ಆ್ಯಪ್ನಗರ

ಕುಲಪತಿಗಳ ನೇಮಕಾತಿಯ ಶೋಧನಾ ಸಮಿತಿ ರದ್ದು

ಪ್ರತ್ಯೇಕ ನೇಮಕಾತಿ ಮಂಡಳಿ ಮೂಲಕ ನೇಮಕ: ಡಾಸಿಎನ್‌...

Vijaya Karnataka 11 Sep 2019, 5:00 am
ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಗೆ ಸಂಬಂಧಿಸಿದ 'ಶೋಧನಾ ಸಮಿತಿ'ಯನ್ನು ರದ್ದುಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಪ್ರಧಿಕಧಿಟಿಧಿಸಿಧಿದ್ದಾಧಿರೆ.
Vijaya Karnataka Web 3C65F0A9-2557-47F4-A1C1-A6BC009F1928


ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರಧಿತಿಧಿನಿಧಿಧಿಗಳೊಂದಿಗೆ ನಡೆಸಿದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, 'ಧಿ'ಕುಲಪತಿಗಳ ನೇಮಕಾತಿ ಸಂಬಂಧ ರಚಿಸುವ ಶೋಧನಾ ಸಮಿತಿಯ ಆಯ್ಕೆ ಬಗ್ಗೆ ಹಲವು ಆರೋಪಗಳು ಕೇಳಿ ಬಂದಿವೆ. ಆದ್ದರಿಂದ, ಈ ನೇಮಕಾತಿಯಲ್ಲಿ ಪಾರದರ್ಶಕತೆ ತರಲು ಪ್ರತ್ಯೇಕ ನೇಮಕಾತಿ ಮಂಡಳಿ ರಚಿಸಲಾಗುವುದು'ಧಿ' ಎಂದರು.

'ಧಿ'ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ತಿಳಿದಿಧಿದೆ. ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳು ಸಮರ್ಪಕವಾಗಿ ಆಡಳಿತ ನಡೆಸದೇ ಇರುವುದು, ಶೈಕ್ಷಣಿಕ ವ್ಯವಸ್ಥೆ ಮತ್ತು ಆಡಳಿತದ ಬಗ್ಗೆ ಸೂಕ್ತ ಗಮನಹರಿಸದೆ ಅನ್ಯ ಕೆಲಸಗಳಲ್ಲಿ ತೊಡಗಿರುವುದು ಕಂಡು ಬಂದಿದೆ. ಹಾಗಾಗಿ, ಇಂತಹ ಕುಲಪತಿಗಳನ್ನು ಆಯ್ಕೆ ಮಾಡುವ ಶೋಧನಾ ಸಮಿತಿಗಳು ಸಹ ಸಾರ್ವಜನಿಕರ ನಂಬಿಕೆ ಕಳೆದುಕೊಂಡಿವೆ. ಇನ್ನು ಮುಂದೆ ನೇಮಕಾತಿ ಮಂಡಳಿಯು ಅಭ್ಯರ್ಥಿಗಳನ್ನು ಸಮರ್ಪಕವಾಗಿ ಪರಿಶೀಲಿಸಿ ಹಾಗೂ ಸಂದರ್ಶನ ನಡೆಸಿ ಕುಲಪತಿಗಳನ್ನು ಆಯ್ಕೆ ಮಾಡಲಿಧಿದೆ. ಈ ಸಂಬಂಧ ರಾಜ್ಯ ವಿಶ್ವವಿದ್ಯಾಲಯಗಳ ಕಾಯಿದೆಗೆ ತಿದ್ದುಪಡಿ ತರಲಾಗುವುದುಧಿ'ಧಿ' ಎಂದು ತಿಳಿಸಿದರು.

ವಿಶ್ವವಿದ್ಯಾಲಯಗಧಿಳಧಿಲ್ಲಿಧಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ನಡೆಸಲು ಈ ಹಿಂದಿನ ಸರಕಾರ ಹೊರಡಿಸಿದ್ದ ಆದೇಶದಂತೆ ಪ್ರಕ್ರಿಯೆಗಳು ಮುಂದುವರಿಯಲಿವೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಧಿ'ಸದ್ಯ ಎಲ್ಲಾ ನೇಮಕಾತಿಗಳು ನಿಯಮಗಳ ಪ್ರಕಾರಧಿವೇ ನಡೆಯಲಿವೆ. ಆದರೆ, ಪಾರದರ್ಶಕತೆ ತರಲು ನಿಯಮ ಅಡ್ಡ ಬಂದಲ್ಲಿ ಅದನ್ನು ಬದಲು ಮಾಡಲು ಚಿಂತಿಸಲಾಗುವುದುಧಿ'ಧಿ' ಎಂದು ವಿವರಿಸಿದರು.

ಪ್ರಾಂಶುಪಾಲರ ಹುದ್ದೆಗಳ ಭರ್ತಿ:

'ಧಿ'ರಾಜ್ಯ ನಾನಾ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಉಳಿದಿರುವ ಪ್ರಾಂಶುಪಾಲರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಒಟ್ಟು 412 ಪದವಿ ಕಾಲೇಜುಗಳ ಪೈಕಿ 399 ಕಾಧಿಲೇಧಿಜುಧಿಗಧಿಳಲ್ಲಿ ಪ್ರಾಂಶುಪಾಲರ ಹುದ್ದೆಗಳು ಖಾಲಿ ಉಳಿದಿವೆ. ಈ ಹಿಂದಿನ ಸರಕಾರ ಒಟ್ಟು 310 ಪ್ರಾಂಶುಪಾಲರ ಹುದ್ದೆ ಭರ್ತಿಗೆ ಒಪ್ಪಿಗೆ ಸೂಚಿಸಿದೆ. ಹಾಗಾಗಿ, ಪ್ರಾಂಶುಪಾಲರ ಹುದ್ದೆಗಳ ಭರ್ತಿಗೆ ಶೀಘ್ರ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗುವುದು. ಜತೆಗೆ, ವಿಶ್ವವಿದ್ಯಾಲಯಗಳಲ್ಲಿ ಖಾಲಿಯಿರುವ ನಾಮ ನಿರ್ದೇಶಿತ ಸಿಂಡಿಕೇಟ್‌ ಸದಸ್ಯರ ನೇಮಕಾತಿ ಪ್ರಧಿಕ್ರಿಧಿಯೆಧಿಯನ್ನೂ ನಧಿಡೆಧಿಸಧಿಲಾಧಿಗುಧಿವುಧಿದುಧಿ'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ