ಆ್ಯಪ್ನಗರ

ಶೋಭಾ ವಿರುದ್ಧ ಸೋಮಣ್ಣ ಪರೋಕ್ಷ ಅಸಮಾಧಾನ

ಅರಸೀಕೆರೆ ...

Vijaya Karnataka 5 Apr 2018, 5:00 am
ಬೆಂಗಳೂರು: ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಪುತ್ರನನ್ನು ಕಣಕ್ಕೆ ಇಳಿಸುವ ಸಂಬಂಧ ಸ್ಥಳೀಯ ನಿಯೋಗದ ಜತೆಗೆ ಪರಿಷತ್‌ ಸದಸ್ಯ ವಿ.ಸೋಮಣ್ಣ ಬಿಜೆಪಿ ಕಚೇರಿಯಲ್ಲೇ ಸಭೆ ನಡೆಸಿದ್ದಾರೆ. ಮಾತ್ರವಲ್ಲ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Vijaya Karnataka Web somanna


ಬಿಜೆಪಿ ಕಚೇರಿಗೆ ಆಗಮಿಸಿದ ಅರಸೀಕೆರೆæ ಬಿಜೆಪಿ ಮುಖಂಡರು ಯಡಿಯೂರಪ್ಪ ಸಮ್ಮುಖದಲ್ಲೇ 'ಬೇಕೇ ಬೇಕು ಸೋಮಣ್ಣ ಬೇಕು ' ಎಂದು ಘೋಷಣೆ ಹಾಕಿದರೂ, ಇವರ ಜತೆ ಚರ್ಚಿಸಲು ಯಡಿಯೂರಪ್ಪ ಮುಂದಾಗಲಿಲ್ಲ. ಸೋಮಣ್ಣ ಕೂಡಾ ಮಾತನಾಡದೇ ಹೊರ ನಡೆದರು. ಆದರೆ ಕಾರ್ಯಕ್ರಮದ ಬಳಿಕ ಈ ನಿಯೋಗದ ಜತೆ ಸಭೆ ನಡೆಸಿ ''ನಾಳೆಯೇ ನನ್ನ ಮಗನನ್ನು ಅರಸೀಕೆರೆಗೆ ಕಳುಹಿಸಿಕೊಡುತ್ತೇನೆ. ಜೇನುಕಲ್ಲು ಸಿದ್ದೇಶ್ವರನ ಆಶೀರ್ವಾದ ನಮ್ಮ ಮೇಲಿದ್ದು, ಸಣ್ಣಪುಟ್ಟ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಂಡು ನನ್ನ ಮಗನನ್ನು ಗೆಲ್ಲಿಸಿಕೊಡಿ,'' ಎಂದು ಮನವಿ ಮಾಡಿದರು.

''ಅರಸೀಕೆರೆಯ ಹಾಲಿ ಶಾಸಕ ಬಲು ಕಿಲಾಡಿ. 10 ವರ್ಷದಲ್ಲಿ ಅವರು ಯಾರಿಗೂ ನಮಸ್ಕಾರ ಮಾಡಿರಲಿಲ್ಲವಂತೆ. ಈಗ ನಾವು ಬರುತ್ತೇವೆ ಎಂಬ ಸುದ್ದಿ ಕೇಳಿ ಎಲ್ಲರಿಗೂ ಕೈ ಮುಗಿಯುತ್ತಿದ್ದಾರೆ. ನಾನು ಕೂಡಾ ಮಾಜಿ ಪ್ರಧಾನಿ ದೇವೇಗೌಡರ ಗರಡಿಯಲ್ಲಿ ಪಳಗಿದವನೇ. ನನ್ನ ಮಗನನ್ನು ಗೆಲ್ಲಿಸಿಕೊಡಿ,'' ಎಂದು ಮನವಿ ಮಾಡಿದರು.

ಇದೇ ವೇಳೆ ಅವರು, ''ಮಲೆಮಹದೇಶ್ವರ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ನನ್ನ ಆಸೆಗೆ ನಮ್ಮ ಪಕ್ಷದವರೇ ಒಂದಿಬ್ಬರು ತಣ್ಣೀರು ಎರಚಿದರು'' ಎಂದು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ವಿ. ಸೋಮಣ್ಣ ಆಕ್ಷೇಪ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ