ಆ್ಯಪ್ನಗರ

ಬಯಲ ಹಸಿರ ನಗಿಸಿದಾಕೆ......

''ಏನು ಒಳ್ಳೆಯದನ್ನೂ ನನ್ನಿಂದ ಮಾಡಲು ಸಾಧ್ಯವೋ, ನನ್ನ ಜತೆಗಿನ ಜಿವಿಗಳಿಗಾಗಿ ಎಷ್ಟು ದಯೆ ತೋರಿಸಲು ಸಾಧ್ಯವೋ ಅದೆಲ್ಲವನ್ನೂ ನಾನು ಈಗಲೇ ಮಾಡಬೇಕು ನಾಳೆಗೆಂದು ಮುಂದೆ ತಳ್ಳುವಂತಿಲ್ಲ. ಉಪೇಕ್ಷೆ ಮಾಡುವಂತಿಲ್ಲ.

Vijaya Karnataka Web 12 May 2016, 4:00 am

ಇಂದು ಅಂತಾರಾಷ್ಟ್ರೀಯ ಶುಶ್ರೂಷಕ ದಿನ

''ಏನು ಒಳ್ಳೆಯದನ್ನೂ ನನ್ನಿಂದ ಮಾಡಲು ಸಾಧ್ಯವೋ, ನನ್ನ ಜತೆಗಿನ ಜಿವಿಗಳಿಗಾಗಿ ಎಷ್ಟು ದಯೆ ತೋರಿಸಲು ಸಾಧ್ಯವೋ ಅದೆಲ್ಲವನ್ನೂ ನಾನು ಈಗಲೇ ಮಾಡಬೇಕು ನಾಳೆಗೆಂದು ಮುಂದೆ ತಳ್ಳುವಂತಿಲ್ಲ. ಉಪೇಕ್ಷೆ ಮಾಡುವಂತಿಲ್ಲ. ಏಕೆಂದರೆ ಮತ್ತೆ ಈ ದಾರಿಯಲ್ಲಿ ನಾನು ಬರಲಾರೆ,'' ಇದನ್ನು ಹೇಳಿದವರು ಫ್ಲಾರೆನ್ಸ್‌ ನೈಟಿಂಗೆಲ್‌, ವೈದ್ಯಕೀಯ ಸೇವಾಕ್ಷೇತ್ರದಲ್ಲಿ ಎಂದೂ ಮರೆಯದ ಹೆಸರು. ಇಟಲಿಯಲ್ಲಿ ಹುಟ್ಟಿದ ಫ್ಲಾರೆನ್ಸ್‌, ನರ್ಸಿಂಗ್‌ ತರಬೇತಿಯನ್ನು ಮುಗಿಸಿ ತನ್ನ ಜೀವಮಾನವನ್ನು ರೋಗಿಗಳ ಸೇವೆಗೆ ಮುಡಿಪಿಟ್ಟಳು. ಈಕೆ ಹುಟ್ಟಿದ್ದು 1820, ಮೇ 12 ರಂದು. ಈಕೆಯ ಮಾನವೀಯ ಸೇವೆ, ಕರುಣೆ, ಅಂತಃಕರಣದ ನೆನಪಿಗಾಗಿ ಪ್ರತಿವರ್ಷ ಮೇ 12 ಅನ್ನು 'ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನ' ವೆಂದು ಆಚರಿಸಲಾಗುತ್ತದೆ. ನಿಷ್ಕಾಮ ಸೇವೆಯ ಆದರ್ಶಕ್ಕೆ ಈಗೆ ಸದಾಕಾಲ ದೀಪಧಾರಿಣಿ.

ಇಡೀ ವಿಶ್ವದಲ್ಲೇ ಮೊದಲ ನರ್ಸಿಂಗ್‌ ಶಾಲೆ ತೆರೆದ ಕೀರ್ತಿ ನೈಟಿಂಗೇಲ್‌ಗೆ ಸಲ್ಲುತ್ತದೆ. ಈಕೆ ಮಂಡಿಸಿದ 'ಪರಿಸರ ಸಿದ್ಧಾಂತ'ಕ್ಕೆ ಜಗತ್ತೇ ತಲೆದೂಗಿದೆ. ಶುಶ್ರೂಷೆ ಹಾಗೂ ಆಸ್ಪತ್ರೆಯ ಸ್ವಚ್ಛತೆ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದು ಅದು ದಾದಿಯರಿಗೆ ಇವತ್ತಿಗೂ ಅನುಕರಣಶೀಲ ಮಾದರಿಯಾಗಿದೆ.

1853ರಲ್ಲಿ ಟರ್ಕಿ ಮೇಲೆ ರಷ್ಯಾ ಕದನ ಸಾರಿತ್ತು. ಬಲಾಢ್ಯ ಫ್ರಾನ್ಸ್‌ ಮತ್ತು ಇಂಗ್ಲೆಂಡ್‌ಗಳು ಟರ್ಕಿಯ ಸಹಾಯಕ್ಕೆ ನಿಂತವು ಹೀಗಾಗಿ ಇಂಗ್ಲೆಂಡ್‌ ಸೇನೆ ರಷ್ಯಾದ ವಿರುದ್ಧ ಕ್ರಿಮಿಯಾದಲ್ಲಿ ಕದನ ಸಾರಿತು. ಫ್ಲಾರೆನ್ಸ್‌ ಲಂಡನ್ನಿನ ಪತ್ರಿಕೆಯೊಂದರಲ್ಲಿ ಯುದ್ಧ ಗಾಯಾಳುಗಳ ಬಗ್ಗೆ ಲೇಖನ ಬರೆದರು. ಆಗ ಫ್ಲಾರೆನ್ಸ್‌ ಅನುಭವವಿರುವ ಶುಶ್ರೂಷಿಕಿ (ನರ್ಸ್‌) ಆಗಿದ್ದರು. ಅನೇಕ ಶುಶ್ರೂಷಕರ ಜತೆಗೂಡಿ ಸೈನಿಕ ಗಾಯಾಳುಗಳ ಸೇವೆ ಮಾಡಲು ಕ್ರಿಮಿಯಾಗೆ ಬಂದರು. ಆಸ್ಪತ್ರೆಯ ಸ್ಥಿತಿ ನೋಡಿ ನೊಂದು, ಅಲ್ಲಿಯ ರೋಗಿಗಳ ಸೇವೆಗೆ ಮುಂದಾದರು. ಆಸ್ಪತ್ರೆಯ ಸುತ್ತಮುತ್ತಲಿನ ಜಾಗವನ್ನು ಶುಚಿಗೊಳಿಸಿದರು. ಗಾಳಿ, ಬೆಳಕು ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿ ಗುಣಮಟ್ಟದ ಶುಶ್ರೂಷೆಯನ್ನು ನೀಡಿ, ಸಾವಿನ ಬಾಯಿಂದ ಅದಷ್ಟೋ ರೋಗಿಗಳನ್ನು ಹೊರ ತಂದರು. ಅಲ್ಲದೇ ರೋಗಿಗಳಿಗೆ ಆರೋಗ್ಯ ಶಿಕ್ಷಣವನ್ನು ನೀಡಿ, ಅವರಿಗಾಗಿ ಗ್ರಂಥಾಲಯವನ್ನೂ ತೆರೆದರು ಮತ್ತು ಉತ್ತಮ ಗುಣಮಟ್ಟದ ಶುಶ್ರೂಷೆಗಾಗಿ ಅನೇಕ ಸಂಶೋಧನೆಗಳನ್ನು ನಡೆಸಿದರು.

ವೈದ್ಯರು ಪದವಿ ಮುಗಿಸಿ ವೃತ್ತಿಗೆ ಸೇರುವಾಗ ಪ್ರತಿಜ್ಞೆ ಕೈಗೊಳ್ಳುತ್ತಾರೆ. ಆದರೆ ಶುಶ್ರೂಷಿಕಿಯರು ಫ್ಲಾರೆನ್ಸ್‌ ನೈಂಟಿಂಗೆಲ್‌ರ ಹೆಸರಿನಲ್ಲಿ ಪ್ರತಿಜ್ಞಾ, ವಿಧಿಯನ್ನು ಶುಶ್ರೂಷ ವಿದ್ಯಾರ್ಥಿಗಳು ಸ್ವೀಕರಿಸುತ್ತಾರೆ. ಕಾಯಾ ವಾಚಾ ಮನಸ ರೋಗಿಗಳನ್ನು ನೋಡಿಕೊಳ್ಳುವುದು ಆ ಪ್ರತಿಜ್ಞೆಯ ತಿರುಳು.

ಆರೋಗ್ಯ ಇಲಾಖೆಯಲ್ಲಿ ಶುಶ್ರೂಷಕರು ದಿನದ 24 ಗಂಟೆ ರೋಗಿಗಳ ಸೇವೆಯನ್ನು ಮಾಡುತ್ತಿದ್ದಾರೆ. ಅವರೆಲ್ಲರಿಗೂ ಈ ದಿನ ಪ್ರೀತಿ ಗೌರವದ ನಮಸ್ಕಾರ ಹೇಳೋಣ.

- ಜಯಲಕ್ಷ್ಮಿ ಎನ್‌

Vijaya Karnataka Web today is international day of nurses
ಬಯಲ ಹಸಿರ ನಗಿಸಿದಾಕೆ......


(ಲೇಖಕಿ ಯಲಹಂಕ ಸರಕಾರಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿದ್ದಾರೆ)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ