ಬೆಂಗಳೂರು : ''ಹಿಂದೆ ವಿಧಾನಸೌಧದಲ್ಲಿ ಮನುಷ್ಯರಿದ್ದರು, ಇಂದು ಮನುಷ್ಯ ವೇಷದಲ್ಲಿ ನಾನಾ ತರಹದ ಜನರಿದ್ದಾರೆ'' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನÜಲ್ಲಿ ಮಂಗಳವಾರ ಮಾಜಿ ಸಚಿವ ಬಿ. ಸುಬ್ಬಯ್ಯ ಶೆಟ್ಟಿ ಅವರಿಗೆ 'ಶಾಂತವೇರಿ ಗೋಪಾಲಗೌಡ ಪ್ರಶಸ್ತಿ' ಪ್ರದಾನ ಮಾಡಿ ''ಆಗ ವಕೀಲರು, ಹೆಚ್ಚು ಕಲಿತವರು ರಾಜಕೀಯಕ್ಕೆ ಬರುತ್ತಿದ್ದರು. ಇಂದು ಎಲ್ಲರೂ ರಿಯಲ್ ಎಸ್ಟೇಟ್ನವರೇ ಆಗಿದ್ದಾರೆ'' ಎಂದು ನುಡಿದರು.
''ಶಾಂತವೇರಿ ಗೋಪಾಲಗೌಡರು ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿ ದೊಡ್ಡ ಮಾದರಿ. ಯಾವುದೇ ರೀತಿಯ ತಪ್ಪುಗಳನ್ನು ಅವರು ಸಹಿಸುತ್ತಿರಲಿಲ್ಲ,''ಎಂದರು.
ಬಿ. ಸುಬ್ಬಯ್ಯ ಶೆಟ್ಟಿ ಅವರಿಗೆ 'ಶಾಂತವೇರಿ ಗೋಪಾಲಗೌಡರ ಪ್ರಶಸ್ತಿ' ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿಯು ಕಂಚಿನ ಫಲಕ, ಪ್ರಶಸ್ತಿ ಪತ್ರ ಹಾಗೂ 25 ಸಾವಿರ ರೂ. ನಗದು ಒಳಗೊಂಡಿದೆ. ಹಿರಿಯ ಪತ್ರಕರ್ತ ರಾಜ ಶೈಲೇಂಶ್ಚಂದ್ರ ಗುಪ್ತ, ಸಾಹಿತಿ ಡಾ. ಇಂದಿರಾ ಹೆಗ್ಗಡೆ, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ಉಪಸ್ಥಿತರಿದ್ದರು.
ಅರಸು ಆಡಳಿತದ ಫಲ ಇಂದಿರಾಗಾಂಧಿ ಹೆಸರಿಗೆ
''ಅರಸು ತಂದ ಯೋಜನೆಗಳು ತಮ್ಮದು ಎಂದು ಜನರಿಗೆ ತಿಳಿಸುವಲ್ಲಿ ವಿಫಲರಾಗಿದ್ದರಿಂದ, ಆ ಅಭಿವೃದ್ಧಿ ಕಾರ್ಯಗಳೆಲ್ಲ ಇಂದಿರಾಗಾಂಧಿ ಮಾಡಿದ್ದೆಂದು ತಿಳಿದು ಜನರು ಅವರಿಗೆ ಮತ ಹಾಕಿದರು. ಹಾಗಾಗಿ ಅರಸು ಅವರು ಸೋಲಬೇಕಾಯಿತು'' ಎಂದು ಮಾಜಿ ಸಚಿವ ಬಿ. ಸುಬ್ಬಯ್ಯ ಶೆಟ್ಟಿ ಹೇಳಿದರು.
''ಶಾಂತವೇರಿ ಗೋಪಾಲಗೌಡರು ಗೌರವದ ಹೋರಾಟ ನಡೆಸಿದರು. ಅವರ ಭೂ ಸುಧಾರಣೆ ಕನಸು ನನ್ನ ಅಧಿಕಾರದಲ್ಲಿ ಈಡೇರಿಸಿದ್ದರ ಹೆಮ್ಮೆ ನನಗಿದೆ,''ಎಂದು ಸಂತಸ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನÜಲ್ಲಿ ಮಂಗಳವಾರ ಮಾಜಿ ಸಚಿವ ಬಿ. ಸುಬ್ಬಯ್ಯ ಶೆಟ್ಟಿ ಅವರಿಗೆ 'ಶಾಂತವೇರಿ ಗೋಪಾಲಗೌಡ ಪ್ರಶಸ್ತಿ' ಪ್ರದಾನ ಮಾಡಿ ''ಆಗ ವಕೀಲರು, ಹೆಚ್ಚು ಕಲಿತವರು ರಾಜಕೀಯಕ್ಕೆ ಬರುತ್ತಿದ್ದರು. ಇಂದು ಎಲ್ಲರೂ ರಿಯಲ್ ಎಸ್ಟೇಟ್ನವರೇ ಆಗಿದ್ದಾರೆ'' ಎಂದು ನುಡಿದರು.
''ಶಾಂತವೇರಿ ಗೋಪಾಲಗೌಡರು ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿ ದೊಡ್ಡ ಮಾದರಿ. ಯಾವುದೇ ರೀತಿಯ ತಪ್ಪುಗಳನ್ನು ಅವರು ಸಹಿಸುತ್ತಿರಲಿಲ್ಲ,''ಎಂದರು.
ಬಿ. ಸುಬ್ಬಯ್ಯ ಶೆಟ್ಟಿ ಅವರಿಗೆ 'ಶಾಂತವೇರಿ ಗೋಪಾಲಗೌಡರ ಪ್ರಶಸ್ತಿ' ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿಯು ಕಂಚಿನ ಫಲಕ, ಪ್ರಶಸ್ತಿ ಪತ್ರ ಹಾಗೂ 25 ಸಾವಿರ ರೂ. ನಗದು ಒಳಗೊಂಡಿದೆ. ಹಿರಿಯ ಪತ್ರಕರ್ತ ರಾಜ ಶೈಲೇಂಶ್ಚಂದ್ರ ಗುಪ್ತ, ಸಾಹಿತಿ ಡಾ. ಇಂದಿರಾ ಹೆಗ್ಗಡೆ, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ಉಪಸ್ಥಿತರಿದ್ದರು.
ಅರಸು ಆಡಳಿತದ ಫಲ ಇಂದಿರಾಗಾಂಧಿ ಹೆಸರಿಗೆ
''ಅರಸು ತಂದ ಯೋಜನೆಗಳು ತಮ್ಮದು ಎಂದು ಜನರಿಗೆ ತಿಳಿಸುವಲ್ಲಿ ವಿಫಲರಾಗಿದ್ದರಿಂದ, ಆ ಅಭಿವೃದ್ಧಿ ಕಾರ್ಯಗಳೆಲ್ಲ ಇಂದಿರಾಗಾಂಧಿ ಮಾಡಿದ್ದೆಂದು ತಿಳಿದು ಜನರು ಅವರಿಗೆ ಮತ ಹಾಕಿದರು. ಹಾಗಾಗಿ ಅರಸು ಅವರು ಸೋಲಬೇಕಾಯಿತು'' ಎಂದು ಮಾಜಿ ಸಚಿವ ಬಿ. ಸುಬ್ಬಯ್ಯ ಶೆಟ್ಟಿ ಹೇಳಿದರು.
''ಶಾಂತವೇರಿ ಗೋಪಾಲಗೌಡರು ಗೌರವದ ಹೋರಾಟ ನಡೆಸಿದರು. ಅವರ ಭೂ ಸುಧಾರಣೆ ಕನಸು ನನ್ನ ಅಧಿಕಾರದಲ್ಲಿ ಈಡೇರಿಸಿದ್ದರ ಹೆಮ್ಮೆ ನನಗಿದೆ,''ಎಂದು ಸಂತಸ ವ್ಯಕ್ತಪಡಿಸಿದರು.