ಆ್ಯಪ್ನಗರ

ಮೇಲ್ಮನೆಯ 25 ಸ್ಥಾನಗಳಿಗೆ ಬಿರುಸಿನ ಮತದಾನ, ಶೇ.99.50ರಷ್ಟು ಹಕ್ಕು ಚಲಾವಣೆ, 14ಕ್ಕೆ ಮತ ಎಣಿಕೆ

​​ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಶಾಸಕರು, ಸಂಸದರು ಈ ಚುನಾವಣೆಯ ಮತದಾರರು. ಹಾಗಾಗಿ ಈ ಹಿಂದೆಲ್ಲ ಭಾರಿ ಪ್ರಚಾರದ ಅಬ್ಬರ ಇರುತ್ತಿರಲಿಲ್ಲ. ಆದರೆ, ಈ ಬಾರಿಯ ಚುನಾವಣಾ ಅಖಾಡದಲ್ಲಿ ಬಿರುಸು ಇತ್ತು.

Vijaya Karnataka 10 Dec 2021, 11:53 pm
ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್‌ಗೆ ನಡೆದ ಚುನಾವಣೆಗೆ ಶುಕ್ರವಾರ ರಾಜ್ಯಾದ್ಯಂತ ತುರುಸಿನ ಮತದಾನ ನಡೆದಿದೆ. ಒಟ್ಟಾರೆಯಾಗಿ 20 ಕ್ಷೇತ್ರಗಳ 25 ಸ್ಥಾನಗಳಿಗೆ
Vijaya Karnataka Web ಮತದಾನ
ಮತದಾನ


ನಡೆದ ಈ ಚುನಾವಣೆಯಲ್ಲಿ ಶೇ.99.50ರಷ್ಟು ಮತ ಚಲಾವಣೆಯಾಗಿದೆ. ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆದ ಈ ಚುನಾವಣೆ ಈ ಬಾರಿ ಹೈವೋಲ್ಟೇಜ್‌ ಕದನವಾಗಿ ಮಾರ್ಪಟ್ಟಿತ್ತು.

ಬೆಂಗಳೂರು ಗ್ರಾಮಾಂತರ: ಮುಗಿದ ಮತದಾನ, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ

ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಶಾಸಕರು, ಸಂಸದರು ಈ ಚುನಾವಣೆಯ ಮತದಾರರು. ಹಾಗಾಗಿ ಈ ಹಿಂದೆಲ್ಲ ಭಾರಿ ಪ್ರಚಾರದ ಅಬ್ಬರ ಇರುತ್ತಿರಲಿಲ್ಲ. ಆದರೆ, ಈ ಬಾರಿಯ ಚುನಾವಣಾ ಅಖಾಡದಲ್ಲಿ ಬಿರುಸು ಇತ್ತು. ಮತದಾರರ ವಿಶ್ವಾಸ ಗಳಿಸಲು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸಿದ್ದರು. ಕಾಂಚಾಣದ ಸದ್ದು ಜೋರಾಗಿ ಕೇಳಿ ಬಂದಿತ್ತು.

ಪ್ರಮುಖರಿಂದ ಮತದಾನ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ, ಜಗದೀಶ ಶೆಟ್ಟರ್‌, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತಿತರ ಪ್ರಮುಖರು ಮತದಾನದ ಹಕ್ಕು ಚಲಾಯಿಸಿದರು. ರಾಜ್ಯಾದ್ಯಂತ ಶಾಂತಿಯುತ ಮತದಾನ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಈ ಚುನಾವಣೆಯಲ್ಲಿ ಮತದಾನದ ಸಂದರ್ಭದಲ್ಲಿ ಗದ್ದಲ, ಗೋಜಲು ಉಂಟಾಗುವುದು ವಿರಳ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಈ ಬಾರಿ ಇಲ್ಲದಿರುವುದು ಕೊರತೆಯಾಗಿ ಕಂಡು ಬಂತು.

ಆರಂಭದಲ್ಲಿ ನಿರುತ್ಸಾಹ

ಬೆಳಗಿನ ಹೊತ್ತು ಬಹುತೇಕ ಕಡೆ ನಿರುತ್ಸಾಹವಿತ್ತು. ಹಾಗಾಗಿ ಚುನಾವಣಾ ಸಿಬ್ಬಂದಿಗೂ ಕಾಯ್ದು ಕಾಯ್ದು ಸುಸ್ತಾಗುವಂತಾಯಿತು. ಆದರೆ, ಮಧ್ಯಾಹ್ನದ ಬಳಿಕ ಮತದಾನದ ಒತ್ತಡ ಹೆಚ್ಚಾಗತೊಡಗಿತು. 20 ಕ್ಷೇತ್ರಗಳಲ್ಲೂ ಶೇ.99ಕ್ಕೂ ಹೆಚ್ಚು ಮತದಾನ ನಡೆಯಿತು. ಮತ ಚಲಾಯಿಸಿದವರು ಮತಗಟ್ಟೆಯ ಹೊರಿಗೆ ಬಂದು ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು.

ವೋಟಿಗೆ 1.20 ಲಕ್ಷ ರೂ. ನಡೆದಿದೆ ಎಂದರೆ ಏನರ್ಥ? ಎಂಎಲ್ಸಿ ಎಚ್‌. ವಿಶ್ವನಾಥ್‌ ಪ್ರಶ್ನೆ

ಡಿ.14ಕ್ಕೆ ಫಲಿತಾಂಶ

ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿ ಯಾರು ಎಂಬುದನ್ನು ಪ್ರಾಶಸ್ತ್ಯದ ಮತದ ಮೂಲಕ ಮತಪತ್ರದಲ್ಲಿ ಚಲಾವಣೆ ಮಾಡಿದ್ದು ಮತಗಳು ಈಗ ಮತಪೆಟ್ಟಿಗೆಯಲ್ಲಿ ಲಾಕ್‌ ಆಗಿವೆ. ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಯಾರಿಗೆ ಒಲಿದಿದ್ದಾರೆ, ಯಾರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿದ್ದಾರೆ ಎಂಬುದು ಡಿ.14 ರಂದು ಬಯಲಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ