ಆ್ಯಪ್ನಗರ

ಗುಡ್‌ ನ್ಯೂಸ್‌: ವಾಹನ ಖರೀದಿಸಿದ ಒಂದೆರಡು ತಾಸಿನಲ್ಲೇ ಸಿಗಲಿದೆ ನೋಂದಣಿ ಸಂಖ್ಯೆ

​​ಸಾರಿಗೆ ಇಲಾಖೆಯು ಶೀಘ್ರದಲ್ಲೇ ಡೀಲರ್‌ ಕೇಂದ್ರಿತ ನೋಂದಣಿ ಸೇವೆ (ಡಿಪಿಆರ್‌) ಅನುಷ್ಠಾನಗೊಳಿಸುತ್ತಿದೆ. ಇದು ಸಂಪೂರ್ಣ ಕಾಂಟ್ಯಾಕ್ಟ್ಲೆಸ್‌ ಮತ್ತು ಫೇಸ್‌ಲೆಸ್‌ ಆಗಿರಲಿದೆ. ಆನ್‌ಲೈನ್‌ನಲ್ಲಿ ನೋಂದಣಿ ಶುಲ್ಕ, ತೆರಿಗೆ ಪಾವತಿಸಬಹುದು.

Vijaya Karnataka Web 9 Apr 2022, 6:29 am
ಬೆಂಗಳೂರು: ಹೊಸದಾಗಿ ವಾಹನ ಖರೀದಿಸುವವರು ನೋಂದಣಿ ಸಂಖ್ಯೆ ಮತ್ತು ದಾಖಲೆಗಳಿಗಾಗಿ ಇನ್ನು ಮುಂದೆ ವಾರಗಟ್ಟಲೇ ಕಾಯಬೇಕಾಗಿಲ್ಲ. ವಾಹನ ಕೊಂಡುಕೊಂಡ ಒಂದೆರಡು ತಾಸಿನಲ್ಲೇ ನೋಂದಣಿ ಸಂಖ್ಯೆ ಒದಗಿಸುವ ವಿನೂತನ ವ್ಯವಸ್ಥೆಯನ್ನು ಸಾರಿಗೆ ಇಲಾಖೆಯು ಜಾರಿಗೆ ತರುತ್ತಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಸಾರಿಗೆ ಇಲಾಖೆಯು ಶೀಘ್ರದಲ್ಲೇ ಡೀಲರ್‌ ಕೇಂದ್ರಿತ ನೋಂದಣಿ ಸೇವೆ (ಡಿಪಿ ಆರ್‌) ಅನುಷ್ಠಾನಗೊಳಿಸುತ್ತಿದೆ. ಇದು ಸಂಪೂರ್ಣ ಕಾಂಟ್ಯಾಕ್ಟ್ಲೆಸ್‌ ಮತ್ತು ಫೇಸ್‌ಲೆಸ್‌ ಆಗಿರಲಿದೆ.

ಹಿಂದಿ ಬಳಸಿ ಎಂದು ಅಮಿತ್‌ ಶಾ ಹೇಳಿರುವುದು ಸಾಂಸ್ಕೃತಿಕ ಭಯೋತ್ಪಾದನೆ: ಸಿದ್ದರಾಮಯ್ಯ!

ಡೀಲರ್‌ಗಳೇ ಪರಿವಾಹನ್‌ ಪೋರ್ಟಲ್‌ನಲ್ಲಿ ವಾಹನಗಳಿಗೆ ಸಂಬಂಧಿಸಿದ ವಿಮೆ ಹಾಗೂ ಇತರೆ ದಾಖಲೆಗಳನ್ನು ಅಪ್‌ಲೋಡ್‌ ಮಾಡಲಿದ್ದಾರೆ. ಆನ್‌ಲೈನ್‌ನಲ್ಲಿ ನೋಂದಣಿ ಶುಲ್ಕ, ತೆರಿಗೆ ಪಾವತಿಸಬಹುದು. ತೆರಿಗೆ ಪಾವತಿಯಾಗುತ್ತಿದ್ದಂತೆಯೇ ನೋಂದಣಿ ಸಂಖ್ಯೆ ಸಿಗುತ್ತದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಹೊಟ್ಟೆಗೆ ಹಿಟ್ಟಿಲ್ಲ. ನೆತ್ತಿ ಮೇಲೊಂದು ಸೂರಿಲ್ಲ: ರಾಜ್ಯದ 39.21 ಲಕ್ಷ ಮಂದಿಗೆ ವಾಸಕ್ಕೆ ಮನೆಯೇ ಇಲ್ಲ!

ವಾಹನ ನೋಂದಣಿಯಾದ 2-3 ದಿನಗಳಲ್ಲಿ ಸಂಬಂಧಪಟ್ಟ ಎಲ್ಲ ದಾಖಲೆಗಳು ಮಾಲೀಕರಿಗೆ ದೊರಕಲಿವೆ. ಸದ್ಯದ ವ್ಯವಸ್ಥೆಯಲ್ಲಿ ವಾಹನಗಳ ನೋಂದಣಿಗೆ ಮೂರ್ನಾಲ್ಕು ದಿನ ಸಮಯ ತೆಗೆದುಕೊಳ್ಳಲಾಗುತ್ತಿದೆ. ಆರ್‌ಸಿ ಸೇರಿದಂತೆ ಇನ್ನಿತರೆ ದಾಖಲೆಗಳಿಗೆ ತಿಂಗಳುಗಟ್ಟಲೇ ಅಲೆದಾಡಿಸಲಾಗುತ್ತಿದೆ. ನೂತನ ವ್ಯವಸ್ಥೆ ಜಾರಿಯಿಂದ ಈ ಸಮಸ್ಯೆಗೆ ಕೂಡಲೇ ಅಂತ್ಯ ಹಾಡಲಾಗುವುದು ಎಂದು ಹೇಳಿದರು.

ಬೆಂಗಳೂರು ನಗರ ವಿವಿ ಘಟಿಕೋತ್ಸವ ಏ.11ಕ್ಕೆ

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ನಗರದ ಸೆಂಟ್ರಲ್‌ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏ.11ರ ಸೋಮವಾರ ನಡೆಯಲಿದೆ. ಬೆಳಗ್ಗೆ 10.30 ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ. ಕಸ್ತೂರಿರಂಗನ್‌ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್‌. ಅಶ್ವತ್ಥನಾರಾಯಣ ಹಾಗೂ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಅವರು ಭಾಗವಹಿಸಲಿದ್ದಾರೆ.

ಬೆಂಗಳೂರು ವಿವಿ ಘಟಿಕೋತ್ಸವ 29ಕ್ಕೆಬೆಂಗಳೂರು ವಿಶ್ವವಿದ್ಯಾಲಯದ 56 ನೇ ವಾರ್ಷಿಕ ಘಟಿಕೋತ್ಸವ ಏ. 29ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜರುಗಲಿದೆ ಎಂದು ಕುಲಪತಿ ಪ್ರೊ.ಕೆ.ಆರ್‌. ವೇಣುಗೋಪಾಲ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ