ಆ್ಯಪ್ನಗರ

ವೈವಿಧ್ಯಮಯ ಕಲೆಗಳಿಗೆ, ಕಲಾವಿದರಿಗೆ ಮಹಾ ವೇದಿಕೆಯಾದ 'ವಿಕ ಕನ್ನಡ ಹಬ್ಬ'

ಬೆಳಗ್ಗಿನಿಂದಲೇ ವೀರಗಾಸೆ, ಸೋಮನ ಕುಣಿತ, ಡೊಳ್ಳು ಕುಣಿತ, ಮರಕಾಲ ಕುಣಿತ, ಕಂಸಾಳೆ ನೃತ್ಯ, ನಂದಿಧ್ವಜ ಕುಣಿತ, ಕೇರಳದ ಗೊಂಬೆಗಳ ಕುಣಿತ ಮೊದಲಾದ ದೇಸೀ ಕಲಾ ತಂಡಗಳು ಕನ್ನಡ ಹಬ್ಬದಲ್ಲಿ ನೆರೆದಿದ್ದ ಜನರಿಗೆ ಮನರಂಜನೆ ನೀಡಿದವು.

Vijaya Karnataka 7 Dec 2019, 7:12 pm

ಬೆಂಗಳೂರು: ವಿಜಯ ಕರ್ನಾಟಕ ದಿನಪತ್ರಿಕೆಯು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ 'ಕನ್ನಡ ಹಬ್ಬ'ವು ನಾಡಿನ ಕಲೆಗಳಿಗೆ, ಕಲಾವಿದರಿಗೆ ಮಹಾ ವೇದಿಯಾಯಿತು. ಬೆಂಗಳೂರಿನಲ್ಲಿ ನಾಡು-ನುಡಿಯ ವಿಭಿನ್ನ ಸಂಸ್ಕೃತಿಗಳ ಅನಾವರಣಕ್ಕೆ ಕಾರಣವಾಯಿತು.
Vijaya Karnataka Web VK Kannada Habba 02


ಬೆಳಗ್ಗಿನಿಂದಲೇ ವೀರಗಾಸೆ, ಸೋಮನ ಕುಣಿತ, ಡೊಳ್ಳು ಕುಣಿತ, ಮರಕಾಲ ಕುಣಿತ, ಕಂಸಾಳೆ ನೃತ್ಯ, ನಂದಿಧ್ವಜ ಕುಣಿತ, ಕೇರಳದ ಗೊಂಬೆಗಳ ಕುಣಿತ ಮೊದಲಾದ ದೇಸೀ ಕಲಾ ತಂಡಗಳು ಕನ್ನಡ ಹಬ್ಬದಲ್ಲಿ ನೆರೆದಿದ್ದ ಜನರಿಗೆ ಮನರಂಜನೆ ನೀಡಿದವು. ನಟಿ-ಗಾಯಕಿ ಶರಣ್ಯ ಅವರು ತಮ್ಮ ಸ್ವರಮಾಧುರ್ಯದಿಂದ ಮನಸೋರೆಗೊಳಿಸಿದರು.

ನಗೆಗಡಲಲ್ಲಿ ತೇಲಿದ ಬೆಂಗಳೂರು ಜನತೆ

ಖ್ಯಾತ ಹಾಸ್ಯ ಕಲಾವಿದರಾದ ಎಂಎಸ್‌ ನರಸಿಂಹಮೂರ್ತಿ, ವೈವಿ ಗುಂಡೂರಾವ್‌ ಮತ್ತು ಇಂದುಮತಿ ಸಾಲಿಮಠ್‌ ಅವರು ಹಾಸ್ಯ ಚಟಾಕಿ ಹಾರಿಸುವ ಮೂಲಕ ಇಡೀ ಸಭೆ ನಗೆಗಡಲಲ್ಲಿ ತೇಲುವಂತೆ ಮಾಡಿದರು.

ವಿಕ ಕನ್ನಡ ಗೋಷ್ಠಿಯಲ್ಲಿ ನಾಡು- ನುಡಿಯ ರಕ್ಷಣೆಗೆ ಒಕ್ಕೊರಲ ನಿರ್ಣಯ

ಚಿಣ್ಣರನ್ನು ಬೆರಗುಗೊಳಿಸಿದ ಮ್ಯಾಜಿಕ್‌ ಷೋ

ಅಂತಾರಾಷ್ಟೀಯ ಖ್ಯಾತಿಯ ಉದಯ್‌ ಜಾದೂಗಾರ್‌ ಅವರ ಮ್ಯಾಜಿಕ್‌ ಶೋ ನೆರೆದಿದ್ದ ಚಿಣ್ಣರಾದಿಯಾಗಿ ಸಮಸ್ತರನ್ನೂ ಬೆರಗಾಗುವಂತೆ ಮಾಡಿತು. ಹಲವಾರು ಆಶ್ಚರ್ಯಕರ ಜಾದೂಗಳನ್ನು ಪ್ರದರ್ಶಿಸುವ ಮೂಲಕ ಉದಯ್‌ ವಿಕ ಕನ್ನಡ ಹಬ್ಬದಲ್ಲಿ ನೆರೆದಿದ್ದ ಜನಸಾಗರದ ಮನಗೆದ್ದರು. ಮಾತನಾಡುವ ಗೊಂಬೆಯ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸಿದರು.

ಬಾಲ ಕಲಾವಿದರಿಂದ ಯಕ್ಷಗಾನ ಪ್ರದರ್ಶನ

ಕರ್ನಾಟಕ ಕಲಾದರ್ಶಿನಿ ಸಂಸ್ಥೆಯ ಬಾಲ ಕಲಾವಿದರು ಕರಾವಳಿಯ ಗಂಡು ಕಲೆಯಾದ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿದರು. ಶ್ರೀನಿವಾಸ ಸಸ್ತಾನ ನಿರ್ದೇಶನದಲ್ಲಿ 'ಶ್ರೀ ರಾಮ ದರ್ಶನ' ಕಥಾ ಪ್ರಸಂಗವನ್ನು ಪ್ರದರ್ಶಿಸಲಾಯಿತು.

'ವಿಜಯ ಕರ್ನಾಟಕ' ಕನ್ನಡ ಹಬ್ಬಕ್ಕೆ ಅದ್ದೂರಿ ಚಾಲನೆ : ನಾಡು-ನುಡಿ ಸಂಸ್ಕೃತಿಯ ಅನಾವರಣ

ಬೆರಳ್ಗೆ ಕೊರಳ್‌ ಮನೋಜ್ಞ ಅಭಿನಯ

ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರದ ಕಲಾವಿದರು 'ಬೆರಳ್‌ಗೆ ಕೊರಳ್‌' ನಾಟಕವನ್ನು ಮನೋಜ್ಞವಾಗಿ ಅಭಿನಯಿಸಿದರು.

ಕನ್ನಡ ಹಬ್ಬದ ಇತರೆ ಆಕರ್ಷಣೆಗಳು

ಖ್ಯಾತ ಪುಸ್ತಕ ಮಳಿಗೆಗಳಿಂದ ರಿಯಾಯಿತಿ ದರದಲ್ಲಿ ಪುಸ್ತಕ, ಸಿಡಿಗಳು ಮಾರಾಟಗೊಂಡವು. ಕರಾವಳಿ, ಉತ್ತರ ಕರ್ನಾಟಕ, ಮಲೆನಾಡು ಮತ್ತು ಬೆಂಗಳೂರು-ಮೈಸೂರು ಭಾಗದ ಆಯ್ದ ವಿಶೇಷ ಆಹಾರ ಮಳಿಗಳಲ್ಲಿ ಬೆಂಗಳೂರಿಗರು ರುಚಿ ರುಚಿ ಖಾದ್ಯಗಳನ್ನು ಸವಿದರು. ಕರ್ನಾಟಕ ಚಿತ್ರಕಲಾ ಪರಿಷತ್‌ ಸಹಯೋಗದಲ್ಲಿ ಕಲಾಕೃತಿಗಳ ಮಾರಾಟ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ