ಆ್ಯಪ್ನಗರ

ಅಕ್ಟೋಬರ್‌ 14 ರಿಂದ 21ರ ವರೆಗೆ ಅಧಿವೇಶನ

ಅಕ್ಟೋಬರ್‌ನಲ್ಲಿರಾಜ್ಯ ಸರಕಾರ ಪೂರಕ ಬಜೆಟ್‌ ಮಂಡಿಸಲು ಉದ್ದೇಶಿಸಿದ್ದು, ಅಕ್ಟೋಬರ್‌ 14ರಿಂದ 21ರ ವರೆಗೆ ಬೆಂಗಳೂರಿನಲ್ಲೇ ವಿಧಾನಮಂಡಲ ಅಧಿವೇಶನ ...

Vijaya Karnataka 17 Sep 2019, 5:00 am
ಬೆಂಗಳೂರು: ಅಕ್ಟೋಬರ್‌ನಲ್ಲಿರಾಜ್ಯ ಸರಕಾರ ಪೂರಕ ಬಜೆಟ್‌ ಮಂಡಿಸಲು ಉದ್ದೇಶಿಸಿದ್ದು, ಅಕ್ಟೋಬರ್‌ 14ರಿಂದ 21ರ ವರೆಗೆ ಬೆಂಗಳೂರಿನಲ್ಲೇ ವಿಧಾನಮಂಡಲ ಅಧಿವೇಶನ ನಡೆಯಲಿದೆ.
Vijaya Karnataka Web VIDAN


ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಹಿರಿಯ ಸಚಿವರ ಸಭೆಯಲ್ಲಿಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಪ್ರವಾಹ ಪೀಡಿತವಾಗಿದ್ದು, ಅಧಿವೇಶನ ನಡೆಸಿದರೆ ಪರಿಹಾರ ಕಾರ್ಯಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಬೆಂಗಳೂರಿನಲ್ಲೇ ಅಧಿವೇಶನ ನಡೆಸಲಾಗುತ್ತದೆ. ಹೀಗಾಗಿ ಮುಂದಿನ ವರ್ಷದ ನವೆಂಬರ್‌ ವರೆಗೂ ಬೆಳಗಾವಿ ಸುವರ್ಣಸೌಧ ಸರಕಾರದ ಯಾವುದೇ ಚಟುವಟಿಕೆಗೂ ಬಳಕೆಯಾಗುವುದಿಲ್ಲ.

ಪೂರಕ ಬಜೆಟ್‌ ಮಂಡಿಸಲು ಯಡಿಯೂರಪ್ಪ ನಿರ್ಧರಿಸಿದ ಹಿನ್ನೆಲೆಯಲ್ಲಿ ಹೊಸ ಬಜೆಟ್‌ ನಿರೀಕ್ಷೆ ಹುಸಿಯಾಗಿದೆ. ಸೆ.18ರಂದು ನಡೆಯುವ ಸಂಪುಟ ಸಭೆಯಲ್ಲಿಈ ಬಗ್ಗೆ ಅಧಿಕೃತ ನಿರ್ಧಾರ ಪ್ರಕಟವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ