ಆ್ಯಪ್ನಗರ

ಪಕ್ಷಭೇದ ಮರೆತ ಅಭಿನಂದನೆಗೆ ಕರಗಿದ ಕೇಂದ್ರ ಸಚಿವ ಡಿವಿಎಸ್‌

'ನಾನು ಈ ಕರೆಯನ್ನು ನಿರೀಕ್ಷಿಸಿದ್ದೆ. ಅದರಂತೆ ಬಂದಿದೆ. ನಮ್ಮ ಕನ್ನಡದ ಮಣ್ಣಿನ ಗುಣವೇ ಅಂತಹದು. ದ್ವೇಷ-ರಾಗ ನಮ್ಮ ಮಣ್ಣಲ್ಲಿಲ್ಲ. ಚುನಾವಣೆ ಮುಗಿದ ಬಳಿಕ ರಾಜ್ಯ ಮುಖ್ಯ ಎನ್ನುವ ದೊಡ್ಡ ಗುಣವೇ ಈ ನಾಯಕರುಗಳ ಈ ಕರೆಗೆ ಕಾರಣ. ಕೇಂದ್ರ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನನಗೆ ವೈಯಕ್ತಿಕ ಕರೆ ಮಾಡಿ ಅಭಿನಂದಿಸಿದ ಮುಖ್ಯಮಂತ್ರಿಗಳಾದ ಎಚ್‌.ಡಿ ಕುಮಾರಸ್ವಾಮಿ ಅವರಿಗೆ, ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್‌ ಅವರಿಗೆ, ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ, ನನ್ನ ಪ್ರೀತಿಯ ಸೋದರ ಸಮಾನರಾದ ಎಚ್‌.ಕೆ ಪಾಟೀಲ್‌ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು' ಎಂದು ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.

Vijaya Karnataka Web 31 May 2019, 9:49 pm
ಎಚ್‌ಡಿಕೆ, ಖರ್ಗೆ, ಎಚ್ಕೆ ಪಾಟೀಲ್‌, ಪರಮೇಶ್ವರ್‌ಗೆ ವಂದನೆ
Vijaya Karnataka Web DV Sadanada Gowda oath taking


ಬೆಂಗಳೂರು: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದ ಗೌಡ ಅವರು ರಾಜಕೀಯ ಪಕ್ಷ ಭೇದ ಮರೆತು ತಮ್ಮನ್ನು ಅಭಿನಂದಿಸಿದ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಚ್‌.ಕೆ ಪಾಟೀಲ್ ಅವರಿಗೆ ಕೃತಜ್ಞತೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

'ನಾನು ಈ ಕರೆಯನ್ನು ನಿರೀಕ್ಷಿಸಿದ್ದೆ. ಅದರಂತೆ ಬಂದಿದೆ. ನಮ್ಮ ಕನ್ನಡದ ಮಣ್ಣಿನ ಗುಣವೇ ಅಂತಹದು. ದ್ವೇಷ-ರಾಗ ನಮ್ಮ ಮಣ್ಣಲ್ಲಿಲ್ಲ.
ಚುನಾವಣೆ ಮುಗಿದ ಬಳಿಕ ರಾಜ್ಯ ಮುಖ್ಯ ಎನ್ನುವ ದೊಡ್ಡ ಗುಣವೇ ಈ ನಾಯಕರುಗಳ ಈ ಕರೆಗೆ ಕಾರಣ. ಕೇಂದ್ರ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನನಗೆ ವೈಯಕ್ತಿಕ ಕರೆ ಮಾಡಿ ಅಭಿನಂದಿಸಿದ ಮುಖ್ಯಮಂತ್ರಿಗಳಾದ ಎಚ್‌.ಡಿ ಕುಮಾರಸ್ವಾಮಿ ಅವರಿಗೆ, ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್‌ ಅವರಿಗೆ, ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ, ನನ್ನ ಪ್ರೀತಿಯ ಸೋದರ ಸಮಾನರಾದ ಎಚ್‌.ಕೆ ಪಾಟೀಲ್‌ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು' ಎಂದು ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.


ಮತ್ತೊಂದು ಟ್ವೀಟ್‌ನಲ್ಲಿ, 'ಕರ್ನಾಟಕದಿಂದ ಆಯ್ಕೆಯಾದ ಎಲ್ಲ ಸಚಿವರು, ಸಂಸದರೊಂದಿಗೆ ಸೇರಿ ರಾಜ್ಯದ ಹಿತ ಕಾಯುವಲ್ಲಿ ಯಾವುದೇ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ನಮ್ಮ ಕರ್ತವ್ಯ. ರಾಜಕೀಯದಲ್ಲಿ ರಾಜಕೀಯ ಮಾಡೋಣ. ರಾಜ್ಯದ ಹಿತ ಕಾಯುವಲ್ಲಿ ರಾಜಕೀಯ ಖಂಡಿತಾ ಅನಗತ್ಯ' ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ