ಆ್ಯಪ್ನಗರ

ಬೆಂಗಳೂರಿಂದ ಮೈಸೂರಿಗೆ ಹೋಗಲು 75 ನಿಮಿಷ ಸಾಕು! ಮುಕ್ತಾಯದ ಹಂತಕ್ಕೆ ಎಕ್ಸ್‌ಪ್ರೆಸ್‌ ವೇ; ನಿತಿನ್‌ ಗಡ್ಕರಿ ಮಾಹಿತಿ

ಅಕ್ಟೋಬರ್‌ ಬಳಿಕ ಬೆಂಗಳೂರಿನಿಂದ ಮೈಸೂರಿಗೆ ಕೇವಲ 75 ನಿಮಿಷದಲ್ಲಿ ಪ್ರಯಾಣಿಸಬಹುದಾಗಿದೆ. ಹೌದು , ಮುಕ್ತಾಯದ ಹಂತಕ್ಕೆ ಬೆಂಗಳೂರು-ನಿಡಘಟ್ಟ-ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ಬಂದಿದ್ದು, ಅಕ್ಟೋಬರ್‌ ವೇಳೆಗೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಮಾಹಿತಿ ನೀಡಿದ್ದಾರೆ.

Edited byಅವಿನಾಶ ವಗರನಾಳ | Vijaya Karnataka 28 Mar 2022, 11:41 pm

ಹೈಲೈಟ್ಸ್‌:


  • ಮುಕ್ತಾಯದ ಹಂತಕ್ಕೆ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ವೇ
  • ಅಕ್ಟೋಬರ್‌ ಬಳಿಕ ಬೆಂಗಳೂರಿನಿಂದ ಮೈಸೂರಿಗ ತಲುಪಲು 75 ನಿಮಿಷ ಸಾಕು
  • 117 ಕಿಮೀ ಉದ್ದ ಹಾಗೂ 10 ಪಥಗಳ ಈ ಹೆದ್ದಾರಿ ಅಕ್ಟೋಬರ್‌ ಹೊತ್ತಿಗೆ ಸಂಚಾರಕ್ಕೆ ಮುಕ್ತ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Nitin Gadkari
ಬೆಂಗಳೂರು: ಭರದಿಂದ ಕಾಮಗಾರಿ ನಡೆಯುತ್ತಿರುವ ಬೆಂಗಳೂರು-ನಿಡಘಟ್ಟ-ಮೈಸೂರು ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡರೆ, ಎರಡೂ ನಗರಗಳ ನಡುವಿನ ಪ್ರಯಾಣದ ಅವಧಿ ಈಗಿರುವ 3 ಗಂಟೆಯಿಂದ 75 ನಿಮಿಷಕ್ಕೆ ತಗ್ಗಲಿದೆ!
117 ಕಿಮೀ ಉದ್ದ ಹಾಗೂ 10 ಪಥಗಳ ಈ ಹೆದ್ದಾರಿ ಅಕ್ಟೋಬರ್‌ ಹೊತ್ತಿಗೆ ಸಂಚಾರಕ್ಕೆ ಮುಕ್ತವಾಗಲಿದೆ ಎಂಬ ಮಾಹಿತಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹಂಚಿಕೊಂಡಿದ್ದಾರೆ.

ಸುಮಾರು 8,350 ಕೋಟಿ ರೂ. ವೆಚ್ಚದ ಈ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದೆ. ದೇಶದ ಎರಡು ಪ್ರಮುಖ ನಗರಗಳಾಗಿರುವ ಬೆಂಗಳೂರು ಮತ್ತು ಮೈಸೂರು ನಡುವಿನ ಸಂಪರ್ಕವನ್ನು ಈ ಹೆದ್ದಾರಿಯು ಉನ್ನತೀಕರಿಸಲಿದೆ. ಇದರಿಂದಾಗಿ ಪ್ರಾದೇಶಿಕ ಪ್ರವಾಸೋದ್ಯಮ ಮತ್ತು ಆರ್ಥಿಕ ಅಭಿವೃದ್ಧಿ ಮತ್ತಷ್ಟು ವೇಗ ಸಿಗಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಮೈಸೂರು-ಬೆಂಗಳೂರು ಹೆದ್ದಾರಿಗೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡದೆ ವಂಚನೆ, ರೈತರ ಆರೋಪ
ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಮೈಸೂರು-ಬೆಂಗಳೂರು ಹೈವೇ ರೀತಿಯ ಅನೇಕ ಯೋಜನೆಗಳನ್ನು ಘೋಷಿಸಿ ಮತ್ತು ಅವುಗಳನ್ನು ಅಷ್ಟೇ ಜವಾಬ್ದಾರಿಯಿಂದ ಪೂರ್ಣಗೊಳಿಸಲಾಗುತ್ತಿದೆ. ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಮತ್ತು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ಬದ್ಧತೆಯನ್ನು ನಮ್ಮ ಸರಕಾರ ಪ್ರದರ್ಶಿಸುತ್ತಲೇ ಬಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಹೆದ್ದಾರಿ ವಿಶೇಷತೆಗಳೇನು?
  • ಮೈಸೂರು-ಬೆಂಗಳೂರು ಮಧ್ಯೆ 8 ಕಿ.ಮೀ ಉದ್ದ ಎಲೆವೇಟೆಡ್‌ ಕಾರಿಡಾರ್‌
  • 9 ಪ್ರಮುಖ ಸೇತುವೆಗಳು, 42 ಕಿರು ಸೇತುವೆಗಳು
  • 64 ಅಂಡರ್‌ಪಾಸ್‌ಗಳು, 11 ಓವರ್‌ಪಾಸ್‌ಗಳು
  • 4 ಆರ್‌ಒಬಿ(ರೋಡ್‌ ಓವರ್‌ ಬ್ರಿಡ್ಜ್‌)ಗಳು ಮತ್ತು 5 ಬೈಪಾಸ್‌ಗಳು

ಎರಡು ಹಂತದಲ್ಲಿಅಭಿವೃದ್ಧಿ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಎರಡು ಹಂತದಲ್ಲಿಅಭಿವೃದ್ಧಿಪಡಿಸಲಾಗುತ್ತಿದೆ. ಮೊದಲ ಹಂತದಲ್ಲಿ ಬೆಂಗಳೂರು-ನಿಡಘಟ್ಟ( 56 ಕಿ.ಮೀ) ಹಾಗೂ ಎರಡನೇ ಹಂತದಲ್ಲಿ ನಿಡಘಟ್ಟ-ಮೈಸೂರು(61 ಕಿಮೀ) ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ. 2018ರ ಮಾರ್ಚ್‌ನಲ್ಲಿ ಈ ಎಕ್ಸ್‌ಪ್ರೆಸ್‌ವೇ ಅಭಿವೃದ್ಧಿ ಶಂಕುಸ್ಥಾಪನೆ ನಡೆಯಿತು.

ಬೆಂಗಳೂರು–ಮೈಸೂರು ದಶಪಥಗಳ ಹೆದ್ದಾರಿ ಕಾಮಗಾರಿ ಮೊದಲ ಹಂತ ವರ್ಷಾಂತ್ಯಕ್ಕೆ ಮುಕ್ತಾಯ
ಪುಣೆ-ಬೆಂಗಳೂರು ಮಧ್ಯೆ ಹೊಸ ಹೆದ್ದಾರಿ
ರಾಷ್ಟ್ರೀಯ ಹೆದ್ದಾರಿ 4 ಕರ್ನಾಟಕದ ಜೀವನಾಡಿ ಹೆದ್ದಾರಿ. ಈಗ ಇದಕ್ಕೆ ಪರ್ಯಾಯವಾದ ಮತ್ತೊಂದು ಹೊಸ ಹೆದ್ದಾರಿಯನ್ನು ಕೇಂದ್ರ ಸರಕಾರ ನಿರ್ಮಿಸಲಿದೆ. ಈ ವಿಷಯವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಖಚಿತಪಡಿಸಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮಾತನಾಡಿ ''ಪುಣೆ-ಬೆಂಗಳೂರು ಮಧ್ಯೆ 699 ಕಿ.ಮೀ ಉದ್ದದ ಮತ್ತೊಂದು ಹೆದ್ದಾರಿಯನ್ನು ನಿರ್ಮಿಸಲಾಗುವುದು ಮತ್ತು ಇದು ಸದಾ ಬರಪೀಡಿತ ಎನಿಸಿಕೊಂಡಿರುವ ಸತಾರಾ ಮತ್ತು ಸಾಂಗ್ಲಿ ಜಿಲ್ಲೆಯಲ್ಲಿಹಾದು ಹೋಗಲಿದೆ,'' ಎಂದು ಹೇಳಿದರು.

ಪ್ರಸ್ತುತ 775 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ 4 ಮಳೆಗಾಲದಲ್ಲಿಅನೇಕ ಕಡೆ ಮುಳುಗುತ್ತದೆ. ಹಾಗಾಗಿ ಹೊಸದಾಗಿ ನಿರ್ಮಾಣವಾಗಲಿರುವ ಹೆದ್ದಾರಿ ಯಾವುದೇ ಭಾಗದಲ್ಲಿ ಮುಳುಗಡೆಯಾಗದಂತೆ ವಿನ್ಯಾಸ ಮಾಡಲಾಗುತ್ತಿದೆ. ಜತೆಗೆ ಪುಣೆ-ಬೆಂಗಳೂರು ನಡುವಿನ ಅಂತರವೂ 76 ಕಿಮೀನಷ್ಟು ತಗ್ಗಲಿದೆ. ಈ ಯೋಜನೆಗೆ 40 ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.

ಎಲ್ಲೆಲ್ಲಿಹಾದು ಹೋಗುತ್ತದೆ?
ಮಹಾರಾಷ್ಟ್ರ: ಕ್ಷಾಮ ಪೀಡಿತ ಪ್ರದೇಶಗಳಾದ ಪುಣೆಯ ಖಂಡಾಲಾ, ಸಾತಾರಾ ಜಿಲ್ಲೆಯ ಫಲಠಣ, ಖಟವಾ, ಖಾನಾಪುರ ಮತ್ತು ಸಾಂಗ್ಲಿಜಿಲ್ಲೆಯ ತಾಸ್‌ಗಾಂವ್‌, ಕವಠೆ ಮಹಂಕಾಳ್‌ ಇತ್ಯಾದಿ.

ಕರ್ನಾಟಕ: ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ