿಣಾಮ ಬೀರುವುದಿದ್ದರೂ, ಮಾರಾಟವಾಗಿರುವುದು ದೃಢಪಟ್ಟಿಲ್ಲ. ನಾನಾ ಜಿಲ್ಲೆಗಳಲ್ಲಿ ಸಕ್ಕರೆ-208 ಮಾದರಿ, ಅಕ್ಕಿ-140, ರಾಗಿ-17 ಹಾಗೂ ಎಂಟು ಮೊಟ್ಟೆ ಮಾದರಿಗಳನ್ನು ವಿಶ್ಲೇಷಿಸಿದ್ದು, ಕೃತಕವಲ್ಲ ಎಂಬುದು ವರದಿಯಾಗಿದೆ. ಹೀಗಾಗಿ ಯಾರ ಮೇಲೂ ಪ್ರಕರಣ ದಾಖಲಿಸಿಲ್ಲ,'' ಎಂದು ಸ್ಪಷ್ಟಪಡಿಸಿದರು.

ಅನ್ನಭಾಗ್ಯದ ಅಕ್ಕಿ ಸಾಚಾ

ಆಹಾರ ಸಚಿವ ಯು.ಟಿ.ಖಾದರ್‌ ಮಾತನಾಡಿ ''ರಾಜ್ಯದ ಯಾವುದೇ ಭಾಗದ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಅಕ್ಕಿ ವಿತರಿಸಿಲ್ಲ. ಅನ್ನಭಾಗ್ಯದ ಅಡಿ ನೀಡಲಾಗುವ ಅಕ್ಕಿಯು ನೇರವಾಗಿ ಕೇಂದ್ರ ಆಹಾರ ನಿಗಮದಿಂದ ರಾಜ್ಯಕ್ಕೆ ಬರುತ್ತಿದೆ. ಇದರಿಂದಾಗಿ ಕಲಬೆರಿಕೆಗೂ ಅವಕಾಶ ಇಲ್ಲ. ಖಾಸಗಿಯವರಿಂದ ಖರೀದಿಸಲು ಅವಕಾಶ ಇಲ್ಲದ ಕಾರಣ ಜನರು ರೇಷನ್‌ ಅಂಗಡಿಯಲ್ಲಿನ ಅಕ್ಕಿಯನ್ನು ನಿಶ್ಚಿಂತೆಯಿಂದ ಬಳಸಬಹುದು,'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ