ಆ್ಯಪ್ನಗರ

ವೇದ, ಜ್ಯೋತಿಷ್ಯಕ್ಕೆ ವಿವಿಗಳ ಅನುಮೋದನೆ ಅಗತ್ಯ: ಡಾ. ಹೆಗ್ಗಡೆ

ವೈಜ್ಞಾನಿಕ ತಳಹದಿ ಹೊಂದಿರುವ ವೇದ ಶಾಸ್ತ್ರ , ಜೋತಿಷ್ಯ ಮತ್ತು ವಾಸ್ತು ಶಾಸ್ತ್ರಗಳಿಗೆ ವಿಶ್ವ ವಿದ್ಯಾಲಯಗಳ ಅನುಮೋದನೆ ಅಗತ್ಯವಿದೆ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

Vijaya Karnataka 4 Nov 2018, 5:00 am
ಕೃಷ್ಣರಾಜಪುರ: ವೈಜ್ಞಾನಿಕ ತಳಹದಿ ಹೊಂದಿರುವ ವೇದ ಶಾಸ್ತ್ರ , ಜೋತಿಷ್ಯ ಮತ್ತು ವಾಸ್ತು ಶಾಸ್ತ್ರಗಳಿಗೆ ವಿಶ್ವ ವಿದ್ಯಾಲಯಗಳ ಅನುಮೋದನೆ ಅಗತ್ಯವಿದೆ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
Vijaya Karnataka Web BRL-3KRP 2


ಕುಂದಲಹಳ್ಳಿ ಸಮೀಪವಿರುವ ಸಿಎಂಆರ್‌ ಕಾಲೇಜಿನ ಮೂರನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿ,''ಭಾರತದಲ್ಲಿ ವೇದ ಶಾಸ್ತ್ರ, ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರಗಳನ್ನು ಹೊರತುಪಡಿಸಿ ವಿವಿಧ ವಿಷಯಗಳಿಗೆ ವಿಶ್ವ ವಿದ್ಯಾಲಯದ ಅನುಮೋದನೆ ಇದೆ. ಹೀಗಾಗಿ ಸರಕಾರ ಅನುಮೋದನೆ ನೀಡಲು ಗಂಭೀರವಾಗಿ ಚಿಂತಿಸಬೇಕು,'' ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ದೈವಜ್ಞ ಕೆ.ಎನ್‌.ಸೋಮಯಾಜಿ ಅವರಿಗೆ ಸಿಎಂಆರ್‌ ವಿವಿ ವತಿಯಿಂದ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು. ಸೋಮಯಾಜಿ ಅವರು ಗೌರವ ಡಾಕ್ಟರೇಟ್‌ಅನ್ನು ಶೃಂಗೇರಿ ಶಾರದಾ ಪೀಠ, ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಸ್ವಾಮೀಜಿಗೆ ಅರ್ಪಿಸಿದರು.

ಸಿಎಂಆರ್‌ ವಿವಿ ಉಪಕುಲಪತಿ ಸಬಿತಾ ರಾಮಮೂರ್ತಿ, ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ