ಸಿದ್ದರಾಮಯ್ಯ ಜತೆ ಉಮೇಶ್ ಕತ್ತಿ ಮಾತನಾಡಿದರೆ ತಪ್ಪೇನು: ಲಕ್ಷ್ಮಣ ಸವದಿ
ಗೋಕಾಕ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಯ ವಿಚಾರವನ್ನು ಹೈ ಕಮಾಂಡ್ ನೋಡಿಕೊಳ್ಳುತ್ತದೆ. ವರಿಷ್ಠ ನಾಯಕರೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಲಕ್ಷ್ಮ ಸವದಿ ಸ್ಪಷ್ಟಪಡಿಸಿದರು.
Vijaya Karnataka Web 22 Aug 2019, 6:13 pm
ಬೆಳಗಾವಿ: ಸಚಿವ ಸಂಪುಟ ರಚನೆ ನಂತರ ಬಿಜೆಪಿಯಲ್ಲಿ ಅಸಮಾಧಾನ ಹೆಚ್ಚುತ್ತಿರುವ ವಿಚಾರವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ವರಿಷ್ಠ ನಾಯಕರು ನೋಡಿಕೊಳ್ಳುತ್ತಾರೆ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಗೋಕಾಕ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ನಂತರ ಗೋಕಾಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿಯಲ್ಲಿ ಅಸಮಾಧಾನ ಇದ್ದರೆ ಅದನ್ನು ಸಿಎಂ ಯಡಿಯೂರಪ್ಪ ಮತ್ತು ನಮ್ಮ ನಾಯಕರು ನೋಡಿಕೊಳ್ಳುತ್ತಾರೆ. ನಾವು ಎಲ್ಲರೂ ಒಟ್ಟಾಗಿದ್ದೇವೆ.
ಒಟ್ಟಾಗಿ ಕೆಲಸ ಮಾಡ್ತಿವಿ ಎಂದರು.
ಮಾಜಿ ಸಚಿವ ಉಮೇಶ ಕತ್ತಿ ಮಾಜಿ ಸಿಎಂ ಸಿದ್ದರಾಮಯ್ಯ ಅವನ್ನು ಭೇಟಿ ವಿಚಾರ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಸಿದ ಸವದಿ, ರಾಜಕೀಯವಾಗಿ ಎಲ್ಲರೂ ಎಲ್ಲರ ಜತೆ ಮಾತನಾಡಬಹುದು, ಮಾತನಾಡುತ್ತಾರೆ. ನಾನೂ ಎಲ್ಲರ ಜೊತೆಗೆ ಮಾತನಾಡ್ತಿನಿ. ಅದರಲ್ಲೇನೂ ತಪ್ಪು ಎಂದು ಲಕ್ಷ್ಮಣ ಸವದಿ ಹೇಳಿದರು.
ಸಂಪುಟ ರಚನೆ ನಂತರ ಕತ್ತಿ ಜೊತೆ ಸಂಪರ್ಕ ಮಾಡಿದ್ದಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸವದಿ, ಉಮೇಶ ಕತ್ತಿ ಜೊತೆ ದಿನಾಲು ಮಾತನಾಡುತ್ತೇನೆ, ಅವರೇನು ಪಾಕಿಸ್ತಾನದಲ್ಲಿ ಇಲ್ಲ. ಹೀಗಾಗಿ ನಾನು ದಿನಾಲು ಅವರ ಜತೆಗೆ ಮಾತನಾಡುತ್ತೇನೆ. ಅವರು ನನ್ನ ಆತ್ಮೀಯ ಸ್ನೇಹಿತ ಎಂದು ಲಕ್ಷ್ಮಣ ಸವದಿ ಹೇಳೀದರು.
ಗೋಕಾಕ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ನಂತರ ಗೋಕಾಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿಯಲ್ಲಿ ಅಸಮಾಧಾನ ಇದ್ದರೆ ಅದನ್ನು ಸಿಎಂ ಯಡಿಯೂರಪ್ಪ ಮತ್ತು ನಮ್ಮ ನಾಯಕರು ನೋಡಿಕೊಳ್ಳುತ್ತಾರೆ. ನಾವು ಎಲ್ಲರೂ ಒಟ್ಟಾಗಿದ್ದೇವೆ.
ಒಟ್ಟಾಗಿ ಕೆಲಸ ಮಾಡ್ತಿವಿ ಎಂದರು.
ಮಾಜಿ ಸಚಿವ ಉಮೇಶ ಕತ್ತಿ ಮಾಜಿ ಸಿಎಂ ಸಿದ್ದರಾಮಯ್ಯ ಅವನ್ನು ಭೇಟಿ ವಿಚಾರ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಸಿದ ಸವದಿ, ರಾಜಕೀಯವಾಗಿ ಎಲ್ಲರೂ ಎಲ್ಲರ ಜತೆ ಮಾತನಾಡಬಹುದು, ಮಾತನಾಡುತ್ತಾರೆ. ನಾನೂ ಎಲ್ಲರ ಜೊತೆಗೆ ಮಾತನಾಡ್ತಿನಿ. ಅದರಲ್ಲೇನೂ ತಪ್ಪು ಎಂದು ಲಕ್ಷ್ಮಣ ಸವದಿ ಹೇಳಿದರು.
ಸಂಪುಟ ರಚನೆ ನಂತರ ಕತ್ತಿ ಜೊತೆ ಸಂಪರ್ಕ ಮಾಡಿದ್ದಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸವದಿ, ಉಮೇಶ ಕತ್ತಿ ಜೊತೆ ದಿನಾಲು ಮಾತನಾಡುತ್ತೇನೆ, ಅವರೇನು ಪಾಕಿಸ್ತಾನದಲ್ಲಿ ಇಲ್ಲ. ಹೀಗಾಗಿ ನಾನು ದಿನಾಲು ಅವರ ಜತೆಗೆ ಮಾತನಾಡುತ್ತೇನೆ. ಅವರು ನನ್ನ ಆತ್ಮೀಯ ಸ್ನೇಹಿತ ಎಂದು ಲಕ್ಷ್ಮಣ ಸವದಿ ಹೇಳೀದರು.