ಆ್ಯಪ್ನಗರ

ಕಾಂಗ್ರೆಸ್‌ಗಿಂತಲೂ ಹೆಚ್ಚು ಪರಿಹಾರ ನೀಡಿರುವುದು ಕುರುಡರಿಗೆ ಕಾಣುತ್ತಿಲ್ಲವೇ?: ಬಿಜೆಪಿ ಟಾಂಗ್‌

ನೆರೆ ಪರಿಹಾರ ಕುರಿತಂತೆ ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಕ್ಸಮರ ನಡೆದೇ ಇದೆ. ಸೋಮವಾರ ಬಿಜೆಪಿ ಸಂಸದರನ್ನು ಉತ್ತರ ಕುಮಾರರೆಂದು ಕಾಂಗ್ರೆಸ್‌ ಟ್ವಿಟರ್‌ನಲ್ಲಿ ಕುಟುಕಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಕಾಂಗ್ರಸಿಗರು ಕುರುಡರಾಗಿದ್ದಾರೆಯೇ ಎಂದು ಟೀಕಿಸಿದೆ.

Vijaya Karnataka Web 22 Oct 2019, 6:34 pm
ಬೆಂಗಳೂರು: ರಾಜ್ಯ ನೆರೆಯಲ್ಲಿ ಮುಳುಗಿದ್ದಾಗ ಕೈಕಟ್ಟಿ ಕುಳುತಿದ್ದು ನಾಯಕರು ದೆಹಲಿಯಿಂದ ಹೈಕಮಾಂಡ್ ಕರೆ ಬಂದೊಡನೆ ಕೂಡಲೇ ಹೋಗಿ ಕೈಕಟ್ಟಿ ನಿಂತಿದ್ದನ್ನ ರಾಜ್ಯದ ಜನತೆ ನೋಡಿದ್ದಾರೆ ಎಂದು ರಾಜ್ಯ ಪಿಜೆಪಿ ಟ್ವಿಟ್ಟರ್‌ ಮೂಲಕ ಕಾಂಗ್ರೆಸ್‌ಗೆ ಟಾಂಗ್ ಣೀಡಿದೆ. ಸೋಮವಾರ ಕರ್ನಾಟಕ ಕಾಂಗ್ರೆಸ್‌ನ ಟ್ವಿಟರ್‌ ಟೀಕೆಗೆ ರಾಜ್ಯ ಬಿಜೆಪಿ ಖಾರವಾಗಿ ಉತ್ತರಿಸಿದೆ.
Vijaya Karnataka Web bjp- congres




'ರಾಜ್ಯದ ಭೀಕರ ಪ್ರವಾಹಕ್ಕೆ ಸ್ಪಂದಿಸದೇ ದ್ರೋಹ ಎಸಗಿದ ಕೇಂದ್ರದ ವಿರುದ್ಧ 80ದಿನಗಳ ನಂತರ ಕೊನೆಗೂ ಸಂಸದರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ಅಸಮಾಧಾನವನ್ನು ತೋರಬೇಕಿರುವುದುರಾಜ್ಯದಲ್ಲಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ. ಸಂಸದ ಬಿ.ಎನ್.ಬಚ್ಚೇಗೌಡರು ಹಾಗೂ ಉಳಿದ 24 ಉತ್ತರಕುಮಾರರು ಕೇಂದ್ರದಿಂದ ಪರಿಹಾರಕ್ಕೆ ಒತ್ತಾಯಿಸಬೇಕಿದೆ ಎಂದು ಕರ್ನಾಟಕ ಕಾಂಗ್ರೆಸ್‌ ಟ್ವಿಟರ್‌ನಲ್ಲಿ ಕುಟಿಕಿತ್ತು.



ಇದಕ್ಕೆ ರಾಜ್ಯ ಬಿಜೆಪಿ ತಕ್ಕ ಉತ್ತರ ನೀಡಿದ್ದು," ರಾಜ್ಯ ನೆರೆಯಲ್ಲಿ ಮುಳುಗಿದ್ದರೂ ಕಣ್ಣಿನ ನೆಪ ಒಡ್ಡಿ ಕೂತಿದ್ದ ನಾಯಕರು ನಿಮ್ಮ ಪರಮೋಚ್ಛ ನಾಯಕಿ ಕರೆದ ಕೂಡಲೇ ದೆಹಲಿಗೆ ಹೋಗಿ ಅವರ ಮುಂದೆ ಕೈಕಟ್ಟಿ ಕುಳಿತಿದ್ದನ್ನು ಎಲ್ಲರೂ ನೋಡಿದ್ದಾರೆ. ಪ್ರಧಾನಿ ನರೇಂದ್ರ ಮೊದಿ ಅವರು ಹಿಂದಿನ ಸರ್ಕಾರ ಎನ್ ಡಿ ಆರ್ ಎಫ್ ಅಡಿ ಕೊಟ್ಟ ಪರಿಹಾರಕ್ಕಿಂತಲೂ ಹೆಚ್ಚು ಕೊಟ್ಟಿರುವುದು ಕುರುಡರಿಗೆ ಕಾಣುತ್ತಿಲ್ಲ' ಎಂದು ಟ್ವೀಟ್‌ ಮಾಡಿದೆ.

ಅಸಮಾಧಾನ ವ್ಯಕ್ತಪಡಿಸಿದ್ದು ಯಾರು ?
ಕೇಂದ್ರ ಸರ್ಕಾರ ಕಷ್ಟ ಕಾಲದಲ್ಲಿ ರಾಜ್ಯದ ನೆರೆ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡುವ ಮೂಲಕ ಸ್ಪಂದಿಸಬೇಕಿತ್ತು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್.ಬಚ್ಚೇಗೌಡ ಅವರು ಸೋಮವಾರ ಚಿಕ್ಕಬಳ್ಳಾಪುರದ ಒಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ರಾಜ್ಯದ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಸಿರುವುದು ತೀವ್ರ ಆತಂಕ ಉಂಟುಮಾಡಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ವಿನ ಅನುದಾನ ನೀಡಿ ಕಷ್ಟ ಕಾಲದಲ್ಲಿ ಸ್ಪಂದಿಸಬೇಕು. ಸದ್ಯಕ್ಕೆ 1200 ಕೋಟಿ ಘೋಷಣೆ ಮಾಡಿದೆ. ಕನಿಷ್ಟ 5 ರಿಂದ 10ಸಾವಿರ ಕೋಟಿ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಕೋರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ