ನನಗಾಗ 13 ವರ್ಷ. ಸಹಪಾಠಿಗಳೊಂದಿಗೆ ಶಿವಗಂಗೆಗೆ ಶಾಲೆಯಿಂದ ಪ್ರವಾಸ ಹೋಗಿದ್ದೆ. ವಾಪಸ್ ಬರುವಾಗ ಸಿದ್ಧಗಂಗಾ ಮಠಕ್ಕೆ ಊಟಕ್ಕೆ ಹೋದೆವು. ಕೆಲವು ಹುಡುಗಿಯರಿಗೆ ಪ್ರತ್ಯೇಕವಾಗಿ ಕುಳಿತುಕೊಳ್ಳಲು ಹೇಳಲಾಯಿತು. ನಾವು ಹೊರಗೆ ನಿಂತಿದ್ದೆವು. ಅಲ್ಲಿಗೆ ಕೇಸರಿ ಬಟ್ಟೆ ಧರಿಸಿದ್ದ ವಯಸ್ಸಾದ ವ್ಯಕ್ತಿಯೊಬ್ಬರು ಬಂದರು. ಅವರ ಜತೆ ಹಲವು ಶಿಷ್ಯರೂ ಇದ್ದರು. ''ನೀವೇಕೆ ಹೊರಗೆ ನಿಂತಿದ್ದೀರಿ'' ಎಂದು ಅವರು ಕೇಳಿದರು. ನಾವು ಮುಟ್ಟಿನ ದಿನಗಳಲ್ಲಿದ್ದೆವು. ಆದ್ದರಿಂದ ನಮಗೆ ಪ್ರತ್ಯೇಕವಾಗಿ ಊಟಕ್ಕೆ ಕೂರಲು ಹೇಳಲಾಗಿದೆ ಎಂದೆವು. ಈ ಮಾತು ಕೇಳಿ ಅವರು ಮರುಗಿದರು. ಇದೊಂದು ನೈಸರ್ಗಿಕ ಕ್ರಿಯೆ. ಇದರಲ್ಲಿ ನಾಚಿಕೊಳ್ಳುವಂಥದ್ದು ಏನೂ ಇಲ್ಲ ಎಂದರು. ಎಲ್ಲರೂ ಊಟ ಮಾಡುವ ಕಡೆ ನೀವು ಊಟ ಮಾಡಿ ಎಂದರು. ನಗುತ್ತ, ಇದೆಲ್ಲ ಸಹಜ ಪ್ರಕ್ರಿಯೆ. ಯಾವತ್ತೂ ನಾಚಿಕೊಳ್ಳಬೇಡಿ; ಹಿಂಜರಿಯಬೇಡಿ ಎಂದರು. ನಿಮ್ಮ ದೇಹದ ಬಗ್ಗೆ ಅಭಿಮಾನವಿರಲಿ ಎಂದರು. ಅವರು ನನ್ನನ್ನು ಗಾಢವಾಗಿ ಪ್ರಭಾವಿಸಿದರು. ಅವರು ಅನೇಕರ ಪಾಲಿಗೆ ಆದರ್ಶವಾಗಿರಬಹುದು. ಇದು ಸುಷ್ಮಾರಾವ್ ಎನ್ನುವವರು ಫೇಸ್ಬುಕ್ನಲ್ಲಿ ಇಂಗ್ಲಿಷ್ನಲ್ಲಿ ಬರೆದ ಹೃದಯಸ್ಪರ್ಶಿ ಬರಹ . ಸುಷ್ಮಾ ಅವರು ರಂಗಶಂಕರದಲ್ಲಿ ಕೆಲಸ ಮಾಡುತ್ತಿದ್ದಾರೆ.
ನಿಮ್ಮ ದೇಹ ನಿಮ್ಮ ಹೆಮ್ಮೆ ಎಂದರು
ಇದೊಂದು ನೈಸರ್ಗಿಕ ಕ್ರಿಯೆ. ಇದರಲ್ಲಿ ನಾಚಿಕೊಳ್ಳುವಂಥದ್ದು ಏನೂ ಇಲ್ಲ ಎಂದರು. ಎಲ್ಲರೂ ಊಟ ಮಾಡುವ ಕಡೆ ನೀವು ಊಟ ಮಾಡಿ ಎಂದರು. ನಗುತ್ತ, ಇದೆಲ್ಲ ಸಹಜ ಪ್ರಕ್ರಿಯೆ. ಯಾವತ್ತೂ ನಾಚಿಕೊಳ್ಳಬೇಡಿ; ಹಿಂಜರಿಯಬೇಡಿ ಎಂದರು. ನಿಮ್ಮ ದೇಹದ ಬಗ್ಗೆ ಅಭಿಮಾನವಿರಲಿ ಎಂದರು.
Vijaya Karnataka 22 Jan 2019, 10:42 am
ಹೈಲೈಟ್ಸ್:
- ಮುಟ್ಟು ನೈಸರ್ಗಿಕ ಕ್ರಿಯೆ ಎಂದಿದ್ದ ಶ್ರೀಗಳು
- ಇದೆಲ್ಲ ಸಹಜ ಪ್ರಕ್ರಿಯೆ ನಾಚಿಕೊಳ್ಳಬೇಡಿ ಎಂದಿದ್ದರು
- ಮುಟ್ಟಿನ ಹಿನ್ನೆಲೆ ಪ್ರತ್ಯೇಕವಾಗಿ ಕೂತಿದ್ದ ಹುಡುಗಿಯರು