ಆ್ಯಪ್ನಗರ

ಗಗನಕ್ಕೇರಿದ ತರಕಾರಿ ಬೆಲೆಗೆ ಗ್ರಾಹಕರು ಕಂಗಾಲು: ಇಲ್ಲಿದೆ ದರಪಟ್ಟಿ

ಗ್ರಾಹಕರಿಗೆ ತರಕಾರಿಗಳ ಬೆಲೆ ಏರಿಕೆ ಬಿಸಿ ತಟ್ಟಿದೆ. ಪೆಟ್ರೋಲ್‌, ಡೀಸೆಲ್‌ ದರ ಮೂರು ವಾರದಲ್ಲಿ 12 ರೂ. ಏರಿಕೆಯಾಗಿರುವುದರಿಂದ ಸಾಗಾಟ ವೆಚ್ಚ ಹೆಚ್ಚಿದೆ. ರೈತರ ಜಾನುವಾರುಗಳಿಗೆ ಬೇಕಾಗುವ ಹಿಂಡಿ ಬೂಸವು ಪ್ರತಿ 49 ಕೆಜಿ ಮೂಟೆಗೆ 200 ರೂ. ಹೆಚ್ಚಾಗಿದೆ. ದರ ಏರಿಕೆಗೆ ಇದೂ ಒಂದು ಕಾರಣ ಎನ್ನಲಾಗುತ್ತಿದೆ.

Vijaya Karnataka Web 14 Jul 2020, 7:06 am
ನಾಗರಾಜು ಎ. ಚಿಕ್ಕಬಳ್ಳಾಪುರ
Vijaya Karnataka Web ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆ ಜನರಿಗೆ ತರಕಾರಿ ಮತ್ತು ದಿನಸಿ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿದೆ. 15ರಿಂದ 20 ರೂ.ಗೆ ದೊರೆಯುತ್ತಿದ ಒಂದು ಕಿಲೋ ಟೊಮೆಟೊ ದರ ವಾರದಿಂದೀಚೆಗೆ ಜಿಗಿಯುತ್ತಾ 60 ರೂ. ತಲುಪಿದೆ. ಜತೆಗೆ ಅಕ್ಕಿ, ಗೋಧಿ, ಅಡುಗೆ ಎಣ್ಣೆಗಳ ಬೆಲೆಗಳು ಜನರ ಕೈಸುಡುತ್ತಿವೆ.

ಪೆಟ್ರೋಲ್‌, ಡೀಸೆಲ್‌ ದರ ಮೂರು ವಾರದಲ್ಲಿ 12 ರೂ. ಏರಿಕೆಯಾಗಿರುವುದರಿಂದ ಸಾಗಾಟ ವೆಚ್ಚ ಹೆಚ್ಚಿದೆ. ರೈತರ ಜಾನುವಾರುಗಳಿಗೆ ಬೇಕಾಗುವ ಹಿಂಡಿ ಬೂಸವು ಪ್ರತಿ 49 ಕೆಜಿ ಮೂಟೆಗೆ 200 ರೂ. ಹೆಚ್ಚಾಗಿದೆ. ದರ ಏರಿಕೆಗೆ ಇದೂ ಒಂದು ಕಾರಣ ಎನ್ನಲಾಗುತ್ತಿದೆ.

ರೈತರಿಗೂ ಬರೆ
ಗ್ರಾಮೀಣ ಭಾಗದ ರೈತರಿಗೆ ತೈಲ ಬೆಲೆಯೇರಿಕೆ ಸದ್ಯ ತಲೆಬಿಸಿಯಾಗಿ ಕಾಡುತ್ತಿದೆ. ತರಕಾರಿ ಸೇರಿದಂತೆ ತಮ್ಮ ಬೆಳೆಗಳನ್ನು ಎಪಿಎಂಸಿ ಮಾರುಕಟ್ಟೆಗಳಿಗೆ ಸಾಗಾಟ ಮಾಡಬೇಕೆಂದರೆ ಕನಿಷ್ಠ 100ರಿಂದ 300ರೂ ಹೆಚ್ಚಿನ ಹಣ ನೀಡಬೇಕಿದೆ. ಇದರಿಂದಾಗಿ ತರಕಾರಿ ಸೇರಿದಂತೆ ಇತರ ವಸ್ತುಗಳ ಬೆಲೆ ಏರಿಕೆ ಅನಿವಾರ್ಯ ಎನ್ನುತ್ತಾರೆ ಚಿಕ್ಕಬಳ್ಳಾಪುರ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷಿತ್ರ್ಮನಾರಾಯಣ ರೆಡ್ಡಿ.

ಚಾಲಿ ಅಡಿಕೆ ಧಾರಣೆ ಏರಿಕೆ: ಮೂರೇ ತಿಂಗಳಲ್ಲಿ ದಾಖಲೆಯ 100 ರೂ. ಏರಿಕೆ

ಡಬಲ್‌ ಬಾಡಿಗೆ

ಗೋಧಿ, ಅಕ್ಕಿ ಮತ್ತಿತರ ವಸ್ತುಗಳನ್ನು ಇತರ ರಾಜ್ಯಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಕೆಲ ರಾಜ್ಯಗಳಿಂದ 15 ಸಾವಿರ ರೂ. ಬಾಡಿಗೆ ಪಡೆಯುವ ವಾಹನಗಳು ಈಗ ದುಪ್ಪಟ್ಟು ಕೇಳುತ್ತಿವೆ ಎನ್ನುತ್ತಾರೆ ದೊಡ್ಡಬಳ್ಳಾಪುರ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ರಘುರಾಂ.

ಕೆಲವು ತರಕಾರಿ ಅಗ್ಗ

ಈ ನಡುವೆ, ಈರುಳ್ಳಿ ಸೇರಿದಂತೆ ಕೆಲವು ವಸ್ತುಗಳ ಬೆಲೆ ಇಳಿದಿದೆ. ಈರುಳ್ಳಿ 10ರಿಂದ 16 ರೂ.ಗೆ ಸಿಗುತ್ತಿದ್ದರೆ, ಒಂದು ಹಂತದಲ್ಲಿ ಒಂದು ಕಟ್ಟಿಗೆ 50 ರೂ.ಗೆ ಏರಿದ್ದ ಕೊತ್ತಂಬರಿ ಈಗ 5-10 ರೂ.ಗೆ ಸಿಗುತ್ತಿದೆ. ಇದು ರೈತರಿಗೆ ಆತಂಕ ತಂದಿದೆ. ಹೊರರಾಜ್ಯದಿಂದ ಸರಕು ಬರುತ್ತಿರುವುದು ಇದಕ್ಕೆ ಕಾರಣ.

ಎಷ್ಟೆಷ್ಟು ಏರಿಕೆ?
ಪದಾರ್ಥಗಳು ಹಿಂದಿನ ದರ (ಕೆಜಿಗೆ) ಪ್ರಸ್ತುತ ದರ
ಟೊಮಾಟೊ 15ರಿಂದ 20 ರೂ. 55ರಿಂದ 66 ರೂ.
ಆಲೂಗಡ್ಡೆ 10ರಿಂದ 20 ರೂ. 40ರಿಂದ 45 ರೂ.
ಅಕ್ಕಿ (ಫೈನ್‌ಕ್ವಾಲಿಟಿ)50 ರೂ. 53 ರೂ.
ಅಡುಗೆ ಎಣ್ಣೆ 98 ರೂ. 106 ರೂ.
ಪಾಮಾಯಿಲ್‌ 72 ರೂ. 80 ರೂ.
ಕಡಲೇಬೇಳೆ 60 ರೂ. 64 ರೂ.
ಕಡಲೇಬೀಜ 96 ರೂ. 104 ರೂ.
ಕಡಲೇಕಾಳು 54 ರೂ. 62 ರೂ.

ಇತರ ವಸ್ತುಗಳಂತೆ ಕೃಷಿ ವಸ್ತುಗಳಿಗೆ ಯಾವುದೇ ಎಂಆರ್‌ಪಿ ದರ ಇರುವುದಿಲ್ಲ. ಸರಬರಾಜು ಮತ್ತು ಬೇಡಿಕೆಗನುಗುಣವಾಗಿ ಸಾರಿಗೆ ವೆಚ್ಚಗಳಿನುಸಾರವಾಗಿ ದರ ಏರಿಕೆಯಾಗುತ್ತದೆ.
ಸಿ.ಎಸ್‌ ಕರೀಗೌಡ, ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಕೃಷಿ ಮಾರಾಟ ಮಂಡಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ