ಆ್ಯಪ್ನಗರ

ರಾಜ್ಯದಲ್ಲಿ ಈ ಬಾರಿ ಆಶಾದಾಯಕ ಮುಂಗಾರು, ಮುನ್ಸೂಚನೆ ವರದಿ ಬಿಡುಗಡೆ

ರಾಜ್ಯದಲ್ಲಿ ಈ ಬಾರಿ ಒಟ್ಟು ಸರಾಸರಿ ಮಳೆ ವಾಡಿಕೆಯಷ್ಟು ಎಂದು ಅಂದಾಜಿದ್ದರೂ ಈ ಬಾರಿಯ ಮುಂಗಾರು ಆಶಾದಾಯಕವಾಗಿರಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್‌. ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

Vijaya Karnataka 15 Apr 2020, 11:34 pm
ಬೆಂಗಳೂರು: ನೈಋುತ್ಯ ಮುಂಗಾರಿನ ಮುನ್ಸೂಚನೆಯ ಮೊದಲ ವರದಿಯನ್ನು ಭಾರತೀಯ ಹವಾಮಾನ ಇಲಾಖೆ ಬುಧವಾರ ಬಿಡುಗಡೆ ಮಾಡಿದ್ದು, ದೇಶಾದ್ಯಂತ ಮುಂಗಾರು ಮಳೆ ವಾಡಿಕೆಯಷ್ಟೇ ಸುರಿಯಲಿದೆ ಎಂದು ಅಂದಾಜಿಸಲಾಗಿದೆ. ಆದರೆ ರಾಜ್ಯದಲ್ಲಿ ಆಶಾದಾಯಕವಾಗಿರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
Vijaya Karnataka Web Rain Bengaluru


ರಾಜ್ಯದಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಲಿದೆ ಎಂಬ ಮುನ್ಸೂಚನೆಯ ವರದಿ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ದೇಶದಲ್ಲಿ ವಾಡಿಕೆ ಮಳೆ ಬರಲಿದೆ. ಮಳೆಯ ಪ್ರಮಾಣವು ವಾಡಿಕೆಯ ಶೇ.96 ರಿಂದ 104ರಷ್ಟು ಇರಲಿದೆ ಎಂದು ವರದಿ ತಿಳಿಸಿದೆ.

ಸಾಮಾನ್ಯವಾಗಿ ಜೂನ್‌ ಮೊದಲ ದಿನ ಕೇರಳಕ್ಕೆ ಮುಂಗಾರು ಆಗಮನವಾಗುತ್ತದೆ. ‘‘ಈ ಬಾರಿ ಮುಂಗಾರು ಪ್ರಬಲವಾಗಿದ್ದರೆ ಕೇರಳಕ್ಕೆ ಬಂದ ದಿನವೇ ರಾಜ್ಯಕ್ಕೂ ಪ್ರವೇಶಿಸಬಹುದು. ದುರ್ಬಲವಾದರೆ ಮೂರರಿಂದ ನಾಲ್ಕು ದಿನ ತಡವಾಗಬಹುದು. ಒಟ್ಟು ಸರಾಸರಿ ಮಳೆ ವಾಡಿಕೆಯಷ್ಟು ಎಂದು ಅಂದಾಜಿದ್ದರೂ ಈ ಬಾರಿಯ ಮುಂಗಾರು ಆಶಾದಾಯಕವಾಗಿರಲಿದೆ,’’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್‌. ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ