ಆ್ಯಪ್ನಗರ

ರಿಜ್ವಾನ್‌ ಸ್ಥಾನಕ್ಕೆ ಫೆ. 17ರಂದು ಉಪಚುನಾವಣೆ ನಿಗದಿ; ಸವದಿ, ಶಂಕರ್‌ ನಡುವೆ ಪೈಪೋಟಿ

ಯಾವುದೇ ಸದನದ ಸದಸ್ಯರಾಗದ ಸವದಿ ಅವರು ಆಗಸ್ಟ್‌ 26 ರಂದು ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿರುವುದರಿಂದ ಫೆಬ್ರವರಿ 26ರ ಒಳಗೆ ಮೇಲ್ಮನೆ ಸದಸ್ಯರಾದರೆ ಮಾತ್ರ ಸಚಿವ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯ.

Vijaya Karnataka 27 Jan 2020, 5:36 pm

ಬೆಂಗಳೂರು: ರಿಜ್ವಾನ್‌ ಅರ್ಷದ್‌ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್‌ನ ಸ್ಥಾನಕ್ಕೆ ಇದೇ ಫೆಬ್ರವರಿ 17ರಂದು ಉಪಚುನಾವಣೆ ನಡೆಯಲಿದೆ. ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ರಿಜ್ವಾನ್‌ ಅರ್ಷದ್‌ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮೇಲ್ಮನೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
Vijaya Karnataka Web laxman-savadi-r-shankar


ವಿಧಾನಸಭೆಯ ಸಂಖ್ಯಾ ಬಲದ ಆಧಾರದ ಮೇಲೆ ಬಿಜೆಪಿ ಈ ಸ್ಥಾನವನ್ನು ಸುಲಭವಾಗಿ ಗೆಲ್ಲಲಿದೆ. ಈ ಸದಸ್ಯ ಸ್ಥಾನದ ಅವಧಿ 2022ರ ಜೂನ್‌ವರೆಗೆ ಇರಲಿದೆ. ಉಪಚುನಾವಣೆ ಮೂಲಕ ಮೇಲ್ಮನೆ ಪ್ರವೇಶಿಸಲು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಮಾಜಿ ಸಚಿವ ಆರ್‌ ಶಂಕರ್‌ ನಡುವೆ ತೀವ್ರ ಪೈಪೋಟಿ ನಡೆದಿದೆ.

ಯಾವುದೇ ಸದನದ ಸದಸ್ಯರಾಗದ ಸವದಿ ಅವರು ಆಗಸ್ಟ್‌ 26 ರಂದು ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿರುವುದರಿಂದ ಫೆಬ್ರವರಿ 26ರ ಒಳಗೆ ಮೇಲ್ಮನೆ ಸದಸ್ಯರಾದರೆ ಮಾತ್ರ ಸಚಿವ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯ. ಹೀಗಾಗಿ ರಿಜ್ವಾನ್‌ ಆಯ್ಕೆಯಾದ ಬಳಿಕ ಲಕ್ಷ್ಮಣ ಸವದಿ ಹಾದಿ ಸುಗಮವೆಂದೇ ಹೇಳಲಾಗುತ್ತಿದೆ.

ರಿಜ್ವಾನ್‌ ಸ್ಥಾನಕ್ಕೆ ಸವದಿ - ಶಂಕರ್‌ ಪೈಪೋಟಿ; ಅದೃಷ್ಟ ಯಾರ ಪಾಲು?

ಈ ಮಧ್ಯೆ ರಾಣೆಬೆನ್ನೂರು ಕ್ಷೇತ್ರದ ಟಿಕೆಟ್‌ ತ್ಯಜಿಸಿರುವ ಮಾಜಿ ಸಚಿವ ಆರ್‌ ಶಂಕರ್‌ ಅವರನ್ನು ಮೇಲ್ಮನೆ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡಲಾಗುವುದು ಎಂದು ಸ್ವತಃ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಭರವಸೆ ನೀಡಿದ್ದರು. ಹೀಗಾಗಿ ಇವರಿಬ್ಬರಲ್ಲಿ ಯಾರು ವಿಧಾನ ಪರಿಷತ್‌ ಪ್ರವೇಶಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ