ಆ್ಯಪ್ನಗರ

ಹೊಸದಿಲ್ಲಿಯಲ್ಲಿ ವೈದಿಕ ರಿಸರ್ಚ್ ಇನ್ಸ್ಟಿಟ್ಯೂಟ್

ರಾಷ್ಟ್ರರಾಜಧಾನಿಯಲ್ಲಿ ವೈದಿಕ ರಿಸರ್ಚ್ ಇನ್ಸ್ಟಿಟ್ಯೂಟ್‌ ನಿರ್ಮಾಣವಾಗುತ್ತಿದ್ದು, ಜೂನ್‌ನಲ್ಲಿ ಉದ್ಘಾಟನೆಯಾಗಲಿದೆ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಗಳು ತಿಳಿಸಿದ್ದಾರೆ.

Vijaya Karnataka Web 1 Jun 2018, 3:27 pm
ಉಡುಪಿ: ರಾಷ್ಟ್ರರಾಜಧಾನಿಯಲ್ಲಿ ವೈದಿಕ ರಿಸರ್ಚ್ ಇನ್ಸ್ಟಿಟ್ಯೂಟ್‌ ನಿರ್ಮಾಣವಾಗುತ್ತಿದ್ದು, ಜೂನ್‌ನಲ್ಲಿ ಉದ್ಘಾಟನೆಯಾಗಲಿದೆ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಗಳು ತಿಳಿಸಿದ್ದಾರೆ.
Vijaya Karnataka Web Pejawar


ಪಿ. ವಿ. ನರಸಿಂಹ ರಾವ್, ಎಚ್. ಡಿ. ದೇವೇಗೌಡ ಪ್ರಧಾನಿಯಾಗಿದ್ದಾಗ ಕೊಟ್ಟ ಒಂದೂವರೆ ಎಕರೆ ಭೂಮಿಯಲ್ಲಿ ವೈದಿಕ ರಿಸರ್ಚ್ ಇನ್‍ಸ್ಟಿಟ್ಯೂಟ್ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು ಜೂನ್ ಅಂತ್ಯಕ್ಕೆ ಉದ್ಘಾಟನೆ ನಡೆಯಲಿದೆ. ಉತ್ತರ ಭಾರತದಲ್ಲಿ ಮಧ್ವ ವೇದಾಂತದ ಜತೆಗೆ ವೇದ, ಪುರಾಣ, ಭಗವದ್ಗೀತೆ, ಉಪನಿಷತ್ತನ್ನು ಹಿಂದಿಯಲ್ಲಿ ಪ್ರಚಾರ ಮಾಡಲು ಸಂಶೋಧನೆ, ಪ್ರಕಾಶನ ನಡೆಯಲಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.

ವೃಂದಾವನದಲ್ಲಿ ಅತಿಕ್ರಮಣ:
ಉತ್ತರ ಪ್ರದೇಶದ ಮಥುರಾ ಬಳಿಯ ವೃಂದಾವನದಲ್ಲಿ ಗುರು ಶ್ರೀವಿದ್ಯಾಮಾನ್ಯತೀರ್ಥರಿಗೆ ದಾನವಾಗಿ ಸಿಕ್ಕ ಒಂದೂವರೆ ಎಕರೆ ಜಾಗವನ್ನು ಪುರೋಹಿತರೊಬ್ಬರು ಟ್ರಸ್ಟೊಂದರ ಹೆಸರಲ್ಲಿ ಅತಿಕ್ರಮಣ ಮಾಡಿದ್ದಾರೆ. ನ್ಯಾಯಾಲಯದ ತೀರ್ಪಿನ ಹೊರತಾಗಿಯೂ ತೆರವಾಗಿಲ್ಲ. ಈ ವಿಚಾರವನ್ನು ಸಿಎಂ ಯೋಗಿ ಆದಿತ್ಯನಾಥ ಗಮನಕ್ಕೆ ತರಲಾಗಿದೆ. ಅಲ್ಲಿ ಆಶ್ರಮ, ಶಾಖಾ ಮಠ, ಗುರು ಶ್ರೀವಿದ್ಯಾಮಾನ್ಯತೀರ್ಥರ ಸ್ಮಾರಕ ನಿರ್ಮಾಣ ಉದ್ದೇಶವಿದೆ.

ಹಿಂದಿನ ಪೇಜಾವರ ಸ್ವಾಮೀಜಿಯಲ್ಲ!: ಸುದ್ದಿಗೋಷ್ಠಿಗೂ ಮೊದಲು ಇದು ಹಿಂದಿನ ಪೇಜಾವರ ಸ್ವಾಮೀಜಿಯಲ್ಲ, ಕೋಲು ಹಿಡಿದು ನಡೆವ ಮುದುಕ ಎಂದ ಶ್ರೀಪಾದರು ಕೊನೆಗೆ ನಾವು ಹೇಳಿದ್ದನ್ನೇ ಬರೆಯಿರಿ ಎಂದು ನಕ್ಕರು. ಬೆನ್ನು ಬಾಗುವ ಸಮಸ್ಯೆ ಹಿಂದಿನಿಂದಲೂ ಇತ್ತು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ