ಆ್ಯಪ್ನಗರ

ಚತುರ್ವೇದ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಸುಧಾಕರ ಚತುರ್ವೇದಿ ನಿಧನ

ಬಾಲ್ಯದಿಂದಲೇ ಅತಿ ಕ್ರಿಯಾಶೀಲ, ಚಟುವಟಿಕೆಯಿಂದಿದ್ದ ಇವರು, ಪ್ರತಿಭಾವಂತರಾಗಿದ್ದರು. ಚತುರ್ವೇದಿಯವರು ಹರಿದ್ವಾರದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು (ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ) ಅಧ್ಯಯನ ಮಾಡಿದ್ದರು.

Vijaya Karnataka Web 27 Feb 2020, 8:38 pm
ಬೆಂಗಳೂರು: ಚತುರ್ವೇದ ವಿದ್ವಾಂಸ, ಸ್ವಾತಂತ್ರ ಹೋರಾಟಗಾರ, ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಯಾಗಿದ್ದ ಸುಧಾಕರ್‌ ಚತುರ್ವೇದಿ ಅವರು ಬೆಂಗಳೂರಿನಲ್ಲಿ ಗುರುವಾರ ಮುಂಜಾನೆ ಕೊನೆಯುಸಿರೆಳೆದರು. ವಿಶೇಷವೆಂದರೆ ಇವರು 123 ವರ್ಷ ಜೀವಿಸಿದ್ದರು.
Vijaya Karnataka Web ಸುಧಾಕರ್‌ ಚತುರ್ವೇದಿ
ಸುಧಾಕರ್‌ ಚತುರ್ವೇದಿ


ಬ್ರಹ್ಮಚಾರಿಯಾಗಿದ್ದ ಇವರು ಜಯನಗರದಲ್ಲಿ ಮೊಮ್ಮಗಳೊಂದಿಗೆ ವಾಸವಾಗಿದ್ದರು. ಸಂಜೆ ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಿತು. ಜಲಿಯನ್‌ ವಾಲಾಬಾಗ್‌ ಘಟನೆ ವೇಳೆ ‘ಯಂಗ್‌ ಇಂಡಿಯಾ’ ಪತ್ರಿಕೆಯ ವರದಿಗಾರರಾಗಿ ಹತ್ಯಾಕಾಂಡದ ವರದಿ ಮಾಡಿದ್ದರು.

ದಾಖಲೆಗಳ ಪ್ರಕಾರ, 1897ರ ಏ.20ರಂದು ಬೆಂಗಳೂರಿನಲ್ಲಿಜನಿಸಿದ ಅವರು, 13ನೇ ವಯಸ್ಸಿನಲ್ಲಿಹರಿದ್ವಾರದಲ್ಲಿಗುರುಕುಲಕ್ಕೆ ಸೇರಿ ಶಿಕ್ಷಣ ಪಡೆದರು. ನಂತರ ಮಹಾತ್ಮ ಗಾಂಧೀಜಿ ಪರಿಚಯವಾಗಿ ನಿಕಟ ಸಂಪರ್ಕದಲ್ಲಿದ್ದರು. ಗಾಂಧೀಜಿ ಅವರಿಗೆ ಕನ್ನಡದಲ್ಲಿಸಹಿ ಮಾಡಲು ಹಾಗೂ ಕೆಲ ಪದಗಳನ್ನು ಮಾತನಾಡಲು ಕಲಿಸಿದ್ದರು.

ಗಾಂಧೀಜಿ ಅವರು ಪತ್ರ ಬರೆಯುತ್ತಿದ್ದ ಸಮಯದಲ್ಲಿ ಸಹಾಯ ಮಾಡುತ್ತಿದ್ದರು. ಗಾಂಧೀಜಿ ಅವರ ಒಡನಾಟದೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೂ ಧುಮುಕಿ ಸುಮಾರು 12 ವರ್ಷ ಸೆರೆವಾಸ ಅನುಭವಿಸಿದ್ದರು. ಕ್ರಾಂತಿಕಾರಿ ಮದನ್‌ಲಾಲ್‌ ಧಿಂಗ್ರಾ ಅವರು ಸುಧಾಕರ್‌ ಶಿಷ್ಯರಾಗಿದ್ದರು. ಕಾಂಗ್ರೆಸ್‌ನ ಹಲವು ಅಧಿವೇಶನಗಳಲ್ಲೂಪಾಲ್ಗೊಂಡು ಭಾಷಣ ಮಾಡಿದ್ದರು.

ಲಾಹೋರ್‌ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಸಂಸ್ಕೃತ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸುತ್ತಾ ಸಂಸ್ಕೃತ ಸಾಹಿತ್ಯದಲ್ಲಿ ಆಳವಾದ ಅಧ್ಯಯನ ಕೈಗೊಂಡಿದ್ದರು. ಸಾಹಿತಿ, ವಿದ್ವಾಂಸರಾಗಿಯೂ ಹೆಸರು ಮಾಡಿದ್ದ ಅವರು ಕನ್ನಡ, ಸಂಸ್ಕೃತ, ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಗಳಲ್ಲಿ 50 ಕೃತಿಗಳನ್ನು ರಚಿಸಿದ್ದಾರೆ.

ನಾಲ್ಕು ವೇದಗಳ ಕುರಿತು 20 ಸಂಪುಟಗಳನ್ನು ರಚಿಸಿದ್ದಾರೆ. ‘ವೇದ ತರಂಗ’ ಹಾಗೂ ‘ವೇದ ಪ್ರಕಾಶ’ ಎಂಬ ಮಾಸಪತ್ರಿಕೆಗಳಲ್ಲಿ ಮುಖ್ಯ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ