ಬೆಂಗಳೂರು: ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಮಂಗಳವಾರ ರಾಜ್ಯಪಾಲ ವಜೂಭಾಯಿ ವಾಲಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಆದರೆ ಯಾವ ಆಧಾರದಲ್ಲಿ ರಾಜ್ಯಪಾಲರು ಸಭೆ ಕರೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಮಂಗಳವಾರ ನಮ್ಮ ನಿವಾಸದಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಆಹ್ವಾನದ ಮೇರೆ ಅವರಿಗೆ ಗೌರವ ಕೊಟ್ಟು ನಮ್ಮ ಪಕ್ಷ ಸಭೆಯಲ್ಲಿ ಭಾಗಿಯಾಗುತ್ತಿದೆ. ಸರ್ಕಾರದ ಬಳಿ ಮಾಹಿತಿ ಪಡೆದುಕೊಳ್ಳಬಹುದು.ಸರ್ವ ಪಕ್ಷಗಳ ಸಭೆಗೆ ನಮ್ಮನ್ನು ಕರೆದಿದ್ದಾರೆ ಆದರೆ ಸಂವಿಧಾನದ ಯಾವ ಅಡಿಯಲ್ಲಿ ಕರೆದಿದ್ದಾರೆ ಎಂದು ಗೊತ್ತಿಲ್ಲ , ಕರೆಯಬಹುದಾ ಅಂತ ಗೊತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯಪಾಲರು ಚೇರ್ ಮಾಡುತ್ತಾರೆ ಎಂದು ನಮಗೆ ನೋಟಿಸ್ ಬಂದಿದೆ ಆದರೆ, ರಾಜ್ಯಪಾಲರು ಯಾವ ನಿಯಮದ ಅಡಿಯಲ್ಲಿ ಸಭೆ ಕರೆದಿದ್ದಾರೆ ಎಂದು ಗೊತ್ತಿಲ್ಲ. ಇದನ್ನು ಕಾನೂನು ಸಚಿವರು ಹೇಳಬೇಕು ಎಂದರು.
ಇವರು ಹೇಳಿದ ಹಾಗೆ ಎಲ್ಲವನ್ನು ಮಾಡಿದ್ದೇವೆ. 1,20,000 ಜನರಿಗೆ ಮುಂಜಾಗ್ರತೆಯ ಕ್ರಮ ಮಾಡಬೇಕು ಎಂದು ತಜ್ಞರು ಹೇಳಿದ್ದರೂ ಕೇಳಿಲ್ಲ. ರಾಜ್ಯದಲ್ಲಿ ಸರ್ಕಾರ ಸರಿಯಾಗಿ ಕೆಲಸ ಮಾಡ್ತಿಲ್ಲ ಎಂದು ರಾಜ್ಯಪಾಲರು ಬಂದಿದ್ದಾರೆ ಎಂದರು.
ಆರೋಗ್ಯ ಸಚಿವರು ಕೇವಲ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟರೆ ಸಾಲದು. ಎಷ್ಟು ಜನ ಐಎಎಸ್, ಕೆಎಎಸ್ ಅಧಿಕಾರಿಗಳು ಇದ್ದಾರೋ, ಅವರನ್ನೆಲ್ಲ ಬಳಸಿಕೊಂಡು ವಾರ್ ಫೂಟ್ ನಲ್ಲಿ ಕೆಲಸ ಮಾಡಬೇಕು.
ಹೆಣ ಸುಡಲು ಜಾಗ ನಿಗದಿ ಮಾಡಿ
ಹೆಣ ಸುಡಲು ತೊಂದರೆ ಆಗ್ತಿದೆ, ಕಂದಾಯ ಸಚಿವರಿಗೆ ಇದು ಅರ್ಥವಾಗಬೇಕು. ಬೆಂಗಳೂರು ಸುತ್ತಲಿನ ಪ್ರದೇಶಗಳಲ್ಲಿ 5 ರಿಂದ 6 ಎಕರೆ ಜಾಗದಲ್ಲಿ ಹೆಣ ಸುಡುವುದಕ್ಕೆ ವ್ಯವಸ್ಥೆ ಮಾಡಿ. ಸರ್ಕಾರಿ ಜಾಗವನ್ನೇ ನಿಗದಿ ಮಾಡಿ. ಗೌರವ ಯುತವಾಗಿ ಅವರನ್ನು ಕಳಿಸಿಕೊಡಿ. ಅವರನ್ನು ಕ್ಯೂನಲ್ಲಿ ನಿಲ್ಲಿಸಿ ಹೆಣ ಸುಡುವಂತೆ ಮಾಡುತ್ತಿದ್ದಾರೆ. ಕೊರೊನಾದಿಂದ ಎಷ್ಟು ಜನ ಸತ್ತರು ಅಂತ ಆಡಿಟ್ ಮಾಡಿಸಿ, ಹಳ್ಳಿ ಜನ ನಿಮ್ಮ ಆಡಳಿತ ನೋಡಿ ನಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಸರಿ ಮಾಡುತ್ತೇವೆ ಅಂದರೆ ಸಾಲದು. ನೀವು ಬರಿ ಮೀಟಿಂಗ್ ಮಾಡುವುದೇ ಆಯ್ತು. ಪಿಎಂ , ಸಿಎಂ ಕೇರ್ ನಲ್ಲಿ ಹಣ ಎಷ್ಟು ಬಂತು ಎಂಬ ಲೆಕ್ಕವನ್ನು ಜನರಿಗೆ ಕೊಡಿ ಎಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.
ಮಂಗಳವಾರ ನಮ್ಮ ನಿವಾಸದಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಆಹ್ವಾನದ ಮೇರೆ ಅವರಿಗೆ ಗೌರವ ಕೊಟ್ಟು ನಮ್ಮ ಪಕ್ಷ ಸಭೆಯಲ್ಲಿ ಭಾಗಿಯಾಗುತ್ತಿದೆ. ಸರ್ಕಾರದ ಬಳಿ ಮಾಹಿತಿ ಪಡೆದುಕೊಳ್ಳಬಹುದು.ಸರ್ವ ಪಕ್ಷಗಳ ಸಭೆಗೆ ನಮ್ಮನ್ನು ಕರೆದಿದ್ದಾರೆ ಆದರೆ ಸಂವಿಧಾನದ ಯಾವ ಅಡಿಯಲ್ಲಿ ಕರೆದಿದ್ದಾರೆ ಎಂದು ಗೊತ್ತಿಲ್ಲ , ಕರೆಯಬಹುದಾ ಅಂತ ಗೊತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯಪಾಲರು ಚೇರ್ ಮಾಡುತ್ತಾರೆ ಎಂದು ನಮಗೆ ನೋಟಿಸ್ ಬಂದಿದೆ ಆದರೆ, ರಾಜ್ಯಪಾಲರು ಯಾವ ನಿಯಮದ ಅಡಿಯಲ್ಲಿ ಸಭೆ ಕರೆದಿದ್ದಾರೆ ಎಂದು ಗೊತ್ತಿಲ್ಲ. ಇದನ್ನು ಕಾನೂನು ಸಚಿವರು ಹೇಳಬೇಕು ಎಂದರು.
ಇವರು ಹೇಳಿದ ಹಾಗೆ ಎಲ್ಲವನ್ನು ಮಾಡಿದ್ದೇವೆ. 1,20,000 ಜನರಿಗೆ ಮುಂಜಾಗ್ರತೆಯ ಕ್ರಮ ಮಾಡಬೇಕು ಎಂದು ತಜ್ಞರು ಹೇಳಿದ್ದರೂ ಕೇಳಿಲ್ಲ. ರಾಜ್ಯದಲ್ಲಿ ಸರ್ಕಾರ ಸರಿಯಾಗಿ ಕೆಲಸ ಮಾಡ್ತಿಲ್ಲ ಎಂದು ರಾಜ್ಯಪಾಲರು ಬಂದಿದ್ದಾರೆ ಎಂದರು.
ಆರೋಗ್ಯ ಸಚಿವರು ಕೇವಲ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟರೆ ಸಾಲದು. ಎಷ್ಟು ಜನ ಐಎಎಸ್, ಕೆಎಎಸ್ ಅಧಿಕಾರಿಗಳು ಇದ್ದಾರೋ, ಅವರನ್ನೆಲ್ಲ ಬಳಸಿಕೊಂಡು ವಾರ್ ಫೂಟ್ ನಲ್ಲಿ ಕೆಲಸ ಮಾಡಬೇಕು.
ಹೆಣ ಸುಡಲು ಜಾಗ ನಿಗದಿ ಮಾಡಿ
ಹೆಣ ಸುಡಲು ತೊಂದರೆ ಆಗ್ತಿದೆ, ಕಂದಾಯ ಸಚಿವರಿಗೆ ಇದು ಅರ್ಥವಾಗಬೇಕು. ಬೆಂಗಳೂರು ಸುತ್ತಲಿನ ಪ್ರದೇಶಗಳಲ್ಲಿ 5 ರಿಂದ 6 ಎಕರೆ ಜಾಗದಲ್ಲಿ ಹೆಣ ಸುಡುವುದಕ್ಕೆ ವ್ಯವಸ್ಥೆ ಮಾಡಿ. ಸರ್ಕಾರಿ ಜಾಗವನ್ನೇ ನಿಗದಿ ಮಾಡಿ. ಗೌರವ ಯುತವಾಗಿ ಅವರನ್ನು ಕಳಿಸಿಕೊಡಿ. ಅವರನ್ನು ಕ್ಯೂನಲ್ಲಿ ನಿಲ್ಲಿಸಿ ಹೆಣ ಸುಡುವಂತೆ ಮಾಡುತ್ತಿದ್ದಾರೆ. ಕೊರೊನಾದಿಂದ ಎಷ್ಟು ಜನ ಸತ್ತರು ಅಂತ ಆಡಿಟ್ ಮಾಡಿಸಿ, ಹಳ್ಳಿ ಜನ ನಿಮ್ಮ ಆಡಳಿತ ನೋಡಿ ನಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಸರಿ ಮಾಡುತ್ತೇವೆ ಅಂದರೆ ಸಾಲದು. ನೀವು ಬರಿ ಮೀಟಿಂಗ್ ಮಾಡುವುದೇ ಆಯ್ತು. ಪಿಎಂ , ಸಿಎಂ ಕೇರ್ ನಲ್ಲಿ ಹಣ ಎಷ್ಟು ಬಂತು ಎಂಬ ಲೆಕ್ಕವನ್ನು ಜನರಿಗೆ ಕೊಡಿ ಎಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.