ಆ್ಯಪ್ನಗರ

ವಿಧಾನಸಭೆ ಕಾರ‍್ಯದರ್ಶಿ ಎಸ್‌. ಮೂರ್ತಿ ಅಮಾನತು: ವಿಶೇಷ ಮಂಡಳಿ ಸಭೆ ವಿವರ ಸಲ್ಲಿಸಲು ಸೂಚನೆ

ವಿಧಾನಸಭೆ ಕಾರ‍್ಯದರ್ಶಿಯಾಗಿದ್ದ ಎಸ್‌...

Vijaya Karnataka 20 Aug 2019, 5:00 am
ಬೆಂಗಳೂರು: ವಿಧಾನಸಭೆ ಕಾರ‍್ಯದರ್ಶಿಯಾಗಿದ್ದ ಎಸ್‌.ಮೂರ್ತಿ ಅಮಾನತು ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನೇತೃತ್ವದ ವಿಶೇಷ ಮಂಡಳಿ ಸಭೆಯ ನಡಾವಳಿ ಹಾಗೂ ಇನ್ನಿತರ ವಿವರಗಳನ್ನು ಒದಗಿಸುವಂತೆ ಹೈಕೋರ್ಟ್‌ ಸರಕಾರಕ್ಕೆ ನಿರ್ದೇಶನ ನೀಡಿತು.
Vijaya Karnataka Web VIDAN


ತಮ್ಮ ಅಮಾನತು ಆದೇಶಕ್ಕೆ ತಡೆ ನೀಡಲು ನಿರಾಕರಿಸಿರುವ ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಮೂರ್ತಿ ಅವರು ಸಲ್ಲಿಸಿರುವ ಮೇಲ್ಮನವಿ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಮತ್ತು ನ್ಯಾಯಮೂರ್ತಿ ಪಿ.ಎಂ.ನವಾಜ್‌ ಅವರಿದ್ದ ವಿಭಾಗೀಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತು.

ಕೆಲ ಕಾಲ ವಿಚಾರಣೆ ನಂತರ ನ್ಯಾಯಪೀಠ ನಿಯಮದಂತೆ ಸಿಎಂ ನೇತೃತ್ವದ ವಿಶೇಷ ಮಂಡಳಿ ಸಭೆ ನಡೆಸಿ ಅಮಾನತು ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಹಾಗಾಗಿ ಈ ವಿಷಯದಲ್ಲಿ ವಿಶೇಷ ಮಂಡಳಿ ಸಭೆ ಕರೆಯಲು ನೋಟಿಸ್‌ ನೀಡಿರುವುದು, ಸಭೆಯ ಅಜೆಂಡಾ ಪ್ರತಿ, ಸಭೆಯ ನಡಾವಳಿಯ ಪ್ರತಿ ಹಾಗೂ ಇತರ ವಿವರಗಳನ್ನು ಸೆ.4 ರೊಳಗೆ ನ್ಯಾಯಾಲಯಕ್ಕೆ ಒದಗಿಸಬೇಕು ಎಂದು ಸರಕಾರಿ ವಕೀಲ ತಾರಾನಾಥ ಪೂಜಾರಿ ಅವರಿಗೆ ಸೂಚನೆ ನೀಡಿ ವಿಚಾರಣೆಯನ್ನು ಸೆ.4ಕ್ಕೆ ಮುಂದೂಡಿತು.

ನ್ಯಾಯಪೀಠ, ವಿಶೇಷ ಮಂಡಳಿ ಆದೇಶವಿಲ್ಲದೆ ಸ್ಪೀಕರ್‌ ಹೇಗೆ ಅಮಾನತು ಆದೇಶ ಹೊರಡಿಸಿದರು, ಅವರಿಗೆ ಅಂತಹ ಅಧಿಕಾರವಿದೆಯೇ ಎಂದು ಸರಕಾರವನ್ನು ಪ್ರಶ್ನಿಸಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ನ್ಯಾಯವಾದಿ ಎ.ಎಸ್‌.ಪೊನ್ನಣ್ಣ, ''ಸರಕಾರ ನಿಯಮಬಾಹಿರವಾಗಿ ಅಮಾನತು ಆದೇಶ ಹೊರಡಿಸಿದೆ. ಅರ್ಜಿದಾರರ ಅಹವಾಲು ಕೂಡ ಆಲಿಸಿಲ್ಲ.ಹಾಗಾಗಿ ಅಮಾನತು ಆದೇಶವನ್ನು ರದ್ದುಗೊಳಿಸಬೇಕು,'' ಎಂದು ಕೋರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ